Quantcast
Channel: VijayKarnataka
Viewing all articles
Browse latest Browse all 6795

ನಿರ್ದೇಶಕನಾದ ಕೋಮಲ್

$
0
0

ಈವರೆಗೂ ನೀವು ಕೋಮಲ್‌ರನ್ನು ಹೀರೋ ಆಗಿ ನೋಡಿದ್ದೀರಿ. ಇನ್ಮುಂದೆ ನಿರ್ದೇಶಕನಾಗಿ ನೋಡುವ ಅವಕಾಶ ಸಿಗಲಿದೆ. ಇದು ಕುತೂಹಲಕ್ಕೂ ಕಾರಣವಾಗಿದೆ.

- ಶರಣು ಹುಲ್ಲೂರು

ಹಾಸ್ಯ ಪಾತ್ರಗಳ ಮೂಲಕ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೋಮಲ್, ಈವರೆಗೂ ನಾನಾ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಿರ್ದೇಶಕರಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹೀಗಾಗಿ ಈ ಹೊಸ ಚಿತ್ರವು ಹಲವು ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ.

ಹಾಗಂತ ಕೋಮಲ್ ಇಲ್ಲಿ ನಿರ್ದೇಶನ ಮಾಡುತ್ತಿಲ್ಲ. ನಿರ್ದೇಶಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಚಿತ್ರಕ್ಕೆ ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ ಎಂದು ಹೆಸರಿಡಲಾಗಿದೆ. ಸಿನಿಮಾದ ಶೀರ್ಷಿಕೆ ಹೀಗಿದ್ದರೂ, ಪುಟ್ಟಣ್ಣ ಕಣಗಾಲ್‌ರಿಗೂ ಮತ್ತು ಈ ಪುಟ್ಟಣ್ಣನಿಗೂ ಸಂಬಂಧವಿಲ್ಲ ಅನ್ನುವುದು ನಿರ್ದೇಶಕರು ಮಾತು.

ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಸಿನಿಮಾದ ಮತ್ತೊಂದು ಕುತೂಹಲದ ಅಂಶವೆಂದರೆ ಕೋಮಲ್ ಜೊತೆ ಇದೇ ಮೊದಲ ಬಾರಿಗೆ ಪ್ರಿಯಾಮಣಿ ನಟಿಸುತ್ತಿದ್ದಾರೆ. ಅಲ್ಲದೇ, ರವಿಶಂಕರ್, ಸಾಧುಕೋಕಿಲ, ದೊಡ್ಡಣ್ಣ, ಪೂಜಾ ಗಾಂಧಿ ಹೀಗೆ ಬಹುದೊಡ್ಡ ತಾರಾಬಳಗವೇ ಇದೆ.

'ಸಿನಿಮಾದ ಕತೆಯೇ ವಿಶೇಷವಾಗಿದೆ. ಹಾರರ್ ಕಾಮಿಡಿ ಇಲ್ಲಿದೆ. ಉಳಿದಂತೆ ಸಿನಿಮಾದ ಬಗ್ಗೆ ಏನೂ ಹೇಳಲಾರೆ' ಎನ್ನುವುದು ನಿರ್ದೇಶಕರ ಮಾತು. ಇದು ತೆಲುಗಿನ ಹಿಟ್ ಸಿನಿಮಾ ಗೀತಾಂಜಲಿಯ ರೀಮೇಕ್ ಚಿತ್ರ ಎಂದು ಹೇಳಲಾಗುತ್ತಿದೆ. ಆದರೆ, ನಿರ್ದೇಶಕರು ಈ ಕುರಿತು ಏನೂ ಹೇಳಿಲ್ಲ. ಸದ್ದಿಲ್ಲದೇ ಚಿತ್ರೀಕರಣವನ್ನು ಮುಗಿಸಿರುವ ನಿರ್ದೇಶಕರು, ಹಾಡುಗಳ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.

'ಈವರೆಗೂ ವಿಭಿನ್ನ ಪಾತ್ರಗಳನ್ನು ಮಾಡುತ್ತಲೇ ಬಂದಿದ್ದೇನೆ. ಹೊಸ ಪಾತ್ರಗಳನ್ನು ನಿರ್ವಹಿಸುವುದು ಅಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನಿರ್ದೇಶಕರು ಈ ಕತೆಯನ್ನು ಹೇಳಿದಾಗ ತುಂಬಾ ಇಷ್ಟ ಪಟ್ಟೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ' ಅನ್ನುವುದು ಕೋಮಲ್ ಮಾತು.

ಅರ್ಜುನ್ ಜನ್ಯರ ಚಿತ್ರಕ್ಕೆ ಸಂಗೀತ ನೀಡಿದ್ದು, ಶ್ಯಾಮ್ ಪ್ರಸಾದ್ ಅವರ ಸಿನಿಮಾಟೋಗ್ರಫಿಯಲ್ಲಿ ಚಿತ್ರ ಮೂಡಿಬಂದಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>