Quantcast
Channel: VijayKarnataka
Viewing all articles
Browse latest Browse all 6795

ಸಾವರ್ಕರ್ ದೇಶದ್ರೋಹಿ: ಕಾಂಗ್ರೆಸ್ ಟ್ವೀಟ್!

$
0
0

ಹೊಸದಿಲ್ಲಿ: ಬಲಪಂಥೀಯ ನಾಯಕ ದಿ. ವಿ ಡಿ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕಾಂಗ್ರೆಸ್ ಬಣ್ಣಿಸಿದೆ. ಭಾರತೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಲಾಗಿದೆ.

ಹುತಾತ್ಮರ ದಿನದ ಅಂಗವಾಗಿ ಮಾಡಲಾಗಿರುವ ಈ ಟ್ವಿಟರ್ ಪೋಸ್ಟ್‌ನಲ್ಲಿ, ಭಗತ್‌ಸಿಂಗ್ ಮತ್ತು ಸಾವರ್ಕರ್ ಫೋಟೋಗಳನ್ನು ಅಕ್ಕಪಕ್ಕದಲ್ಲಿರಿಸಿ, ಒಬ್ಬರಿಗೆ ಹುತಾತ್ಮ ಹಾಗೂ ಮತ್ತೊಬ್ಬರಿಗೆ ದೇಶದ್ರೋಹಿ ಹಣೆಪಟ್ಟಿ ನೀಡಲಾಗಿದೆ.

''ಭಗತ್ ಸಿಂಗ್ ಬ್ರಿಟೀಷರಿಂದ ಬಿಡುಗಡೆಗಾಗಿ ಯುದ್ಧ ಸಾರಿದರೆ, ಸಾವರ್ಕರ್ ಗುಲಾಮರಂತೆ ದಯಾಭಿಕ್ಷೆ ಬೇಡಿದರು,'' ಎಂದು ಕಾಂಗ್ರೆಸ್ ಟೀಕಿಸಿದೆ.

ಜತೆಗೆ, ಸಾವರ್ಕರ್ ಮತ್ತು ಭಗತ್ ಸಿಂಗ್, ಜೈಲಿನಿಂದ ಬ್ರಿಟಿಷ್ ಅಧಿಕಾರಿಗಳಿಗೆ ಬರೆದ ಕೊನೆಯ ಅರ್ಜಿಯ ಭಾಗಗಳನ್ನು ಪ್ರಕಟಿಸಲಾಗಿದೆ.

1931ರಲ್ಲಿ ಲಾಹೋರ್ ಜೈಲಿನಿಂದ ಭಗತ್ ಸಿಂಗ್ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಬರೆದ ಅರ್ಜಿಯಲ್ಲಿ ''ಬ್ರಿಟಿಷ್ ರಾಷ್ಟ್ರ ಮತ್ತು ಭಾರತ ರಾಷ್ಟ್ರದ ನಡುವೆ ಯುದ್ಧದ ಸ್ಥಿತಿಯಿದೆ. ಈ ಯುದ್ಧದಲ್ಲಿ ಪಾಲ್ಗೊಂಡಿದ್ದರಿಂದ ನಾವು ಯುದ್ಧ ಕೈದಿಗಳು,'' ಎಂದಿದ್ದಾರೆ.

ಆದರೆ, 1913ರಲ್ಲಿ ಅಂಡಮಾನ್‌ನ ಸೆಲ್ಯುಲಾರ್ ಜೈಲಿನಿಂದ ಬರೆದ ಅರ್ಜಿಯಲ್ಲಿ ಸಾವರ್ಕರ್, ''ಸರಕಾರ ದಯೆ ತೋರಿ ನನ್ನನ್ನು ಬಿಡುಗಡೆ ಮಾಡುವುದಾದರೆ, ನಾನು ಇಂಗ್ಲಿಷ್ ಸರಕಾರಕ್ಕೆ ನಿಷ್ಠೆಯಿಂದ ಇರುತ್ತೇನೆ,'' ಎಂದು ವಿನಂತಿಸಿರುವುದಾಗಿ ಕಾಂಗ್ರೆಸ್ ಉಲ್ಲೇಖಿಸಿದೆ.

ಬ್ರಿಟಿಷರು ಮಾರ್ಚ್ 23, 1931 ರಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ದುರಂತ ನೆನಪಿನಲ್ಲಿ ಹುತಾತ್ಮರ ದಿನಾಚರಣೆಯ ಆಚರಿಸಲಾಗುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>