Quantcast
Channel: VijayKarnataka
Viewing all articles
Browse latest Browse all 6795

ಸಣ್ಣ ಉಳಿತಾಯ ದರ ಮತ್ತಷ್ಟು ಕಡಿತ ಸಂಭವ

$
0
0

* ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ದರ ಪರಿಷ್ಕರಣೆ ಹಿನ್ನೆಲೆ

* ಪರಿಷ್ಕೃತ ದರ ಏಪ್ರಿಲ್-ಜೂನ್‌ಗೆ ಅನ್ವಯ

* ಆರ್‌ಬಿಐನಿಂದ ಬಡ್ಡಿ ದರ ಇಳಿಕೆ ನಿರೀಕ್ಷೆ

* ಹೀಗಾಗಿ ಸಣ್ಣ ಉಳಿತಾಯ ದರ ಮತ್ತಷ್ಟು ಇಳಿಕೆ ಸಂಭವ

ಮುಂಬಯಿ: ಕೇಂದ್ರ ಸರಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಆದರೆ ಮೂರು ತಿಂಗಳಿನ ನಂತರ ಮತ್ತೊಮ್ಮೆ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹಣಕಸು ತಜ್ಞರು ಎಚ್ಚರಿಸಿದ್ದಾರೆ.

ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳೊಗೊಮ್ಮೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದೆ. ಅದರ ಪ್ರಕಾರ ಹೊಸ ದರಗಳು 2016ರ ಏಪ್ರಿಲ್-ಜೂನ್ ತನಕ ಮಾತ್ರ ಅನ್ವಯವಾಗುತ್ತದೆ.

''ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ನಿರ್ಧರಿಸುವ ಸೂತ್ರವನ್ನು ಬದಲಿಸಿಲ್ಲ. ಆದರೆ ವರ್ಷಕ್ಕೊಮ್ಮೆ ನಿಗದಿಪಡಿಸುವ ಬದಲಿಗೆ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುವುದಾಗಿ ತಿಳಿಸಿದೆ. ಆರ್‌ಬಿಐ ಡಿಸೆಂಬರ್ ವೇಳೆಗೆ ಶೇ.0.50ರಿದ ಶೇ.0.75ರ ತನಕ ಬಡ್ಡಿ ದರವನ್ನು ತಗ್ಗಿಸುವ ಸಾಧ್ಯತೆ ಇದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಮಾರುಕಟ್ಟೆ ದರವನ್ನು ಅವಲಂಬಿಸಿರುವುದರಿಂದ, ಆರ್‌ಬಿಐ ಬಡ್ಡಿ ದರ ತಗ್ಗಿಸಿದರೆ, ಇವುಗಳ ದರಗಳೂ ತಗ್ಗಲಿವೆ'' ಎನ್ನುತ್ತಾರೆ ಎಕ್ಸಿಸ್ ಮ್ಯೂಚುವಲ್ ಫಂಡ್‌ನ ನಿಶ್ಚಿತ ಆದಾಯ ವಿಭಾಗದ ಮುಖ್ಯಸ್ಥ ಆರ್.ಶಿವಕುಮಾರ್.

ಸಣ್ಣ ಉಳಿತಾಯ ಯೋಜನೆಗಳಲ್ಲಿನ ಉನ್ನತ ಮಟ್ಟದ ಬಡ್ಡಿ ದರಗಳ ಪರಿಣಾಮ ಬ್ಯಾಂಕ್‌ಗಳಿಗೆ ಸಾಲ ಮತ್ತು ಠೇವಣಿ ಬಡ್ಡಿ ದರವನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತ್ರೈಮಾಸಿಕ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ದರ ಪರಿಷ್ಕರಣೆಗೆ ಸರಕಾರ ಮುಂದಾಗಿದೆ ಎನ್ನುತ್ತಾರೆ ಅವರು.

ಮಾರ್ಚ್ 31ರೊಳಗೆ ಹೂಡಿಕೆ ಸೂಕ್ತ:

ಹಿರಿಯ ನಾಗರಿಕರ ಉಳಿತಾಯ ಯೋಜನೆ, ಎನ್‌ಎಸ್‌ಸಿ, ಕಿಸಾನ್ ವಿಕಾಸ ಪತ್ರ ಇತ್ಯಾದಿಗಳಲ್ಲಿ ಪರಿಷ್ಕೃತ ಬಡ್ಡಿ ದರಗಳು ಹೊಸ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತವೆ. ಹೀಗಾಗಿ ಮಾರ್ಚ್ 31ರೊಳಗೆ ಇವುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎನ್ತ್ತುಾರೆ ತಜ್ಞರು. ಹೀಗಿದ್ದರೂ ಪಿಪಿಎಫ್‌ಗಳಲ್ಲಿ ಹೂಡಿಕೆ ಮಾಡುವವರು ಆತುರಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ಇದರಲ್ಲಿ ಬಡ್ಡಿ ದರ ಹೊಸ ಹೂಡಿಕೆಗೆ ಮಾತ್ರವಲ್ಲದೆ, ಹೂಡಿಕೆಯಾಗಿರುವ ಇಡೀ ಮೊತ್ತಕ್ಕೆ ಅನ್ವಯವಾಗುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>