Quantcast
Channel: VijayKarnataka
Viewing all articles
Browse latest Browse all 6795

ಸಂಜನಾ ಡಾನ್ಸ್ ಲೀಲೆ

$
0
0



ಸಂಜನಾ ಇತ್ತೀಚೆಗಂತೂ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುವುದು ಹೆಚ್ಚಾಗಿತ್ತು. ಆದರೆ ಇಲ್ಲಿ ಅವರು ಫ್ಯಾಮಿಲಿ ಗೆಟ್ ಟುಗೆದರ್ ಸೀಕ್ವೆನ್ಸ್‌ನಲ್ಲಿ 45 ಕಲಾವಿದರ ಜತೆ ಕುಣಿಯುತ್ತಾರೆ. ಐಟಂ ಸಾಂಗ್ ಅಲ್ಲದ ಹಾಡಿನಲ್ಲಿ ಇದೇ ಮೊದಲ ಬಾರಿಗೆ ಅವರು ಕುಣಿದು ಅಚ್ಚರಿ ಮೂಡಿಸಿದ್ದಾರೆ.

- ಎಚ್. ಮಹೇಶ್

ಚಿರಂಜೀವಿ ಸರ್ಜಾ ಅಭಿನಯದ ರಾಮ್‌ಲೀಲಾ ಚಿತ್ರದಲ್ಲಿ 45 ಜನ ಕಲಾವಿದರು ಅಭಿನಯಿಸಿದ್ದಾರೆ. ಆ ಕಲಾವಿದರ ಪಟ್ಟಿಯಲ್ಲಿ ಇದುವರೆಗೂ ಸಂಜನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಆ ಗುಟ್ಟು ರಟ್ಟಾಗಿದೆ. ಸಂಜನಾ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜತೆಗೆ ಐಟಂ ಸಾಂಗ್ ಅಲ್ಲದ ಹಾಡಿನಲ್ಲಿ ಕುಣಿದಿದ್ದಾರೆ.

ಸಂಜನಾ ಇತ್ತೀಚೆಗಂತೂ ಐಟಂ ಸಾಂಗ್‌ಗಳಲ್ಲಿ ನಟಿಸುವುದು ಹೆಚ್ಚಾಗಿತ್ತು. ಆದರೆ ಇಲ್ಲಿ ಅವರು ಫ್ಯಾಮಿಲಿ ಗೆಟ್ ಟುಗೆದರ್ ಸೀಕ್ವೆನ್ಸ್‌ನಲ್ಲಿ 45 ಕಲಾವಿದರ ಜತೆ ಕುಣಿಯುತ್ತಾರೆ. ಚಿತ್ರದ ನಿರ್ದೇಶಕ ವಿಜಯ್ ಕಿರಣ್ ಅವರನ್ನು ಈ ಬಗ್ಗೆ ಕೇಳಿದಾಗ, 'ಸಂಜನಾ ಪಾತ್ರ ಚಿತ್ರದಲ್ಲಿ ಸರ್‌ಪ್ರ್ರೈೆಸ್ ಎಲಿಮೆಂಟ್. ಅವರು ಈ ಮೊದಲು ಐಟಂ ಸಾಂಗ್‌ನಲ್ಲಿ ಕುಣಿದಿರಬಹುದು. ಆದರೆ ಇಲ್ಲಿ ಗ್ಲಾಮ್ ಡ್ರೆಸ್ ಧರಿಸದೇ ಫ್ಯಾಮಿಲಿ ಜತೆ ಡಾನ್ಸ್ ಮಾಡುತ್ತಾರೆ. ಕುತೂಹಲ ಇರಲೆಂದು ಇದನ್ನು ಗುಟ್ಟಾಗಿಯೇ ಇಟ್ಟಿದ್ದೆವು' ಎಂದು ವಿವರಣೆ ಕೊಡುತ್ತಾರೆ.

ಜಾರ್ಜಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡುವಾಗ ನಡೆದ ಅನಾಹುತವನ್ನು ನೆನಪಿಸಿಕೊಳ್ಳಲು ನಿರ್ದೇಶಕ ವಿಜಯ್ ಕಿರಣ್ ಮರೆಯುವುದಿಲ್ಲ. 'ಜಾರ್ಜಿಯಾದಲ್ಲಿ ಶೂಟಿಂಗ್ ನಡೆಯುವಾಗ ಪ್ರವಾಹ ಬಂತು. ಪ್ರಾಣಿ, ಪಕ್ಷಿಗಳು ರಸ್ತೆಗೆ ಬಂದು ಜನರಿಗೆ ತೊಂದರೆ ಕೊಟ್ಟವು. ನಾವು ಅದೇ ಸಮಯದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದೆವು. ಆಗ ಬೆಂಗಳೂರಿನಲ್ಲಿದ್ದ ನಮ್ಮ ಚಿತ್ರತಂಡ ಹಾಗೂ ತಾಂತ್ರಿಕ ವಿಭಾಗದವರು ಜಾರ್ಜಿಯಾಗೆ ಬರಲು ಹಿಂದೇಟು ಹಾಕಿದರು. ನಾವು ಅವರಿಗೆ ಪ್ರವಾಹಕ್ಕೆ ತುತ್ತಾದ ಸ್ಥಳ ಬೇರೆ, ನಾವು ಶೂಟಿಂಗ್ ಮಾಡುತ್ತಿರುವ ಸ್ಥಳ ಬೇರೆ ಎಂದು ಸುಳ್ಳು ಹೇಳಿ ಕರೆಸಿಕೊಂಡೆವು. ಆದರೆ ಅವರಿಗೆ ಇಲ್ಲಿಗೆ ಬಂದಾಗ ಗೊತ್ತಾಗಿದ್ದು, ಪ್ರವಾಹಕ್ಕೆ ಸಿಲುಕಿರುವ ಪ್ರದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ ಎಂದು. ನಂತರ ನಾವೆಲ್ಲ ಭಯದಲ್ಲೇ ಶೂಟಿಂಗ್ ಮಾಡಿದೆವು. ಶೂಟಿಂಗ್ ಸ್ಥಳದಲ್ಲಿ ಪ್ರಾಣಿಗಳು ಬರುತ್ತಿದ್ದವು. ನಾವು ಪ್ರಾಣ ಭಯದಿಂದ ಆ ಸ್ಥಳ ಬಿಟ್ಟು ಓಡಿಹೋಗಿದ್ದೂ ಇದೆ' ಎಂದು ಅಲ್ಲಿನ ಅನುಭವ ಹಂಚಿಕೊಂಡರು ವಿಜಯ್.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>