Quantcast
Channel: VijayKarnataka
Viewing all articles
Browse latest Browse all 6795

ಫ್ಯಾನ್ಸ್ ಕ್ರೇಜ್‌ನ ಪರಾಕಾಷ್ಠೆ

$
0
0

* ಪದ್ಮಾ ಶಿವಮೊಗ್ಗ
ದಕ್ಷಿಣ ಭಾರತದಲ್ಲಿ ಚಿತ್ರನಟರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು . ತಮ್ಮ ನೆಚ್ಚಿನ ನಾಯಕರ ಬಗ್ಗೆ ಫ್ಯಾನ್ಸ್‌ಗಿರುವ ಕ್ರೇಜ್ ಅಷ್ಟಿಷ್ಟಲ್ಲ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿಯಂತೂ ಇದರ ತೀವ್ರತೆ ಇನ್ನೂ ಜಾಸ್ತಿ. ಹಾಗೇನೇ ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಇದಕ್ಕೆ ಬರವೇನಿಲ್ಲ.

ಡಾ. ರಾಜ್‌ಕುಮಾರ್ ಕಾಲದಲ್ಲಿ ಒಂದಿಬ್ಬರು ನಟರಿಗೆ ಮಾತ್ರ ಫ್ಯಾನ್ಸ್ ಕ್ಲಬ್‌ಗಳಿದ್ದವು. ಇಂದಿಗೂ ಆ ಸಂಘಗಳು ಸಕ್ರಿಯವಾಗಿವೆ. ನಂತರ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್‌ರ ಅಭಿಮಾನಿಗಳ ಸಂಘಗಳು ಪ್ರಾರಂಭವಾದವು. ವಿಷ್ಣು ಸಾಹಸ ಸಿಂಹನಾದರೆ, ಅಂಬರೀಷ್ ರೆಬೆಲ್ ಸ್ಟಾರ್ ಆದರು. ಶಂಕರನಾಗ್ ಅವರಿಗೆ ಆಟೋ ರಾಜ ಪಟ್ಟ ಸೇರಿಕೊಂಡಿತು. ಡಾ.ರಾಜ್ ಅಂದಿಗೂ ಇಂದಿಗೂ ಎಂದೆಂದಿಗೂ ವರನಟರೆ.

ಆದರೆ, ಇತ್ತೀಚೆಗೆ ಕೆಲವು ಹೊಸ ನಟರ ಅಭಿಮಾನಿಗಳ ಪ್ರೀತಿ ಅತಿರೇಕಕ್ಕೆ ಹೋಗಿ ಹುಚ್ಚುತನ ಅನ್ನಿಸಿಕೊಂಡಿದ್ದೂ ಇದೆ. ಇಂದು ಸ್ಟಾರ್ ನಟರ ಅಭಿಮಾನಿಗಳು ಸಮಾಜ ಸೇವೆಯಲ್ಲಿ ಮಾತ್ರ ಅಭಿಮಾನ ತೋರುತ್ತಿಲ್ಲ. ಬೇರೆ ನಟರನ್ನು ದ್ವೇಷಿಸುವ ಮಟ್ಟಕ್ಕೆ ಹೋಗಿದೆ. ಉಪ್ಪಿ-ಜಗ್ಗೇಶ್, ದರ್ಶನ್-ಶಿವರಾಜ್‌ಕುಮಾರ್, ಸುದೀಪ್-ಶಿವರಾಜ್‌ಕುಮಾರ್, ಪುನೀತ್- ದರ್ಶನ್ ಹೀಗೆ ಇಬ್ಬರು ಸ್ಟಾರ್‌ಗಳ ಫ್ಯಾನ್ಸ್ ನಡುವೆ ಅಂತರ್ಜಾಲ ವಾರ್ ನಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಪ್ರೇರಣೆ ಸಿನಿಮಾಗಳಲ್ಲಿ ನಟರ ಡೈಲಾಗ್ ವಾರ್ ಕೂಡ ಕಾರಣ ಎನ್ನಬಹುದು. ಇನ್ನು ಮೆಚ್ಚಿನ ನಟ ಏನೇ ತಪ್ಪು ಮಾಡಿದರೂ ಬೆಂಬಲಿಸಿ, ಊಟ ನಿದ್ರೆ ಬಿಟ್ಟು ಅವರಿಗಾಗಿ ಕಾಯುವುದೂ ಇದೆ. ನಟನ ವೈಯಕ್ತಿಕ ಬದುಕಿನಲ್ಲಿ ಏನೇ ನಡೆದರೂ ತಮ್ಮ ಕುಟುಂಬದಲ್ಲೆ ನಡೆದಂತೆ ನರಳುವ ಅಭಿಮಾನಿಗಳಿಗೇನೂ ಕಡಿಮೆ ಇಲ್ಲ.

ಉಪೇಂದ್ರ ಅವರ ಎ ಚಿತ್ರದಿಂದಲೇ ಉಪ್ಪಿಸಂ ಕಾಣಿಸಿಕೊಂಡಿತು. ಈ ನಟನ ಪ್ರತಿ ಚಿತ್ರದಲ್ಲೂ ವಿಚಿತ್ರವಾಗಿದ್ದ ಅವರ ವೇಷಭೂಷಣಗಳನ್ನು, ಅವರ ಸಂಭಾಷಣೆಗಳನ್ನು ಹುಚ್ಚರಂತೆ ಅನುಸರಿಸಿದ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಉಪ್ಪಿ -2 ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅತಿ ಎತ್ತರದ ಉಪೇಂದ್ರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲು ಹೋಗಿ ಅಭಿಮಾನಿಯೊಬ್ಬ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದೂ ಇದೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ಪ್ರೀತಿ ಇನ್ನೊಂದು ರೀತಿಯದು. ಇವರ ಅಭಿಮಾನ ನಟರ ವೈಯಕ್ತಿಕ ಬದುಕಿಗೂ ಪ್ರವೇಶ ಮಾಡಿ ಅಭಿಮಾನಿಗಳು ಇವರ ಬೆನ್ನಿಗೆ ನಿಂತರು.

ದಿಢೀರ್ ಅಂತ ಅಭಿಮಾನಿಗಳನ್ನು ಪಡೆದ ನಟ ವೆಂಕಟ್. ತಮ್ಮನ್ನು ಹುಚ್ಚ ವೆಂಕಟ್ ಎಂದೇ ಕರೆದುಕೊಂಡ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಅಪಾರ ಅಭಿಮಾನಿಗಳನ್ನು ಹುಟ್ಟು ಹಾಕಿದರು. ವೆಂಕಟ್, ಸುದೀಪ್‌ರನ್ನು ಏಕವಚನದಲ್ಲಿ ಮಾತಾಡಿಸಿದ್ದಕ್ಕೆ ಫ್ಯಾನ್ಸ್‌ಗಳ ನಡುವೆಯೇ ವಾಗ್ಯುದ್ಧ ಶುರುವಾಗಿಬಿಟ್ಟಿತ್ತು. ಗಣೇಶ್ ಅಭಿಮಾನಿಗಳು ಇಂದಿಗೂ 'ಹೃದಯಾನ ಪರಪರ ಅಂತ ಕೆರ‌್ಕೊಳ್ಳಂಗಾಗುತ್ತೆ' ಅನ್ನೋದನ್ನು ಬಿಟ್ಟಿಲ್ಲ. ಇವರ ಅಭಿನಯದ ಸ್ಟೈಲ್ ಕಿಂಗ್ ಚಿತ್ರದ ಟ್ಯಾಟೂ ಎದೆಯ ಮೇಲೆ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ.

ಇದೀಗ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ನಾಲ್ಕು ವಾಹನಗಳಲ್ಲಿ ಅವರ ಕಟೌಟ್‌ಗಳನ್ನು ಇಟ್ಟುಕೊಂಡು ಮೈಸೂರಿನಿಂದ ಮೆರವಣಿಗೆ ಹೊರಟಿದ್ದಾರೆ ಅಭಿಮಾನಿಗಳು. ನಾಲ್ಕು ದಿನಗಳ ಮೆರವಣಿಗೆ, ಪುನೀತ್ ಹುಟ್ಟುಹಬ್ಬದಂದು ಬೆಂಗಳೂರು ತಲುಪಲಿದೆ.

ಪ್ರಜ್ವಲ್ ದೇವರಾಜ್, ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ಜೋಗಿ ಪ್ರೇಮ್, ಅಜಯ್ ರಾವ್ ಶ್ರೀಮುರಳಿ ಹೀಗೆ ಫ್ಯಾನ್ಸ್ ಕ್ಲಬ್ ಇರುವ ನಟರು ಅನೇಕರಿದ್ದಾರೆ. ನಟಿಯರಲ್ಲಿ ರಾಗಿಣಿಗೆ ಅತಿ ಹೆಚ್ಚು ಅಭಿಮಾನಿಗಳಿದ್ದು, ಸಂಘ ಕೂಡಾ ಮಾಡಿಕೊಂಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>