ಅಲ್ಲದೆ ಈ ಬಗ್ಗೆ ಭಾರತದ ಡೆಪ್ಯುಟಿ ಹೈ ಕಮಿಷನರ್ಗೆ ಪಾಕ್ ಬುಧವಾರ ಸಮನ್ಸ್ ಜಾರಿ ಮಾಡಿದೆ. ಮಂಗಳವಾರವಷ್ಟೇ ಭಾರತ, ಪಾಕ್ನ ಏಳು ರಾಜತಾಂತ್ರಿಕರಲ್ಲಿ ಐವರಿಗೆ ಐಎಸ್ಐ ತಜೆ ಸಂಬಂಧ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕೋಲ್ಕೊತಾಗೆ ತೆರಳಲು ಅವಕಾಶ ನಿರಾಕರಿಸಿತ್ತು.
ಪಾಕ್ನ ವಿದೇಶಾಂಗ್ ಕಚೇರಿ ಡೆಪ್ಯುಟಿ ಹೈ ಕಮಿಷನರ್ ಜೆ.ಪಿ.ಸಿಂಗ್ ಅವರಿಗೆ ಈ ಕುರಿತು ಸಮನ್ಸ್ ಜಾರಿ ಮಾಡಿದ್ದು, ''ನಮ್ಮ ರಾಜತಾಂತ್ರಿಕರಿಗೆ ಕೋಲ್ಕೊತಾಗೆ ತೆರಳಲು ಅವಕಾಶ ಕಲ್ಪಿಸಬೇಕು. ಅವರು ಪಾಕ್ ತಂಡವನ್ನು ಬೆಂಬಲಿಸಲು ತೆರಳುತ್ತಿದ್ದಾರೆ,'' ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದಿಲ್ಲಿಯಲ್ಲಿರುವ ಪಾಕ್ ಹೈ ಕಮಿಷನರ್, ''ಇದು ದುರದೃಷ್ಟಕರ. ವಿಶ್ವಕಪ್ಗೆ ಆತಿಥ್ಯ ವಹಿಸಿರುವ ಭಾರತ ತನ್ನ ಜವಾಬ್ದಾರಿಗಳನ್ನು ಪೂರೈಸಲು ನಿರಾಕರಿಸುತ್ತಿದೆ ಮತ್ತು ವಿನಾ ಕಾರಣ ಅಡಚಣೆಗಳನ್ನು ಸೃಷ್ಟಿಸುತ್ತಿದೆ,'' ಎಂದು ಅಸಮಾಧಾನ ಹೊರ ಹಾಕಿದೆ.
ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮಾ.19ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೋಲ್ಕೊತಾಗೆ ತೆರಳಲು ದಿಲ್ಲಿಯಲ್ಲಿ ನೆಲೆಸಿರುವ ತನ್ನ ಐವರು ರಾಜತಾಂತ್ರಿಕರಿಗೆ ಅವಕಾಶ ನಿರಾಕರಿಸಿರುವ ಭಾರತದ ಕ್ರಮಕ್ಕೆ ಪಾಕ್ ಅಸಮಾಧಾನ ವ್ಯಕ್ತಪಡಿಸಿದೆ.