Quantcast
Channel: VijayKarnataka
Viewing all articles
Browse latest Browse all 6795

ಕಾಂಗ್ರೆಸ್ ಮಡಿಲಿಗೆ ಜಮಖಂಡಿ ನಗರಸಭೆ

$
0
0

ಜಮಖಂಡಿ : ಜಮಖಂಡಿ ನಗರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರಾಜು ಪಿಸಾಳ, ಉಪಾಧ್ಯಕ್ಷರಾಗಿ ಶೈರಾಬಾನು ಅಪರಾಧ ಆಯ್ಕೆಯಾದರು.

ಸೋಮವಾರ ಮಧ್ಯಾಹ್ನ 1ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವಿಜಯಕುಮಾರ ಕಡಕೋಳ ಮತ್ತು ಕಾಂಗ್ರೆಸ್‌ನಿಂದ ರಾಜು ಪಿಸಾಳ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶ್ರೀನಿವಾಸ ಅಪರಂಜಿ, ಸುರೇಶ ಕಡಕೋಳ ಮತ್ತು ಕಾಂಗ್ರೆಸ್‌ನಿಂದ ಶೈರಾಬಾನು ಅಫರಾದ ನಾಮಪತ್ರ ಸಲ್ಲಿಸಿದರು. ಸಂಜೆ 4ಕ್ಕೆ ಬಿಜೆಪಿಯ ಸುರೇಶ ಕಡಕೋಳ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದರು. ನಂತರ ಎರಡೂ ಸ್ಥಾನಗಳಿಗೆ ನೇರಾನೇರ ಸ್ಪರ್ಧೆ ನಡೆಯಿತು.

ನಗರಸಭೆ ಒಟ್ಟು 31 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಬಿಜೆಪಿಯ ಬಸೀರ್ ಅಹ್ಮದ ರಬಕವಿ ನಿಧನದ ಹಿನ್ನೆಲೆಯಲ್ಲಿ 30 ಸದಸ್ಯರು ಮತ್ತು ಶಾಸಕರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಕೈ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ರಾಜು ಪಿಸಾಳ 19 ಮತಗಳನ್ನು ಪಡೆದು ಆಯ್ಕೆಯಾದರು. ಬಿಜೆಪಿಯ 12 ಮತಗಳ ಪಡೆದ ವಿಜಯಕುಮಾರ ಕಡಕೋಳ ಸೋಲನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶೈರಾಬಾನು ಅಪರಾದ 19 ಮತ ಪಡೆದು ಆಯ್ಕೆಯಾದರೆ, ಬಿಜೆಪಿಯ ಶ್ರೀನಿವಾಸ ಅಪರಂಜಿ 12 ಮತ ಪಡೆದ ಸೋಲು ಅನುಭವಿಸಿದರು. ನಂತರ ಶಾಸಕ ಸಿದ್ದು ನ್ಯಾಮಗೌಡ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಎಸಿ ಮುಲ್ಲೈ ಮುಹಿಲನ್ ಎಂ.ಪಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಇದ್ದರು.

ವಿಜಯೋತ್ಸವ : ಜಮಖಂಡಿ ನಗರಸಭೆ ಕಾಂಗ್ರೆಸ್ ಮಡಿಲಿಗೆ ಬಂದ ಕಾರಣ ಕಾರ್ಯಕರ್ತರು ಮತ್ತು ಶಾಸಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಡೋಲು ಬಾರಿಸುತ್ತ, ಗುಲಾಲು ಎರಚುತ್ತ, ನೂತನ ಅಧ್ಯಕ್ಷ ರಾಜು ಪಿಸಾಳ ಅವರನ್ನು ವಾಹನ ಮೇಲೆ ಕೂಡ್ರಿಸಿಕೊಂಡು ಜಮಖಂಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.








Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>