Quantcast
Channel: VijayKarnataka
Viewing all articles
Browse latest Browse all 6795

ಬಿಜೆಪಿಗೆ ತಕ್ಕ ಪಾಠ: ಕಾಶಪ್ಪನವರ

$
0
0

ಇಳಕಲ್: ವರ್ಷದ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ, ನಮ್ಮ ಪಕ್ಷದ 6 ಸದಸ್ಯರೊಂದಿಗೆ ಹಿಂಬಾಗಿಲಿನಿಂದ ಅಧಿಕಾರ ಪಡೆದ ಬಿಜೆಪಿಗೆ ನಗರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯುವ ಮೂಲಕ ತಕ್ಕ ಪಾಠ ಕಲಿಸಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಗೆ ತಾಕತ್ತಿದ್ದರೆ ನಗರಸಭೆಯನ್ನು ಮುಂಭಾಗಿಲಿನಿಂದ ಪ್ರವೇಶ ಮಾಡಲಿ ಎಂದು ಸವಾಲು ಹಾಕಿದ ಕಾಶಪ್ಪನವರ, ಬಿಜೆಪಿಯಿಂದ ಆಯ್ಕೆಗೊಂಡ ನಗರಸಭೆ ಸದಸ್ಯರು ಆ ಪಕ್ಷದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ಸದಸ್ಯೆ ಕಿಡದೂರ ಶಾಂತಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೂ ಹಾಜರಾಗಲಿಲ್ಲ . ಹೀಗಾಗಿ ಬಿಜೆಪಿಯಿಂದ ಆಯ್ಕೆಯಾದ 5 ಸದಸ್ಯರು ನಮ್ಮೊಂದಿಗೆ ಬಂದಿದ್ದಾರೆ. ನಗರಸಭೆಯಲ್ಲಿ ನಿರೀಕ್ಷಿತ ಅಧಿಕಾರ ಹಿಡಿದ ನಮ್ಮ ಪಕ್ಷ ಇನ್ನುಳಿದ 30 ತಿಂಗಳ ಅಧಿಕಾರ ಅವಧಿಯನ್ನು ತಲಾ 10 ತಿಂಗಳಂತೆ ಹಂಚಿ, ಎಲ್ಲ ಜಾತಿ, ಜನಾಂಗಕ್ಕೂ ಪ್ರಾತಿನಿಧ್ಯ ಕೊಡುವ ಯೋಚನೆ ಇದೆ ಎಂದರು. ವಿಪ್ ಉಲ್ಲಂಘಿಸಿದ ಇಬ್ಬರು ಕಾಂಗ್ರೆಸ್ ಸದಸ್ಯರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಅವರ ಸದಸ್ಯತ್ವ ರದ್ದುಗೊಳಿಸಲು ಶಿಫಾರಸು ಮಾಡಲಾಗುವುದು. ಉಳಿದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ ಸುರಪೂರ, ಜಿಪಂ ಮಾಜಿ ಅಧ್ಯಕ್ಷ ಹನಮಂತಪ್ಪ ರಾಠೋಡ, ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಜಿಪಂ ನೂತನ ಸದಸ್ಯೆ ವೀಣಾ ಕಾಶಪ್ಪನವರ, ನಗರಸಭೆ ನೂತನ ಅಧ್ಯಕ್ಷೆ ವದ್ದಿ ತೇಜಮ್ಮ ಸುಧಾಮ, ಉಪಾಧ್ಯಕ್ಷ ಹನಮನಾಳ ಮಹಾಂತೇಶ ಮಲ್ಲಪ್ಪ ಸೇರಿದಂತೆ ಇತರರಿದ್ದರು.






Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>