Quantcast
Channel: VijayKarnataka
Viewing all articles
Browse latest Browse all 6795

ಸರ್ವರಿಗೂ ನ್ಯಾಯ ದೊರೆಯಬೇಕು: ಮೋದಿ ಪ್ರತಿಪಾದನೆ

$
0
0

ಕಾನೂನು ಸೇವಾ ದಿನದಂದು ಸರಕಾರದ ಆದ್ಯತೆಗಳನ್ನು ಪಟ್ಟಿ ಮಾಡಿದ ನಮೋ
ಹೊಸದಿಲ್ಲಿ: ಎಲ್ಲರ ಜತೆಗೂಡಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದಷ್ಟೇ ಅಲ್ಲ, ಎಲ್ಲರಿಗೂ ನ್ಯಾಯ ದೊರೆಕಿಸಿಕೊಡುವುದೂ ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಈ ದಿಸೆಯಲ್ಲಿ ಕಡಿಮೆ ವೆಚ್ಚದಾಯಕವಾದ ಲೋಕ್ ಅದಾಲತ್‌ಗಳ ಕುರಿತು ಹೆಚ್ಚಿನ ಗಮನ ಹರಿಸುವಂತೆ ದೇಶದ ಕಾನೂನು ತಜ್ಞರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.

ದಿಲ್ಲಿಯಲ್ಲಿ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಸೋಮವಾರ ಮಾತನಾಡಿದರು.

ಬಡವರಿಗೆ ಹೇಗೆ ನ್ಯಾಯ ನೀಡಬಹುದು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿರುವುದು ಸಂತೋಷದ ಸಂಗತಿ . ಬಡವರಿಗೆ ನ್ಯಾಯ ಒದಗಿಸುವಲ್ಲಿ ಲೋಕ ಅದಾಲತ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆದರೆ ಈ 'ಜನರ ನ್ಯಾಯಾಲಯ'ದ ಕುರಿತಂತೆ ಜನರಲ್ಲೇ ಅರಿವಿನ ಕೊರತೆಯಿದೆ. ಹೆಚ್ಚು ಹೆಚ್ಚು ಜನರು ಇದರ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಮೋದಿ ಹೇಳಿದರು.

15 ಲಕ್ಷ ಲೋಕ ಅದಾಲತ್‌ಗಳು :

ಲೋಕ ಅದಾಲತ್ ಎನ್ನುವುದು ಭಾರತದಲ್ಲಿ ವಿವಾದ ಪರಿಹಾರಕ್ಕೆ ಪರ‌್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿದೆ. 15 ಲಕ್ಷ ಲೋಕ ಅದಾಲತ್‌ಗಳು ದೇಶದಲ್ಲಿ ಕಾರ‌್ಯನಿರ್ವಹಿಸುತ್ತಿದ್ದು, 8.5 ಕೋಟಿ ಜನರಿಗೆ ನ್ಯಾಯ ನೀಡಿದೆ. ದೇಶದಲ್ಲಿ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಜತೆ ಸಬ್‌ಕಾ ನ್ಯಾಯ್‌ಗಾಗಿ ಕಾನೂನು ವಿಶ್ವವಿದ್ಯಾಲಯಗಳು ಕೊಡುಗೆ ನೀಡಬೇಕು ಎಂದರು.

ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಕಾನೂನು ವಿವಿಗಳು ಕಾರ‌್ಯಕ್ರಮಗಳನ್ನು ರೂಪಿಸಬೇಕು. ವಿದ್ಯಾರ್ಥಿಗಳಿಗೆ ವಿಶೇಷ ಸಂಶೋಧನಾ ಕಾರ‌್ಯ ಯೋಜನೆಗಳನ್ನು ವಹಿಸಬೇಕು. ಅವರೆಲ್ಲ ವರದಿ ನೀಡುವ ಜತೆಗೆ ಸಲಹೆಗಳನ್ನೂ ಕೊಡಬೇಕು. ಲೋಕ ಅದಾಲತ್‌ಗಳೆಂದರೆ ಏನು ಎಂಬ ಸಂಪೂರ್ಣ ಜ್ಞಾನ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಪ್ರಧಾನಿ ಹೇಳಿದರು.

ಕೋರ್ಟ್‌ಗಳೆಂದರೆ ಅಲರ್ಜಿ

ಜನರಿಗೆ ಕೋರ್ಟ್, ಪೊಲೀಸ್ ಎಂದರೆ ಅಲರ್ಜಿ ಇದೆ.ದುಬಾರಿ ವೆಚ್ಚ ಮತ್ತು ಶೋಷಣೆಯ ಭೀತಿ ಇದಕ್ಕೆ ಕಾರಣ. ಬಡವರಿಗೆ ನ್ಯಾಯಾಂಗ ಬಗ್ಗೆ ಎಷ್ಟೊಂದು ಅಳುಕಿದೆಯೆಂದರೆ, ಎಷ್ಟು ಅನ್ಯಾಯವಾದರೂ ಮೂಕವಾಗಿ ಸಹಿಸಿಕೊಂಡಿರುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ಲೋಕ್ ಅದಾಲತ್‌ಗಳು ಈ ಕೊರತೆ ನೀಗುವ ಸಂಪರ್ಕ ಸೇತುಗಳಾಗಬೇಕು ಎಂದು ಪ್ರಧಾನಿ ಹೇಳಿದರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>