Quantcast
Channel: VijayKarnataka
Viewing all articles
Browse latest Browse all 6795

ಬಿಹಾರ ಸೊಲು, ಬಿಜೆಪಿ ಒಳ ಬೇಗುದಿ ಬಯಲು

$
0
0

ಶಾ ರಣತಂತ್ರಗಳ ಬಗ್ಗೆ ಅಪಸ್ವರ / ಮೋಹನ್ ಭಾಗವತ್ ಹೇಳಿಕೆಗೆ ಕಿಡಿ

ಹೊಸದಿಲ್ಲಿ/ಪಟನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವುದು ಆ ಪಕ್ಷದಲ್ಲಿ ಪಿಸುಗುಡುವ ಮಟ್ಟದಲ್ಲಿದ್ದ ಬೇಗುದಿ ಸ್ಫೋಟಗೊಳ್ಳುವಂತೆ ಮಾಡಿದೆ. ಟಿಕೆಟ್ ಹಂಚಿಕೆ, ಪ್ರಚಾರದ ವೈಖರಿ, ಆರ್‌ಎಸ್‌ಎಸ್ ಹೇಳಿಕೆಗಳ ಕುರಿತು ಹಲವು ಸಂಸದರು ದನಿ ಎತ್ತಿ ಪಕ್ಷದ ಸೋಲಿನ ವಿಮರ್ಶೆ ನಡೆಸಿದ್ದಾರೆ.

ಅಮಿತ್ ಶಾ ಅವರ ಚುನಾವಣೆ ರಣತಂತ್ರಗಳ ಬಗ್ಗೆ ಬಿಜೆಪಿಯ ಇಬ್ಬರು ಸಂಸದರಾದ ಶತ್ರುಘ್ನ ಸಿನ್ಹಾ ಹಾಗೂ ಚಂದನ್ ಮಿತ್ರ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಚೆಲ್ಲಿದ್ದಾರೆ.

''ಬಿಜೆಪಿಯ ದೊಡ್ಡಗಂಟಲಿನ ಪ್ರಚಾರವನ್ನು ಮತದಾರರು ತಿರಸ್ಕರಿಸಿದ್ದಾರೆ,''ಎಂದು ಚಂದನ್ ಮಿತ್ರ ಟೀಕಿಸಿದ್ದರೆ, ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಿದರೆ ಇನ್ನೇನು ಆಗಲು ಸಾಧ್ಯ ಎಂದು ಸಂಸದ ಆರ್‌ಕೆ ಸಿಂಗ್ ಪ್ರಶ್ನಿಸಿದ್ದಾರೆ.

''ಯಶಸ್ಸು ಸಿಕ್ಕಾಗ ಕ್ಯಾಪ್ಟನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಅವರು ಸೋಲಿಗೂ ಹೊಣೆ ಹೊರಬೇಕಾಗುತ್ತದೆ. ಬಿಹಾರದಲ್ಲಿ ಪಕ್ಷವನ್ನು ಸೋಲಿನತ್ತ ತಳ್ಳಿದವರನ್ನು ದಂಡಿಸಬೇಕು,'' ಎಂದು ಶತ್ರುಘ್ನ ಸಿನ್ಹಾ ಒತ್ತಾಯಿಸಿದ್ದಾರೆ.

''ಬಿಹಾರಿ ಮತ್ತು ಬಹಾರಿ(ಹೊರಗಿನವರು) ಎಂಬ ವಿಷಯವೀಗ ಇತ್ಯರ್ಥವಾಗಿದೆ. ಗೆದ್ದ ನನ್ನ ಗೆಳಯರಿಗೆ ಇನ್ನಷ್ಟು ಅದೃಷ್ಟ ಒಲಿದು ಬರಲಿ ಎಂದು ಆಶಿಸುವೆ. ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟವಾಗಿರುವ ಸೋಲಿನ ಕುರಿತು ನಮ್ಮವರು ಆತ್ಮಾವಲೋಕನ ಮಾಡಿಕೊಳ್ಳಬೇಕು,'' ಎಂದು ಸಿನ್ಹಾ ತಿಳಿ ಹೇಳಿದ್ದಾರೆ.

ಟೀಕಾಸ್ತ್ರ ಪ್ರಯೋಗದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಸೇನೆ, ನಿತೀಶ್ ಕುಮಾರ್ ಅವರನ್ನು ಹೀರೋ ಎಂದು ಹೊಗಳಿದೆ. ಅಹಂ ಹಾಗೂ ಸೊಕ್ಕಿನ ಕಾರಣಕ್ಕೆ ಸೋಲಾಗಿದೆ ಎಂದು ಕಿಡಿಕಾರಿದೆ.

ಪಕ್ಷದಲ್ಲಿ ಮೋದಿಗಿರುವ ಹಿಡಿತ, ಅವರಲ್ಲಿರುವ ಮತಗಳನ್ನು ಸೆಳೆಯುವ ಶಕ್ತಿಯಿಂದ ಬಂದಿರುವಂತದ್ದು. ಆದರೆ ಬಿಹಾರ ಫಲಿತಾಂಶ ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ಸಂದೇಹ ಸೂಚಕಗಳನ್ನಿಟ್ಟಿದೆ. ತಮ್ಮ ಆದ್ಯತೆಗಳು ಮತ್ತು ಪ್ರಮುಖ ಆಡಳಿತಾತ್ಮಕ ವಿಷಯಗಳ ಜಾರಿಯಲ್ಲಿ ಮೋದಿ ಅವರೀಗ ತೀವ್ರ ಒತ್ತಡಕ್ಕೀಡಾಗುತ್ತಾರೆ ಎಂದು ವಿಶ್ಲೇಷಿಸಲಾಗಿದೆ.

ಆರ್‌ಎಸ್‌ಎಸ್ ಮೇಲೆ ಕಿಡಿ

ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಬಗ್ಗೆ ಮರು ವಿಮರ್ಶೆ ಮಾಡುವ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ ಭಾರಿ ಹಿನ್ನಡೆಯಾಯಿತು ಎಂದು ಸಂಸದ ಹುಕುಮ್‌ದೇವ್ ನಾರಾಯಣ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

''ರಾಜಕೀಯ ಮತ್ತು ಸಮಾಜದಲ್ಲಿ ಜಾತಿಯ ಪ್ರಾಬಲ್ಯ ಹೆಚ್ಚಿರುವ ಬಿಹಾರದಲ್ಲಿ ಇಂಥ ಹೇಳಿಕೆಯಿಂದ ದುಬಾರಿ ಬೆಲೆ ತೆರಬೇಕಾಯಿತು. ಮೋಹನ್ ಭಾಗವತ್ ಅವರ ಹೇಳಿಕೆಯಿಂದ ಹಿಂದುಳಿದ ವರ್ಗಗಳು ಮತ್ತು ದಲಿತರಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಬೆಳೆಯಿತು. ಏಕೆಂದರೆ ಬಿಹಾರದಲ್ಲಿ ಜಾತಿ ತಾರತಮ್ಯ ಮತ್ತು ಸಾಮಾಜಿಕ ಶೋಷಣೆಯಿಂದ ಹೊರಬರಲು ಭಾರಿ ಹೆಣಗಾಟ ನಡೆಸುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ ,''ಎಂದು ಅವರು ಹೇಳಿದ್ದಾರೆ.

ಶಿವಸೇನೆ ಗರ್ಜನೆ

ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಗೆಲ್ಲಲು ಮುಖ್ಯಕಾರಣವೇ ಅವರ ಕ್ಲೀನ್ ಇಮೇಜ್. ಪ್ರಾಮಾಣಿಕ ಪ್ರಚಾರಾಂದೋಲನದ ವೇಳೆ ನಿತೀಶ್ ಪಕ್ಷವು ಅಭಿವೃದಿ ಕಾರ್ಯಕ್ರಮಗಳಿಗಷ್ಟೇ ಇತ್ತು ನೀಡಿತ್ತೇ ಹೊರತು ಬಿಜೆಪಿಯಂತೆ ಕೋಮು ದ್ವೇಷಣದ ಕಿಡಿ ಹೊತ್ತಿಸಿರಲಿಲ್ಲ ಎಂದೂ ಶಿವಸೇನೆ ಬರೆದಿದೆ.

**

ನಿತೀಶ್ ಮನೆಗೆ ಶತ್ರುಘ್ನ
ಪಟನಾ: ಭಾನುವಾರ ನಿತೀಶ್ ಅವರನ್ನು ಹಾಡಿಹೊಗಳಿದ್ದ ಸಂಸದ ಶತ್ರುಘ್ನ ಸಿನ್ಹಾ ಅವರು ಸೋಮವಾರ ಖುದ್ದು ಅವರ ಮನೆಗೆ ತೆರಳಿ ಮೆಚ್ಚುಗೆ ಸೂಚಿಸಿರುವುದು ಬಿಜೆಪಿ ವರಿಷ್ಠರ ಕಣ್ಣು ಕೆಂಪಗಾಗಿಸಿದೆ.

ನಿತೀಶ್ ಜತೆಗಿನ ಸಭೆ ಬಳಿಕ ಪ್ರತಿಕ್ರಿಯಿಸಿರುವ ಸಿನ್ಹಾ, ''ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ. ನಿತೀಶ್ ಮಹಾನ್ ನಾಯಕ. ಅವರನ್ನು ಜನ ಆಯ್ಕೆ ಮಾಡಿರುವುದರಿಂದ ಬಿಹಾರಕ್ಕೆ ಒಳಿತಾಗಲಿದೆ,'' ಎಂದು ಗುಣಗಾನ ಮಾಡಿದ್ದಾರೆ. ಈ ಭೇಟಿಯನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿದರೆ ನಾನದಕ್ಕೆ ತಲೆಕೆಡಿಸಿಕೊಳ್ಳಲಾರೆ ಎಂದು ಹೇಳಿದ್ದಾರೆ.

-----

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ.
* ಸರ್‌ತಾಜ್ (ದಾದ್ರಿಯಲ್ಲಿ ಹತ್ಯೆಗೀಡಾದ ಇಕ್ಲಾಕ್ ಅವರ ಪುತ್ರ)


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>