Quantcast
Channel: VijayKarnataka
Viewing all articles
Browse latest Browse all 6795

ಪಾಕ್ ತಂಡಕ್ಕೆ ಸಿಗದ ಗ್ರೀನ್‌ಸಿಗ್ನಲ್

$
0
0

ಇಸ್ಲಾಮಾಬಾದ್: ಭದ್ರತೆ ಕುರಿತು ಭಾರತ ಸರಕಾರ ಈವರೆಗೂ ಲಿಖಿತ ಭರವಸೆ ನೀಡದ ಕಾರಣ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲು ಅಲ್ಲಿನ ಸರಕಾರ ಇನ್ನೂ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಪ್ರತಿಷ್ಠಿತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದು ಗೊಂದಲದಲ್ಲಿಯೇ ಇದೆ.

''ಸದ್ಯದ ಸ್ಥಿತಿಯಲ್ಲಿ ಪಾಕ್ ತಂಡಕ್ಕೆ ಅನುವು ಮಾಡಿಕೊಡುವ ಸ್ಥಾನದಲ್ಲಿ ನಾವಿಲ್ಲ. ನಮ್ಮ ಆಟಗಾರರ ಜವಾಬ್ದಾರಿ ನಮ್ಮ ಮೇಲಿದೆ. ಆಟದ ವೇಳೆ ಯಾವುದೇ ತರದ ಒತ್ತಡವನ್ನು ಎದುರಿಸಲು ನಾವು ಬಯಸುವುದಿಲ್ಲ. ಭಾರತ ಸರಕಾರ ಲಿಖಿತ ಭರವಸೆ ನೀಡುವವರೆಗೆ ನಾವು ನಮ್ಮ ತಂಡಕ್ಕೆ ಭಾರತಕ್ಕೆ ತೆರಳಲು ಅವಕಾಶ ಕಲ್ಪಿಸುವುದಿಲ್ಲ,'' ಎಂದು ಪಾಕಿಸ್ತಾನ ಒಳಾಡಳಿತ ಸಚಿವ ನಾನೀರ್ ಅಲಿ ಖಾನ್ ಹೇಳಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>