Quantcast
Channel: VijayKarnataka
Viewing all articles
Browse latest Browse all 6795

ಕರುಣ್ ಮುಡಿಗೆ ಮೂರನೇ ಇರಾನಿ ಕಪ್

$
0
0

ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ 94 ಮತ್ತು 2ನೇ ಇನಿಂಗ್ಸ್‌ನಲ್ಲಿ 92 ರನ್ ಗಳಿಸಿ ಶೇಷ ಭಾರತ ಗೆಲುವಿನ ರೂವಾರಿಯಾದ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರಿಗೆ ಹ್ಯಾಟ್ರಿಕ್ ಇರಾನಿ ಕಪ್ ಗೆದ್ದ ಸಂಭ್ರಮ.

ಕಳೆದೆರಡು ಸಾಲಿನಲ್ಲಿ ರಾಜ್ಯ ತಂಡ ಇರಾನಿ ಕಪ್ ಗೆದ್ದಾಗ ಕರುಣ್ ಕರ್ನಾಟಕ ತಂಡದಲ್ಲಿದ್ದರು. ಈ ಬಾರಿ ಶೇಷ ಭಾರತ ಪರ ಬ್ಯಾಟಿಂಗ್ ವಿಕ್ರಮ ತೋರಿ ಗೆಲುವಿನ ರೂವಾರಿಯಾಗಿ ಮೂಡಿ ಬಂದ ಕರುಣ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ಸಾಧನೆಯ ಬಗ್ಗೆ 'ವಿಜಯ ಕರ್ನಾಟಕ' ಜತೆ ಸಂತಸ ಹಂಚಿಕೊಂಡ ಕರುಣ್, ''ಸತತ 3 ಮೂರು ವರ್ಷಗಳಲ್ಲಿ ವೈಯಕ್ತಿಕವಾಗಿ ಮೂರು ಇರಾನಿ ಕಪ್ ಗೆದ್ದಿರುವುದು ಅತೀವ ಸಂತಸ ತಂದಿದೆ. ಒಂದೇ ಪಂದ್ಯದಲ್ಲಿ ಎರಡು ಬಾರಿ ಶತಕ ಕೈ ತಪ್ಪಿದರೂ ತಂಡವನ್ನು ಗೆಲ್ಲಿಸಿದ ಖುಷಿಯಿದೆ. ದೊಡ್ಡ ಪಂದ್ಯಗಳಲ್ಲಿನ ಒತ್ತಡದ ಸನ್ನಿವೇಶಗಳು ನನ್ನಿಂದ ಅತ್ಯುತ್ತಮ ಆಟವನ್ನು ಹೊರ ತೆಗೆಯುತ್ತವೆ,'' ಎಂದರು.

ಕರುಣ್ 2014-15ನೇ ಸಾಲಿನ ವರ್ಷದ ರಣಜಿ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಭರ್ಜರಿ ತ್ರಿಶತಕ ಸಿಡಿಸಿದ್ದರು. ಈ ಬಾರಿ ರಣಜಿ ಕಿರೀಟ ಕರ್ನಾಟಕದ ಕೈ ತಪ್ಪಿದರೂ ಇರಾನಿ ಕಪ್ ಗೆದ್ದ ತಂಡದಲ್ಲಿ ಕರುಣ್ ಜತೆ ರಾಜ್ಯದ ಸ್ಟುವರ್ಟ್ ಬಿನ್ನಿ ಇರುವುದು ಹೆಮ್ಮೆಯ ವಿಚಾರವಾಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>