Quantcast
Channel: VijayKarnataka
Viewing all articles
Browse latest Browse all 6795

ದಿಲ್ಲಿ ಪರ್ಯಟನೆ ನಡೆಸಿದ ಟಿ20 ವಿಶ್ವಕಪ್ ಟ್ರೋಫಿ

$
0
0

ಹೊಸದಿಲ್ಲಿ: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ನ ಟ್ರೋಫಿಯ ಪರ್ಯಟನೆ ದಿಲ್ಲಿ ತಲುಪಿದ್ದು, ಗುರುವಾರ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ಪವನ್ ನೇಗಿ ಉಪಸ್ಥಿತರಿದ್ದರು. ಈ ಇಬ್ಬರೂ ಆಟಗಾರರು ಮಾ.8ರಿಂದ ಆರಂಭವಾಗುವ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟೂರ್ನಿಗೆ ಆತಿಥ್ಯ ವಹಿಸಲಿರುವ ನಗರಗಳಲ್ಲಿ ವಿಶ್ವಕಪ್ ಟ್ರೋಫಿಯ ಪರ್ಯಟನೆ ನಡೆಯುತ್ತಿದೆ. ಈಗಾಗಲೇ ಧರ್ಮಶಾಲಾ ಮತ್ತು ಮೊಹಾಲಿಯಲ್ಲಿ ಪರ್ಯಟನೆ ಮುಗಿಸಿ ಬಂದಿರುವ ಟ್ರೋಫಿ, ದಿಲ್ಲಿಯ ನಂತರ ಕ್ರಮವಾಗಿ ಕೋಲ್ಕೊತಾ, ನಾಗ್ಪುರ, ಚೆನ್ನೈ, ಬೆಂಗಳೂರು ಮತ್ತು ಮುಂಬಯಿಗೆ ತೆರಳಲಿದೆ.

ವಿಶೇಷವಾಗಿ ಸಿದ್ಧ ಪಡಿಸಲಾಗಿರುವ ನಿಸಾನ್ ಕಾರಿನಲ್ಲಿ ಟ್ರೋಫಿ ದಿಲ್ಲಿಯ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಿತು. ವೇಳೆ ಯುವರಾಜ್ ಸಿಂಗ್ ಮತ್ತು ಪವನ್ ನೇಗಿ ಅವರ ಜತೆ ಶಾಲಾ ಮಕ್ಕಳು ಭಾಗವಹಿಸಿದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>