Quantcast
Channel: VijayKarnataka
Viewing all articles
Browse latest Browse all 6795

ಗುದ್ದೋಡು ಪ್ರಕರಣ: ಸಲ್ಮಾನ್‌ ಏಕೆ ದೋಷಿಯಲ್ಲವೆಂದು ಕೇಳಿದ ಸುಪ್ರೀಂ

$
0
0

ನವದೆಹಲಿ: ಒಬ್ಬನ ಸಾವಿಗೆ ಕಾರಣವಾಗಿ, ನಾಲ್ವರು ಗಾಯಗೊಂಡ ಗುದ್ದೋಡು ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ರನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್‌ ತೀರ್ಪುನ್ನೇಕೆ ಬದಲಿಸಬಾರದೆಂದು ಕೇಳಿ ನಟನಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಆ ಮೂಲಕ ತುಸು ನಿರಾಳವಾಗಿದ್ದ ನಟನ ರಾತ್ರಿ ನಿದ್ರಗಳು ಕಡಿಮೆಯಾಗಲಿದೆ.

ಬಾಂಬೆ ಹೈ ಕೋರ್ಟ್‌ನ ತೀರ್ಪು 'ನ್ಯಾಯವನ್ನು ಹಾಸ್ಯಸ್ಪದ ಮಾಡಿದಂತೆ,' ಎಂದು ನ್ಯಾ.ಜಗಜೀತ್ ಸಿಂಗ್ ಖೇಹರ್ ಮತ್ತು ನ್ಯಾ.ಸಿ.ನಾಗಪ್ಪನ್ ಅವರಿರುವ ಪೀಠ ಸಲ್ಮಾನ್ ಖಾನ್‌ಗೆ 'ಈ ಕೋರ್ಟ್‌ನಿಂದಲೂ ದೋಷಮುಕ್ತನಾದರೆ ಒಳಿತು,' ಎಂದೂ ಹೇಳಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, 'ವಿಚಾರಣಾ ನ್ಯಾಯಾಲಯದಲ್ಲಿ ಕೇವಲ ಒಬ್ಬ ವ್ಯಕ್ತಿಯ ಸಾಕ್ಷಿಯಿಂದ ನಟನನ್ನು ದೋಷಿಯೆಂದು ಪರಿಗಣಿಸಿದ್ದು, ಅದನ್ನೇ ನಂಬುವಂತಿಲ್ಲ. ಅದು ಬಿಟ್ಟು ಬೇರೆ ಯಾವುದೇ ಸಾಕ್ಷಿಗಳಿಲ್ಲ,' ಎಂದಿದ್ದಾರೆ.

ಹೈ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಮಹಾರಾಷ್ಟ್ರ ಸರಕಾರದ ಪರ ವಾದಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, 'ಫುಟ್‌ಪಾತ್ ಮೇಲೆ ಮಲಗಿದವರ ಮೇಲೆ ಚಲಿಸಿದ ಲ್ಯಾಂಡ್ ಕ್ರೂಸರ್ ಕಾರಿನ ಚಾಲಕ ಸ್ಥಾನದಲ್ಲಿ ಸಲ್ಮಾನ್ ಇದ್ದುದ್ದನ್ನು ಅನೇಕರ ಗಮನಿಸಿದ್ದಾರೆ,' ಎಂದು ವಾದಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>