Quantcast
Channel: VijayKarnataka
Viewing all articles
Browse latest Browse all 6795

ಬಹಿರಂಗ ಪ್ರಚಾರಕ್ಕೆ ತೆರೆ, ಇನ್ನೇನಿದ್ದರೂ ತೆರೆಮರೆ

$
0
0

-ಮತದಾರರಿಗೆ ಹಣ ತಲುಪಿಸುವ 'ಜನ್‌ಧನ್'ನತ್ತ ಆಸಕ್ತಿ

-ಹೆಬ್ಬಾಳ, ದೇವದುರ್ಗ, ಬೀದರ್ ದಕ್ಷಿಣ ಉಪಚುನಾವಣೆ-

-15 ಜಿಲ್ಲೆಗಳ 550 ಜಿಪಂ, 1934 ತಾಪಂ ಕ್ಷೇತ್ರ-

ಬೆಂಗಳೂರು: ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ, 15 ಜಿಲ್ಲೆಗಳ 550 ಜಿಪಂ, 1934 ತಾಪಂ ಕ್ಷೇತ್ರಗಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರರನ್ನು ಸೆಳೆಯುವ ತೆರೆಮರೆ ಕಸರತ್ತಿಗೆ ರಂಗ ಸಜ್ಜಾಗಿದೆ.

ಫೆ.13ರಂದು ಮತದಾನ ನಡೆಯಲಿದೆ. ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಫೆ.16ರಂದು ಹೊರಬೀಳಲಿದೆ. ಜಿಪಂ.ತಾಪಂ., ಕ್ಷೇತ್ರಗಳ ಮತದಾನ ನಡೆದರೂ 2ನೇ ಹಂತದ ಮತದಾನದ ಬಳಿಕ ಫೆ.23ರಂದು ಮತ ಎಣಿಕೆ ನಡೆಯಲಿದೆ.

ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರ ಹೆಬ್ಬಾಳ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯನಾಯ್ಡು, ಸದಾನಂದಗೌಡ ಪ್ರಚಾರ ನಡೆಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಅನಂತಕುಮಾರ್ ಅವರು ದೇವದುರ್ಗ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಕೈಗೊಂಡರು. ಗುರವಾರ ಸಂಜೆಯಿಂದ ಮತದಾರರ ಮನೆಗೆ ತೆರಳಿ ಮತಯಾಚಿಸುವ ಚಟುವಟಿಕೆ ತುರುಸುಗೊಂಡಿದೆ.

ತೆರೆಮರೆಯಲ್ಲಿ 'ಜನ್‌ಧನ್'

ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ಧನ-ಕನಕ ಆಮಿಷವೊಡ್ಡಿ ಮತವನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನಕ್ಕೆ ಎಲ್ಲಾ ಪಕ್ಷಗಳು ಮುಂದಾಗಿವೆ. ಪ್ರತಿಯೊಬ್ಬರ ವೈಯಕ್ತಿಕ ಜೇಬಿಗೆ ಹಣ ಹಂಚುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, 'ಜನ್‌ಧನ್' ಯೋಜನೆಯನ್ನು ಜನಪ್ರತಿನಿಧಿಗಳು ಪರೋಕ್ಷವಾಗಿ ಅನುಷ್ಠಾನ ಮಾಡುತ್ತಿದ್ದಾರೆ.

2011ರಲ್ಲಿ ನಡೆದ ಜಿಪಂ.,ತಾಪಂ., ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ದುಡ್ಡಿನ ಹರಿವು, ಪ್ರಭಾವ ಗಣನೀಯವಾಗಿ ಹೆಚ್ಚಳವಾಗಿದೆ.

ರಿಯಲ್ ಎಸ್ಟೇಟ್ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿರುವ ಬೆಂಗಳೂರು ನಗರ, ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಮಂಗಳೂರು ಮತ್ತಿತರರ ಜಿಲ್ಲೆಗಳ ಜಿಪಂ ಚುನಾವಣೆಗೆ ಸ್ಪರ್ಧಿಸಿರುವವರು ಕನಿಷ್ಠ 2-4 ಕೋಟಿ ರೂ. ಖರ್ಚು ಮಾಡಬೇಕಾದ ಅನಿವಾರ್ಯತೆ ಸಿಲುಕಿದ್ದಾರೆ. ತಾಪಂ ಚುನಾವಣೆಯಲ್ಲಿ ಗೆಲ್ಲಲು 25 ಲಕ್ಷ ರೂ. ನಿಂದ 1 ಕೋಟಿ ರೂ. ವರೆಗೂ ಖರ್ಚು ಮಾಡಲು ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ.

ಜಿಪಂ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷದ ಅಭ್ಯಥಿಗಳು ನಗರಕ್ಕೆ ಅಂಟಿಕೊಂಡ ಪ್ರದೇಶಗಳಲ್ಲಿ ಮತದಾರರಿಗೆ 3-5 ಸಾವಿರ ರೂ. ನೀಡುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 500 ರೂ. ನೋಟು ಕೊಡಬೇಕಾದ ಸ್ಥಿತಿ ಇದೆ ಎಂದು ರಾಜಕೀಯ ಪಕ್ಷಗಳ ನಾಯಕರೇ ಹೇಳುತ್ತಿದ್ದಾರೆ. ಅದರಲ್ಲೂ ಶಾಸಕರು, ಮೇಲ್ಮನೆ ಸದಸ್ಯರ ಪತ್ನಿ ಅಥವಾ ಮಕ್ಕಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಗೆಲ್ಲುವುದೇ ಪ್ರತಿಷ್ಠೆಯಾಗಿರುವುದರಿಂದ ಎದುರಾಳಿಗಳಿಗಿಂತ ಹೆಚ್ಚಿನ ದುಡ್ಡು ವ್ಯಯಿಸಬೇಕಾದ ಸ್ಪರ್ಧೆ ಉಂಟಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಇದ್ದ ಮತದಾರರ ಮನಸ್ಥಿತಿ ಈಗ ಬದಲಾಗಿದೆ. ಹೆಂಡ ಹಂಚಿ ಮತ ಗಿಟ್ಟಿಸುತ್ತಿದ್ದ ಕೆಟ್ಟ ಪರಂಪರೆ ಮರೆಯಾಗಿದ್ದು, ಮತದಾರರು ಕೂಡ ಕನಕಾಂಬರ(ಸಾವಿರ ರೂ.ನೋಟು) ಸ್ವೀಕರಿಸಲು ಆಸಕ್ತರಾಗಿದ್ದಾರೆ. ಕುಡಿತದ ಆಸೆಯಿಂದ ಮದ್ಯ ಪಡೆದು ವೋಟು ಹಾಕಿದರೆ ಒಂದು ದಿನಕ್ಕೆ ಸೀಮಿತವಾಗಲಿದೆ. ಅದರ ಬದಲು 2-5 ಸಾವಿರ ರೂ. ಪಡೆದರೆ ವಾರೊಪ್ಪತ್ತು ಕುಡಿಯಬಹುದು ಎಂಬ ಲೆಕ್ಕಾಚಾರಕ್ಕೂ ಪುರುಷ ಮತದಾರರು ತಲುಪಿದ್ದಾರೆ.

ಚುನಾವಣೆ ಆಯೋಗ ಏನೆಲ್ಲಾ ತಪಾಸಣೆ ಮಾಡುತ್ತಿದ್ದರೂ ಕಣ್ಗಾವಲು ತಪ್ಪಿಸಿ, ಮತದಾರರು ಹಾಗೂ ಅವರನ್ನು ಹಿಡಿದಿಟ್ಟುಕೊಳ್ಳಬಲ್ಲ ಶಕ್ತಿ ಇರುವ ಸ್ಥಳೀಯ ನಾಯಕರಿಗೆ ಹಣ ತಲುಪಿಸಲು ಅಭ್ಯರ್ಥಿಗಳು ಕೊನೆಯ ಎರಡು ರಾತ್ರಿಗಳನ್ನು ವ್ಯಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಚಾಮರಾಜನಗರದಲ್ಲಿ 22 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ 326 ಲೀಟರ್ ಐಎಂಎಫ್‌ಎಲ್ ಮದ್ಯ, 43 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>