Quantcast
Channel: VijayKarnataka
Viewing all articles
Browse latest Browse all 6795

ಒಂದ್ಚೀಲ ಜ್ವಾಳ ಕೊಡತೀನಿ, ವೋಟಿಗೆ ಬಾ!

$
0
0

ಗುಳೆ ಹೋದ ಮತದಾರರಿಗೆ ನಾನಾ ಪಕ್ಷಗಳ ಅಭ್ಯರ್ಥಿಗಳ ಆಮಿಷದ ವೈಖರಿ

* ಸಂಗಮೇಶ ಟಿ. ಚೂರಿ ವಿಜಯಪುರ

ಹ್ಞಾ, ಈ ಸಲ ನಾನೇ ಎಲೆಕ್ಷನ್‌ಗೆ ನಿಂತೀನಪಾ. ಮತ್ತ ನೀ ಎಷ್ಟೊತ್ತಿದ್ದರೂ ಫೆ. 20ಕ್ಕ ಅಕ್ಕಾನ ಕರ್ಕೊಂಡ್ ಬಂದ್ ವೋಟ್ ಹಾಕ್ಬೇಕ್ ನೋಡ ಮತ್ತ...!

ಬರಗಾಲದ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ಗುಳೆ ಹೋಗಿರುವ ಮತದಾರರನ್ನು ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ದೂರವಾಣಿ ಮೂಲಕ ಕರೆಯುತ್ತಿರುವ ಪರಿ ಇದು.

ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಿಜಯಪುರ ಜಿಲ್ಲೆಯಲ್ಲಿ, ನಾಮಪತ್ರ ಹಿಂತೆಗೆದುಕೊಳ್ಳಲು ಗುರುವಾರ ಕೊನೆಯ ದಿನವಾಗಿದ್ದರೂ ಸ್ಪರ್ಧಿಸುವುದು ನಿಶ್ಚಿತವಾಗಿರುವ ಅಭ್ಯರ್ಥಿಗಳು ಗುಳೆ ಹೋದವರ ಮೊಬೈಲ್ ನಂಬರ್ ಹುಡುಕಿ ಕರೆ ಮಾಡುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಮಂಗಳೂರು, ಬೆಂಗಳೂರು ಸೇರಿರುವ ಮತದಾರರನ್ನು ಸೆಳೆಯುವುದೇ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ.

''ನೀ ಬಂದರ ಬಾ. ಹೋಗುವಾಗ ನಿನಗ ನಾ ಕೊಟ್ಟು ಕಳಿಸಿದ್ದನ್ನ ನೋಡಿ ನೆನಸ್ಕತೀ. ನಿನ್ನ ಹಂಗ ಬರಿಗೈಯಾಗ ಕಳ್ಸಾಂಗಿಲ್ಲ. ಒಂದ್ ಜ್ವಾಳದ ಚೀಲಾನಾರ ಕೊಟ್ಟ ಕಳಸ್ತೀನಿ ಬಂದ್ ಬಿಡೋಪಾ. ಮರಿಬ್ಯಾಡಪೋ ಅಣ್ಣಾ, ಹಂಗ ಒಂದ್ ನಾಲ್ಕ್ ದಿನ ಮೊದ್ಲ ಬಾ. ಊರಾಗಿದ್ದಾಂಗೂ ಆಕೈತಿ, ಎಲೆಕ್ಷನ್ನೂ ಮಾಡಿದಂಗ ಆಕೈತಿ! '' ಎಂದು ಓಲೈಸುತ್ತಿದ್ದಾರೆ.

ಚಾರ್ಜ್ ಕೊಡ್ತೀನೋ ಅಣ್ಣಾ : ಆ ಕಡೆಯಿಂದ ಮತದಾರರು ಕೂಡ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ''ನಾವು ಮೊನ್ನೆ ಮೊನ್ನೆ ಊರಿಂದ ಬಸ್ ಚಾರ್ಜ್ ಖರ್ಚು ಮಾಡ್ಕೊಂಡು ಬಂದೀವಿ. ಇಲ್ಲಿ ಹೇಳಿಕೊಳ್ಳುವಂಥಾ ದುಡಿಮೆ ಇಲ್ಲ. ಈಗ ಬಾ ಅಂದ್ರ ಅದ್ಹೆಂಗ ಬರಾಕಕ್ಕೈತಿ..,'' ಎಂಬ ಪ್ರಶ್ನೆ ಮುಂದಿಡುತ್ತಿದ್ದಾರೆ.

ಅವರ ಆಂತರ‌್ಯ ಅರ್ಥ ಮಾಡಿಕೊಂಡಿರುವ ಅಭ್ಯರ್ಥಿಗಳು, ''ಇಲ್ಲೋ.. ಅಣ್ಣಾ ನಾನ ಅಲ್ಲಿಗೆ ಬಂದು ಕರ‌್ಕೊಂಡ್ ಬರ‌್ತಿದ್ದೆ. ಆದ್ರ ನೀ ಎಲ್ಲಿ ಠಿಕಾಣಿ ಹೂಡಿ ಅಂತ ಗೊತ್ತಾಗಾಂಗಿಲ್ಲ. ಅದೂ ಅಲ್ದ, ಎಲೆಕ್ಷನ್‌ಗೆ 10 ದಿನ ಮಾತ್ರ ಬಾಕಿ ಐತಿ. ಹಂಗಾಗಿ ಫೋನ್‌ನಾಗ ಮಾತಾಡ್ಲಿಕ್ ಹತ್ತೇನಿ. ತಪ್ಪು ತಿಳ್ಕೋಬ್ಯಾಡಪಾ. ನಾನೇ ಹೋಗಾ ಬರಾ ಬಸ್ ಜಾರ್ಜ್ ಕೊಡ್ತೆನಿ. ನೀ ಊರಾಗಿರುವಷ್ಟ ದಿನ ನಿನ್ನ ಖರ್ಚು ನಾ ನೋಡ್ಕೋತೀನಿ. ನಿನಗೆ ಏನ್ ಬೇಕು ಹೇಳು, ನಾ ಇಲ್ಲ ಅನ್ನಾಂಗಿಲ್ಲ...'' ಎಂದು ಅಭ್ಯರ್ಥಿಗಳು ಮತದಾರರ ದುಂಬಾಲು ಬಿದ್ದಿದ್ದಾರೆ.

ಕೂಲಿ ಕೊಡ್ತೀನಿ ಬಾ: ಗುಳೆ ಹೋಗಿರುವ ಕೆಲವು ಚಾಲಾಕಿ ಮತದಾರರೂ ಇದೇ ಚಾನ್ಸ್ ಬಳಸಿಕೊಳ್ಳುತ್ತಿದ್ದಾರೆ. ''ಹೌದಪಾ, ನಿನ್ನ ಮಾತು ಕೇಳಿ ಕೆಲಸ ಬಿಟ್ಟು ಊರಿಗೆ ಬಂದ್ರ ನಮ್ಮ ದಿನದ ಕೂಲಿ ಕೊಡವ್ರ ಯಾರು?'' ಎಂದು ದಾಳ ಉರುಳಿಸುತ್ತಿದ್ದಾರೆ. ಅದಕ್ಕೂ ಸಿದ್ಧರಾಗಿರುವ ಅಭ್ಯರ್ಥಿಗಳು ನಾಲ್ಕೈದು ದಿನಗಳ ಕೂಲಿಯನ್ನೂ ಕೊಡಲು ಮುಂದಾಗುತ್ತಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>