Quantcast
Channel: VijayKarnataka
Viewing all articles
Browse latest Browse all 6795

ಸುಮ್ಮನೆ ಚಿಂತೆ ಬೇಡ

$
0
0

ದಾರಿದೀಪ: ಹರೀಶ್ ಕಾಶ್ಯಪ್‌

*ಉದ್ಯೋಗದಲ್ಲಿ ಹಿನ್ನಡೆ-ಮದುವೆ ವಿಳಂಬ ಸಮಸ್ಯೆ.

ಗೀತಾ ಗುಜನಾಳ, ಬೈಲಹೊಂಗಲ

ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ವ್ಯವಸ್ಥೆಯಿಲ್ಲ. ರಸ್ತೆ ಗುಣಮಟ್ಟ-ಅನುಗುಣವಾಗಿ ವಾಹನ-ಸಾರಿಗೆ ವ್ಯವಸ್ಥೆಯಿಲ್ಲ! ಎಲ್ಲ ಅಯೋಮಯವೇ. ಆದರೂ ನಾಗಾಲೋಟ ನಡೆದಿದೆ. ಇದುವೇ ಆಶ್ಚರ್ಯ. ನಿಮಗೆ ಕೆಲ ಉತ್ತಮ ಯೋಗಗಳಿವೆ. ಪಾರಾಗುವಿರಿ. ಇದೇ ಮಧ್ಯ ವರ್ಷದಲ್ಲಿ ನೌಕರಿ ಉತ್ತಮವಾಗಿ ಮದುವೆಯೂ ಆಗುವುದು. ಶ್ರೀ ಸೀತಾರಾಮ ಸೇವಾ ದುರ್ಗಾ ಪೂಜೆಗಳಾಗಲಿ.

ಧ್ಯಾನದಿಂದ ಆತ್ಮಶಾಂತಿ

*80 ವರ್ಷದ ವೃದ್ಧ ಜೀವನ. ಮಕ್ಕಳಿಲ್ಲದ ಕಾರಣ ದತ್ತು ಮಗನ ಭವಿಷ್ಯ ಚಿಂತೆ.

ಕೇಶವಮೂರ್ತಿ, ಕೆಂಗೇರಿ

ಹೆಚ್ಚಿನ ಏಳಿಗೆಗಳಿಲ್ಲದೆ, ಅನೇಕ ಸಮಸ್ಯೆಗಳಿರುವ ಬಗ್ಗೆ ಹೇಳಿರುವಿರಿ. ಈಗ ಅದೆಲ್ಲ ಪರಿಹಾರ ಮಾಡುವ ಸಮಯವೂ ಅಲ್ಲ. ವಯಸ್ಸೂ ಅಲ್ಲ. ತದೇಕ ಶ್ರೀ ಹರಿಯ ಸ್ಮರಣೆ, ಧ್ಯಾನದಿಂದ ಆತ್ಮಶಾಂತಿ ಗಳಿಸುವ ಕಾಲ, ಸುಮ್ಮನೆ ಚಿಂತೆ ಮಾಡಿ ಆಯಾಸವೇಕೆ? ಮೊಮ್ಮಗನ ಜಾತಕ ಒಳ್ಳೆಯದಿದೆ. ಕೆಲ ವಿಷಯ ಆತನ ತಂದೆಯೊಂದಿಗೆ ಚರ್ಚಿಸಿದರೆ ಒಳಿತು.

*ವಿದ್ಯೆ ಪೂರೈಸಲಾಗುತ್ತಿಲ್ಲ. ಇತರ ವ್ಯವಹಾರ ಮಾಡಬೇಕೆಂಬ ಯೋಚನೆ ಆಗಿಬರುವುದೇ?

ವಿನಯ್ ಗೌಡ, ಬೆಂಗಳೂರು

ನಿಮಗೆ ಓದಿನ ಕಡೆಗಿಂತ, ಸ್ವಂತ ಉದ್ಯೋಗಕ್ಕಿಂತ-ಜೀವನದ ಇತರೆ ಕಸಗಳ ಬಗ್ಗೆ ಅನುಕಂಪ-ಎಳೆತ! ಯಾರೇನು ಮಾಡುವುದು? ನೀವೇ ಈ ವಿಷಯ ಅರ್ಥ ಮಾಡಿಕೊಂಡು, ಸ್ಟಡೀಸ್ ಅನ್ನು ಗಂಭೀರವಾಗಿ ನೋಡಿ. ಅದು ಮುಗಿದ ಬಳಿಕ ಸ್ವಂತ ಉದ್ಯೋಗ ಚಿಂತನೆ ನಡೆಸಿ.

*ನಿಮ್ಮ ಪಕ್ಕ ಅಭಿಮಾನಿಗಳು ನಾವು. ದಯವಿಟ್ಟು ಪ್ರಶ್ನೆಗಳಿಗೆ ಬೇಗ ಉತ್ತರಿಸಿ-ಉದ್ಯೋಗ ಪ್ರಶ್ನೆ.

ಪ್ರಕಾಶ್ ಇನ್ನಂಜೆ, ದ.ಕ

ನಿಮ್ಮ ಅಭಿಮಾನಕ್ಕೆ ಸಪ್ರೇಮ ವಂದನೆಗಳು. ಗೆಳೆಯರು ಕೂಡಿ ಸ್ವಂತ ಈಟ್ ಔಟ್ ಮಾಡುವ ಯೋಜನೆ ಒಳ್ಳೆಯದು. ನಿಮಗೆ ಈಗ ಮದುವೆ ಯೋಗವಿದೆ. ನಂತರ ಭಾಗ್ಯೋದಯ-ಮುನ್ನಡೆಯಿರಿ. ಹಾಗೇ ಉತ್ತರ ತಡ ಮಾಡುವ ಉದ್ದೇಶವಿಲ್ಲ ನಮಗೆ. ಇರುವ ವ್ಯವಸ್ಥೆಯಲ್ಲಿ ಬೇಗ ಉತ್ತರಿಸಲು ನಿರಂತರ ಶ್ರಮ ವಹಿಸುತ್ತಿದ್ದೇವೆ!

*ಮನೆಯಲ್ಲಿ ಮೂವರು ಮಕ್ಕಳು ನಾವು ಮದುವೆ ಆಗುತ್ತಿಲ್ಲ. ಅನೇಕ ಪತ್ರ ಬರೆದು ಕಾಯುತ್ತಿದ್ದೇವೆ ಉತ್ತರಕ್ಕೆ...

ಈಶ್ವರಿ ಎಸ್, ಬೆಂಗಳೂರು

ಒಂದೇ ಮನೆಯ ಜನರು ಹಲವಾಗಿ ಪತ್ರೈಸಿದ್ದೀರಿ-ಗಮನಕ್ಕೆ ಬಂದಿದೆ. ನೀವು ಹೇಳದೇ ಇದ್ದರೂ ಗುಂಪಾಗಿನ ಪತ್ರ ಎಂದು ಬಲ್ಲೆ! ನೀವು ವಾಸಿಸುವ ಸ್ಥಳ ಹಳೆಯದಾಗಿ ಅಲ್ಲಿ ದೈವಬಲವಿಲ್ಲ. ಕೆಲ ಸಮಸ್ಯೆಗಳು ಪಿತೃ ವಿಷಯವಾಗಿ ತಡೆ ಇದೆ. ಸಾವಧಾನ ಜಾತಕಗಳ ಪರಿಶೀಲಿಸಿಕೊಳ್ಳಿ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>