Quantcast
Channel: VijayKarnataka
Viewing all articles
Browse latest Browse all 6795

ಹೊಸ ಸಾಹಸದಲ್ಲಿ ಛೋಟಾ ಭೀಮ್

$
0
0

ಹಿಂದಿ ಚಿತ್ರ : ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್

* ಸಿಎಸ್‌ಎಸ್
ಅನಿಮೇಷನ್ ಸಿನಿಮಾಗಳ ಲಿಸ್ಟ್‌ಗೆ ಹೊಸ ಸೇರ್ಪಡೆ ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್. ಎಂದಿನಂತೆ ಚೋಟಾ ಭೀಮ್ ಎಂದಾಕ್ಷಣ ಮಕ್ಕಳ ಕಣ್ಣು ಅರಳುತ್ತವೆ. ಮುಖದಲ್ಲಿ ತಾವೇ ಚೋಟಾ ಭೀಮ್ ಇಲ್ಲವೇ ಅವನ ಟೀಮ್‌ನ ಮೆಂಬರ್ಸ್‌ ಎನ್ನುವ ಮಟ್ಟಿಗೆ ಬೀಗುತ್ತಾರೆ. ಇನ್ನು ಸಿನಿಮಾದಲ್ಲಿ ಮಕ್ಕಳಿಗೆ ಇಷ್ಟವಾಗಬಹುದಾದ ಸ್ನೋ ಫಾಲ್‌ನಲ್ಲಾಡುವ ಆಟ, ಜತೆಜತೆಗೆ ಸಾಹಸ, ಸ್ಕೆಯಿಂಗ್ ಕಲಿಯುವ ತಕ್ಲೀಫು ಸೇರಿದಂತೆ ತುಂಟಾಂಟ, ಚೋಟಾ ಭೀಮ್‌ನ ಲಡ್ಡು, ಫೈಟಿಂಗ್ ಎಲ್ಲವೂ ಇದೆ. ಭೀಮ್‌ನ ಡೈಲಾಗ್ ಡಿಲಿವರಿಗಿಂತ ಜತೆಗಿರುವವರ ಮಾತುಕತೆ ಎಲ್ಲರನ್ನು ನಗಿಸುತ್ತದೆ. ಸದಾ ಶರ್ಟ್‌ಲೆಸ್ ಆಗಿರುತ್ತಿದ್ದ ಭೀಮ್ ಈ ಸಿನಿಮಾದಲ್ಲಿ ಫುಲ್ ಕವರ್ ಆಗಿರುವ ಜಾಕೆಟ್/ಕೋಟ್ ಹಾಗೂ ಕ್ಯಾಪ್ ಧರಿಸಿರುತ್ತಾನೆಂಬುದೇ ವಿಶೇಷ.

ಮಕ್ಕಳ ಟೈಂಪಾಸ್‌ಗೆ ಈ ಸಿನಿಮಾ ಓಕೆ. ದೊಡ್ಡವರಿಗೆ ತುಸು ಬೇಸರ. ಕಾರ್ಟೂನ್ ಸಿನಿಮಾದಲ್ಲೂ ಹಾಡುಗಳಿರುವುದು ಕೊಂಚ ಫ್ರೆಶ್ ಅನಿಸುತ್ತದೆ. ಮಕ್ಕಳಂತೆ ನೋಡಿದಲ್ಲಿ ಈ ಸಿನಿಮಾ ಚೆನ್ನಾಗಿದೆ. ಆದರೆ, ಥಿಯೇಟರ್‌ನಲ್ಲಿ ದೊಡ್ಡವರು ಕುಳಿತು ಕಾರ್ಟೂನ್ ಸಿನಿಮಾ ನೋಡುವ ಅನುಭವವೇ ಬೇರೆ. ನೋಡನೋಡುತ್ತಲೇ ದೊಡ್ಡವರೂ ಮಕ್ಕಳಾಗುವ ಸದಾವಕಾಶ ಗ್ಯಾರಂಟಿ. ಕೆಲವೊಮ್ಮೆ ಟಿವಿಯಲ್ಲಿ ನೋಡುವ ಕಾರ್ಟೂನ್‌ನ ಮುಂದುವರೆದ ಭಾಗ ಎಂದೂ ಅನಿಸಬಹುದು.

ಚಿತ್ರದಲ್ಲಿ ಎಂದಿನಂತೆ ಭೀಮ್ ಸಾಹಸ ತೋರಿಸುವ ಕಥೆ ಇದೆ. ಚಳಿಗಾಲದಲ್ಲಿ ಮನಾಲಿಯಲ್ಲಿ ಸ್ಕೈಯಿಂಗ್ ಹಾಗೂ ಕಾಲ ಕಳೆಯಲು ಚೋಟಾ ಭೀಮ್ ಚೋಟಾ ಭೀಮ್, ಚಿಟ್ಕಿ, ಕಾಲಿಯಾ ಪೆಹ್ಲ್‌ವಾನ್, ಡೋಲು ಮತ್ತು ಬೋಲು, ಪ್ರಿನ್ಸೆಸ್ ಇಂದುಮತಿ ಸೇರಿದಂತೆ ತನ್ನ ಸ್ನೇಹಿತರ ತಂಡದೊಂದಿಗೆ ತೆರಳುತ್ತಾನೆ. ಹಿಮಾಚಲ್ ಪ್ರದೇಶದ ರಾಜ್ಯವು ಹಿಡಿಂಬಕ್ ಡಕಾಯಿತನಿಂದ ತತ್ತರಗೊಂಡಿರುತ್ತದೆ. ಆಗಾಗ್ಗೆ ಈತ ತನ್ನ ಸೋದರಳಿಯ ಗಾಟ್ಟು ಮತ್ತು ಇನ್ನಿತರೆ ಸಹಚರರೊಂದಿಗೆ ಜತೆ ಸೇರಿ ಊರಿನೊಳಗೆ ನುಗ್ಗಿ ಡಕಾಯಿತಿ ಮಾಡುತ್ತಾನೆ. ಕೊನೆಗೆ ಸ್ಕೈ ಹೇಳಿಕೊಡುತ್ತಿದ್ದ ಸೇನೆಯ ರಿಟೈರ್ಡ್‌ ಯೋಧ ಸರ್ದಾರ್ ನೇಗಿ ಪುತ್ರ ದೇಶಪ್ರೇಮಿ ಧೀರುನನ್ನು ಘಾಸಿಗೊಳಿಸುತ್ತಾನೆ. ಇದರಿಂದ ರೊಚ್ಚಿಗೆದ್ದ ಸರ್ದಾರ್ ನೇಗಿ ಚೋಟಾ ಭೀಮ್‌ನ ತಂಡದೊಂದಿಗೆ ಸೇರಿ ಆತ ಇರುವ ಹಿಮಾಲಯದ ಮತ್ತೊಂದು ಬದಿಗೆ ತೆರಳಿ ಆಕ್ರಮಣ ನಡೆಸಲು ಸಜ್ಜಾಗುತ್ತಾನೆ. ನಂತರ ಹೇಗೆ ಚೋಟಾ ಭೀಮ್ ತನ್ನ ತಂಡದೊಂದಿಗೆ ಅಲ್ಲಿಗೆ ತೆರಳುತ್ತಾನೆ. ಈ ಮಧ್ಯೆ ಹೇಗೆ ಹಿಡಿಂಬಕ್ ತಪ್ಪಿಸಿಕೊಳ್ಳುತ್ತಾನೆ. ಆತನಿರುವ ಗುಹೆಯನ್ನು ಹೇಗೆ ಅಂತಹ ಕೊರೆಯುವ ಚಳಿ ಹಾಗೂ ಸ್ನೋ ಫಾಲ್‌ನಲ್ಲಿ ಕಂಡು ಹಿಡಿಯುತ್ತಾರೆ. ಆತ ಕದ್ದಿದ್ದ ವಜ್ರವೈಡೂರ್ಯಗಳನ್ನು ಮರಳಿ ತಂದು ರಾಜನಿಗೆ ಒಪ್ಪಿಸುತ್ತಾನೆ ಎಂಬ ಮಕ್ಕಳ ಕುತೂಹಲ ಕೆರಳಿಸುವ ಕಥೆ ಈ ಚಿತ್ರದಲ್ಲಿದೆ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>