Quantcast
Channel: VijayKarnataka
Viewing all articles
Browse latest Browse all 6795

ವಿಷ್ಣು ನೆನಪಿನ ಹಾಡು

$
0
0

ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿದ್ದರೂ, ನಾನಾ ರೂಪದಲ್ಲಿ ಅವರು ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಅಲ್ಲದೇ ಸಿನಿಮಾ ರಂಗದಿಂದಲೂ ಅವರನ್ನು ನೆನಪಿಸಿಕೊಳ್ಳುವ ಅನೇಕ ಕೆಲಸಗಳು ನಡೆಯುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆ ಹುಲಿದುರ್ಗಾ ಸಿನಿಮಾ ಹಾಡು. ವಿಷ್ಣುದಾದನಿಗಾಗಿಯೇ ಸಿನಿಮಾ ತಂಡ ವಿಶೇಷ ಹಾಡನ್ನು ಸಿದ್ಧಪಡಿಸಿದೆ. ವಿಷ್ಣು ಅಭಿನಯದ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳ ಶೀರ್ಷಿಕೆಯನ್ನು ಹಾಡಿನಲ್ಲಿ ಬಳಸಿಕೊಂಡು, ಸ್ಪೆಷಲ್ ಸಾಂಗ್ ರೆಡಿ ಮಾಡಿದೆ. ಆ ಹಾಡು ಮೊನ್ನೆಯಷ್ಟೇ ಶೂಟಿಂಗ್ ಆಗಿದೆ.

ಹಾಡಿನ ಚಿತ್ರೀಕರಣಕ್ಕೆ ಸೆಟ್ ಹಾಕಿದ್ದು, ಅಲ್ಲಿ ಕೇವಲ ವಿಷ್ಣು ಗುಣಗಾನ ಮಾಡಿದ್ದು ವಿಶೇಷ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದ್ದು, ಸಿದ್ದು ಕುಮಾರ್ ಸಂಗೀತ ನೀಡಿದ್ದಾರೆ.

'ಸಿನಿಮಾದ ಹೀರೋಗೆ ವಿಷ್ಣು ಸಾರ್ ಅಂದರೆ ಅಭಿಮಾನ. ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾನೆ. ಹೀಗಾಗಿ ಈ ಹಾಡನ್ನು ಸಿನಿಮಾದಲ್ಲಿ ಸೇರಿಸಿಕೊಳ್ಳಲಾಯಿತು. ನಮ್ಮ ಸಿನಿಮಾ ತಂಡದಿಂದ ವಿಷ್ಣುವರ್ಧನ್ ಅವರಿಗೆ ನೀಡುತ್ತಿರುವ ಗೌರವವಿದು. ಈ ಹಾಡು ಕಲರ್‌ಫುಲ್ ಆಗಿ ಮೂಡಿ ಬಂದಿದೆ. ಕಂಡಿತಾ ಎಲ್ಲರಿಗೂ ಇಷ್ಟ ಆಗುತ್ತದೆ ಅನ್ನುವ ನಂಬಿಕೆ ನನ್ನದು' ಅಂತಾರೆ ನಿರ್ಮಾಣದ ಹೊಣೆ ಹೊತ್ತಿರುವ ಕೆ.ಸುಧಾಕರ್.

ಕೆ.ವಿ.ಎಸ್ ಸಿನಿ ಪ್ರೊಡಕ್ಷನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಸುಪ್ರೀತ್ ಈ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕ ಅನಾಥ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಇದು ವಿಕ್ರಮ್ ಯಶೋಧರ್ ನಿರ್ದೇಶನದ ಸಿನಿಮಾ.

ಚಿತ್ರದಲ್ಲಿ ಸಾಕು ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಕಟ್ಟಿಕೊಡಲಾಗಿದೆ. ಅಲ್ಲದೇ ಅನೇಕ ಭಾವನಾತ್ಮಕ ಸನ್ನಿವೇಶಗಳು ಸಿನಿಮಾ ಜೀವಾಳ. ನಾಯಕನ ತಂದೆಯಾಗಿ ಗುರುರಾಜ್ ಹೊಸಕೋಟೆ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ರಘುವಿಜಯ್, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ ಮುಂತಾದವರಿದ್ದು, ರಮೇಶ್ ರಾಜ್ ಸಿನಿಮಾಟೋಗ್ರಾಫಿಯಲ್ಲಿ ಚಿತ್ರ ಮೂಡಿ ಬಂದಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>