Quantcast
Channel: VijayKarnataka
Viewing all articles
Browse latest Browse all 6795

ಬಸ್ ಪಯಣದಲ್ಲಿ ನಂಬಿಕೆಯ ಸಂಘರ್ಷ

$
0
0

* ಪದ್ಮಾ ಶಿವಮೊಗ್ಗ
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಲಾಸ್ಟ್ ಬಸ್ ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ, ನಿಗೂಢತೆ, ಭಯ, ಅಗೋಚರ ಶಕ್ತಿಯನ್ನು ಚಿತ್ರಿಸಲಾಗಿದೆ. ಲಾಸ್ಟ್ ಬಸ್ ಕಾಡಿನ ಮಧ್ಯೆ ಕತ್ತಲನ್ನು ಸೀಳಿಕೊಂಡು ಪ್ರಯಾಣ ಮಾಡುವಾಗ ನಡೆಯುವ ಅಚಾನಕ್ ಘಟನೆಗಳನ್ನೇ ಸಿನಿಮಾ ಮಾಡಲಾಗಿದೆ. ಇದು ಈ ವಾರ ತೆರೆಗೆ ಬರುತ್ತಿದೆ.

'ಸೈಕಲಾಜಿಕಲ್ ಹಾರರ್ ಸಿನಿಮಾದಲ್ಲಿ ಲಾಸ್ಟ್ ಬಸ್ ಹತ್ತಿದ ಪ್ರಯಾಣಿಕರಿಗೆ ದಾರಿಯಲ್ಲಿ ಪಾಳು ಬಿದ್ದ ಮನೆಯಲ್ಲಿ ಆಗುವ ಭಯಾನಕ ಎಕ್ಸ್‌ಪಿರಿಯನ್ಸ್ ಇದೆ. ತಮ್ಮ ಲಾಭಕ್ಕಾಗಿ ಮುಗ್ಧ ಜನರನ್ನು ಹೆದರಿಸುವ ಅನೇಕ ಮಾಧ್ಯಮಗಳು, ರಾಜಕಾರಣಿಗಳು, ಜನರೂ ಇದ್ದಾರೆ. ಜನರಿಗೆ ಸಂಬಂಧವಿಲ್ಲದಿರುವ ವಿಚಾರದಲ್ಲೂ ಭಯ ಹುಟ್ಟುಹಾಕಿ ಪ್ರಯೋಜನ ಪಡೆದುಕೊಂಡವರಿದ್ದಾರೆ. ಇದನ್ನು ಹೇಳಬೇಕು ಅಂತ ಈ ಕತೆಯನ್ನು ಆಯ್ದುಕೊಂಡೆವು' ಎನ್ನುತ್ತಾರೆ ನಿರ್ದೇಶಕ ಅರವಿಂದ್. ಇದರ ಜೊತೆ ನಂಬಿಕೆ ಕುರಿತ ಸಂಘರ್ಷ ಕೂಡಾ ಇದೆ ಅಂತಾರೆ.

ಚಿತ್ರದಲ್ಲಿ ನರಸಿಂಹರಾಜು ಮೊಮ್ಮಕ್ಕಳಾದ ಅವಿನಾಶ್ ಮತ್ತು ಸಮರ್ಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಲ್ಕು ಹಾಡುಗಳನ್ನು ಡಾ. ಕೆ.ವೈ. ನಾರಾಯಣ ಸ್ವಾಮಿ ಬರೆದಿದ್ದು, ಸ್ವತಃ ಅರವಿಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ದೂರಿ ದೂರಿ ಹಾಡು ಬಿಬಿಸಿ ಏಷ್ಯನ್ ರೇಡಿಯೋನಲ್ಲಿ ಪ್ರಸಾರವಾದ ಮೊದಲ ಕನ್ನಡ ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

'ದೂರಿ.. ಮತ್ತು 'ಕಂಡಿದ್ದು ಉಳಿದಿಲ್ಲ' ಹಾಡುಗಳು ಆನ್‌ಲೈನ್‌ನಲ್ಲಿ ಜನಪ್ರಿಯತೆ ಗಳಿಸಿವೆ. 'ಕಂಡಿದ್ದು ಉಳಿದಿಲ್ಲ' ಹಾಡು ಚಿತ್ರ ರಿಲೀಸ್ ಆದ ನಂತರ ಇನ್ನೂ ಹೆಚ್ಚು ಜನಪ್ರಿಯತೆ ಗಳಿಸುವ ವಿಶ್ವಾಸ ನಮ್ಮದು. ಹಾಡಿನಲ್ಲಿ ಕೆವೈಎನ್ ಚಿತ್ರದ ಒಟ್ಟು ಸಾರವನ್ನು ಅತ್ಯದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ' ಎನ್ನುತ್ತಾರೆ ಅರವಿಂದ್. ಕ್ಯಾಸಂಬಳ್ಳಿಯಲ್ಲಿರುವ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮನೆಯನ್ನು ದೆವ್ವದ ಮನೆಯನ್ನಾಗಿ ಪರಿವರ್ತಿಸಲಾಗಿದೆ. ಮಲೆನಾಡಿನಲ್ಲಿ 12 ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ 'ಹಾರಲು' ಹೂವಿನಿಂದಾವೃತ ಬೆಟ್ಟದ ಸುಂದರ ದೃಶ್ಯ ಚಿತ್ರದಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಅತ್ಯುನ್ನತ ಮಟ್ಟದ ಗ್ರಾಫಿಕ್ ತಂತ್ರಗಳನ್ನು ಬಳಸಲಾಗಿದೆ. ವಿಷ್ಯುಯಲ್ ಎಫೆಕ್ಟ್ ಅಮರನಾಥ್ ಮತ್ತು ಶ್ರವಣ್, ಅನಂತ್ ಅರಸ್‌ರ ಛಾಯಾಗ್ರಹಣವಿದೆ. ನಟ ಅವಿನಾಶ್ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ದೀಪಾ ಗೌಡ, ಮೇಘಶ್ರೀ, ಪ್ರಕಾಶ್ ಬೆಳವಾಡಿ ಮತ್ತಿತರರು ನಟಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>