ಮುಂಜಾನೆ ಐದು ಗಂಟೆಯಿಂದಲೇ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಾಸ್ಟರ್ ಪೀಸ್ ಚಿತ್ರ ರಾಯಚೂರಿನ ಚಿತ್ರಮಂದಿರದಲ್ಲಿ ಪ್ರದರ್ಶನವಾಗದ ಬಗ್ಗೆ ಗಲಾಟೆ ನಡೆದಿದೆ.
ಪತ್ರಿಕೆಗಳಲ್ಲಿನ ಜಾಹಿರಾತು ನೋಡಿ ರಾಯಚೂರಿನ ಮಿನಿ ಎಸ್ ಎನ್ ಟಿ ಚಿತ್ರಮಂದಿರದ ಬಳಿ ಬಂದವರಿಗೆ ನಿರಾಸೆ ಕಾದಿತ್ತು. ಚಿತ್ರಮಂದಿರದಲ್ಲಿ ಲೋಫರ್ (ತೆಲಗು) ಸಿನಿಮಾ ಪ್ರದರ್ಶನವಾಗುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಯಶ್ ಅಭಿಮಾನಿಗಳು ಚಿತ್ರಮಂದಿರದ ಮಾಲೀಕರೊಂದಿಗೆ ಜಗಳಕ್ಕೆ ಇಳಿದ ಘಟನೆ ನಡೆದಿದೆ.
ಇಬ್ಬರಿಗೆ ಗಾಯ, ಇಬ್ಬರ ಬಂಧನ:
ಗಂಗಾವತಿಯ ಶಿವ ಚಿತ್ರಮಂದಿರದ ಬಳಿ ಮಾಸ್ಟರ್ ಪೀಸ್ ಚಿತ್ರದ ಟಿಕೆಟ್ಗಾಗಿ ಗಲಾಟೆ ನಡೆದು ಇಬ್ಬರಿಗೆ ಗಾಯವಾಗಿರುವ ಬಗ್ಗೆ ವರದಿಯಾಗಿದೆ. ಜತೆಗೆ, ಗಲಾಟೆಯಲ್ಲಿ ಭಾಗಿ ಆದ ಇಬ್ಬರ ಬಂಧನವಾಗಿದೆ.
ಬೆಂಗಳೂರು: ಬಿಡುಗಡೆಗೂ ಮುನ್ನ ಹಲವು ದಾಖಲೆಗಳನ್ನು ಮಾಡಿರುವ ಮಾಸ್ಟರ್ ಪೀಸ್ ಚಿತ್ರ ಗುರುವಾರ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ರಾಯಚೂರಿನಲ್ಲಿ ಚಿತ್ರ ಬಿಡುಗಡೆ ಆಗದ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.