ಡಿಡಿಸಿಎ ಹಗರಣ ಸಂಬಂಧ ಜೇಟ್ಲಿ ರಾಜೀನಾಮೆಗೆ ಆಗ್ರಹಿಸಿ ತಮ್ಮ ಮುಂದಿನ ಅಂಗಣದಲ್ಲಿ ಗಲಾಟೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರನ್ನು ಮನವೊಲಿಸಲು ಸೋತ ಸ್ಪೀಕರ್ ಕೆಂಡವಾದರು. ಸದಸ್ಯರ ಗದ್ದಲದಲ್ಲಿ ದೇಶದ ಹಿತಾಸಕ್ತಿ ಬಲಿಯಾಗುತ್ತಿದೆ. ದೇಶದ ರಕ್ಷಣೆಗೆ ಸಂಬಂಧಿಸಿದ ಮಹತ್ವದ ವಿಷಯ ಕುರಿತು ಚರ್ಚಿಸಬೇಕಿದೆ. ಕಾಂಗ್ರೆಸ್ ಸದಸ್ಯರ ಮನವೊಲಿಸಿ ವಾಪಸ್ ಕಳಿಸಿ ಎಂದು ಬಿಜೆಡಿ ಸದಸ್ಯರ ಬೈಜಯಂತ್ ಪಾಂಡಾ ಮನವಿ ಮಾಡಿದರು. ಆಗ ಪ್ರಶ್ನೋತ್ತರ ಕಲಾಪ ನಡೆಯುತ್ತಿತ್ತು. ಎಷ್ಟೇ ಮನವೊಲಿಸಿದರೂ ಕಿವಿಗೆ ಹಾಕಿಕೊಳ್ಳದ ಕಾಂಗ್ರೆಸ್ ಸದಸ್ಯರ ವರ್ತನೆಗೆ ಬಗ್ಗೆ ಬೇಸತ್ತ ಸ್ಪೀಕರ್ ಮೇಲಿನಂತೆ ಗುಡುಗಿದರು. ಗಲಾಟೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಸದಸ್ಯರ ಹೆಸರು ಬರೆದು ತಮಗೆ ಕೊಡುವಂತೆ ಲೋಕಸಭೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಹೊಸದಿಲ್ಲಿ: 'ಸಂಸತ್ ಕಲಾಪಕ್ಕೆ ನಿರಂತರ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಸಂಸದರಿಗೆ ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಕಾಳಜಿಯೇ ಇಲ್ಲ. ಅವರು ಪರಮಸ್ವಾರ್ಥಿಗಳು,' ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕೆಂಡ ಕಾರಿದ್ದಾರೆ.