Quantcast
Channel: VijayKarnataka
Viewing all articles
Browse latest Browse all 6795

ಅತ್ಯಾಚಾರಿಗಳಿಂದ ಪಾರಾಗಲು ಬಾಲ್ಕನಿ ಜಿಗಿದ ಮಹಿಳೆ

$
0
0

ಹೊಸದಿಲ್ಲಿ: 26 ವರ್ಷದ ಮಹಿಳೆಯನ್ನು ಫ್ಲಾಟ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಐವರು ದುಷ್ಕರ್ಮಿಗಳನ್ನು ಸೋಮವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಪೂರ್ತಿ ಲೈಂಗಿಕ ದೌರ್ಜನ್ಯ ಅನುಭವಿಸಿದ ಮಹಿಳೆ ನಸುಕಿನ ಹೊತ್ತಿಗೆ ಅತ್ಯಾಚಾರಿಗಳ ಸೆರೆಯಿಂದ ತಪ್ಪಿಸಿಕೊಂಡು ಬಾಲ್ಕನಿಯಿಂದ ಜಿಗಿದು ಓಡಿ ಬಂದಿದ್ದರು.

ಮಹಿಳೆ ನೀಡಿದ ದೂರು ದಾಖಲಿಸಿಕೊಂಡ ದಿಲ್ಲಿಯ ಪಾಂಡವನಗರ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳೆಲ್ಲರೂ ವಿವಿಧ ಕಾಲ್‌ಸೆಂಟರ್‌ಗಳ ಉದ್ಯೋಗಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಯ ಭಲ್ಲಾ , ವಿಕಾಸ್‌ ಕುಮಾರ್‌, ನವೀನ್‌, ಸ್ವರಿತ್‌ ಮತ್ತು ಪ್ರತೀಕ್‌ ಬಂಧಿತ ಆರೋಪಿಗಳು. ಇವರ ಪೈಕಿ ಸ್ವರಿತ್‌ ಮಾತ್ರ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿದ್ದಾನೆ.

ಪರಿಚಿತನಾಗಿದ್ದ ವಿಕಾಸ್‌ ಮೊದಲು ಮಹಿಳೆಯನ್ನು ಸಂಪರ್ಕಿಸಿ, ಪಾರ್ಟಿಯ ಹೆಸರು ಹೇಳಿ ದಿಲ್ಲಿಯ ಪಾಂಡವನಗರದ ಪ್ಲಾಟ್‌ಗೆ ಕರೆದೊಯ್ದಿದ್ದ. ದಕ್ಷಿಣ ದಿಲ್ಲಿಯ ಮುನಿರ್ಕಾ ಪ್ರದೇಶದ ನಿವಾಸಿಯಾದ ಮಹಿಳೆ, ವಿಕಾಸ್‌ನನ್ನು ಸಂಪೂರ್ಣ ನಂಬಿದ್ದಳು.

ಪಾಂಡವನಗರದ ಫ್ಲಾಟಿನವರೆಗೆ ಏನನ್ನೂ ಸಂಶಯಿಸದೇ ನಡೆದು ಬಂದಿದ್ದ ಆಕೆ ಫ್ಲಾಟಿನಲ್ಲಿ ತನ್ನನ್ನು ಬಿಟ್ಟು ವಿಕಾಸ್‌ ಹೊರಟು ನಿಂತಾಗ ಮಾತ್ರ ಪ್ರಶ್ನಿಸಿದ್ದರು. 'ಏನೋ ಕೆಲಸ ಇದೆ. ಬೆಳಗ್ಗೆ ಬಂದು ಕರೆದುಕೊಂಡು ಹೋಗುವೆ,' ಎಂದು ಸಮಜಾಯಿಸಿ ಹೇಳಿ ಹೋದ. ಆ ಬಳಿಕ ಗೆಳೆಯರೊಂದಿಗೆ ಮರಳಿ ಬಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮದ್ಯಸೇವನೆ ಮಾಡಿದ್ದ ಆರೋಪಿಗಳು ರಾತ್ರಿ ಇಡೀ ಫ್ಲಾಟಿನಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬೆಳಗಿನ 5.30ರ ಸುಮಾರಿಗೆ ಹೇಗೋ ತಪ್ಪಿಸಿಕೊಂಡು ಬಾಲ್ಕನಿ ತಲುಪಿದ ಆಕೆ ಅಲ್ಲಿಂದ ಜಿಗಿದು ಓಡಿ ಬಂದಿದ್ದಾಳೆ. ಆಕೆಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>