Quantcast
Channel: VijayKarnataka
Viewing all articles
Browse latest Browse all 6795

ನೀರಜ್‌ಗೆ ಸೇನೆಯಲ್ಲಿ ಕಿರಿಯ ಅಧಿಕಾರಿ ಹುದ್ದೆ

$
0
0

ಹೊಸದಿಲ್ಲಿ: ವಿಶ್ವ ದಾಖಲೆ ಹೊಂದಿರುವ ಭಾರತದ ಏಕೈಕ ಅಥ್ಲೀಟ್‌ ಎಂಬ ಖ್ಯಾತಿ ಗಳಿಸಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸೇನೆಗೆ ಸೇರ್ಪಡೆಯಾಗಿದ್ದು, ರೈತರಾಗಿರುವ ತಮ್ಮ ತಂದೆಗೆ ಆರ್ಥಿಕ ನೆರವು ನೀಡಲು ಬಯಕೆ ವ್ಯಕ್ತಪಡಿಸಿದ್ದಾರೆ.

ಜಾವೆಲೆನ್‌ ಥ್ರೋ ವಿಭಾಗದಲ್ಲಿ ಜೂನಿಯರ್‌ ವಿಶ್ವ ದಾಖಲೆ ಹೊಂದಿರುವ ಚೋಪ್ರಾಅವರನ್ನು ಭಾರತೀಯ ಸೇನೆ ಜೂನಿಯರ್‌ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದೆ. ಆದರೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರದಲ್ಲಿನ ತರಬೇತಿಗಾಗಿ ಸದ್ಯ ರಜೆಯಲ್ಲಿದ್ದಾರೆ.

ಮಿಲಿಟರಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ನೀರಜ್‌ ಚೋಪ್ರಾ, ''ಚಂಢೀಗಡದಲ್ಲಿರುವ ಡಿಎವಿ ಕಾಲೇಜಿನ ನಿತ್ಯದ ತರಗತಿಯಿಂದ ಹೊರಗಿರಬೇಕಾಯಿತು. ಆದರೆ ಪ್ರಸ್ತುತ ದೂರ ಶಿಕ್ಷ ಣದ ಮೂಲಕ ಪದವಿ ಪೂರೈಸಿದ್ದೇನೆ. ಅಲ್ಲದೆ ಕಿರಿಯ ಅಧಿಕಾರಿಯಾಗಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದೇನೆ. ಈ ಕುರಿತು ಎಲ್ಲಾ ಪ್ರಕ್ರಿಯೆಗಳನ್ನು ಕಳೆದ ಡಿಸೆಂಬರ್‌ನಲ್ಲೇ ಪೂರ್ಣಗೊಳಿಸಿದ್ದು, ಹೊಸದಿಲ್ಲಿಯ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದೇನೆ. ಇದೀಗ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಜಾವೆಲಿನ್‌ ತರಬೇತಿ ಪಡೆಯುತ್ತಿದ್ದೇನೆ,'' ಎಂದು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

'ನನ್ನ ತಂದೆ ಓರ್ವ ರೈತ, ತಾಯಿ ಗೃಹಿಣಿ, ನಮ್ಮದು ಅವಿಭಕ್ತ ಕುಟುಂಬ. ಕುಟುಂಬದ ಯಾರೊಬ್ಬರು ಸರಕಾರಿ ಕೆಲಸ ಪಡೆದಿಲ್ಲ. ಆದ್ದರಿಂದ ನನಗೆ ಕೆಲಸ ಸಿಕ್ಕಿರುವುದು ಕುಟುಂಬದ ಪ್ರತಿಯೊಬ್ಬರಲ್ಲೂ ಸಂತಸ ಮೂಡಿಸಿದೆ. ನನಗೂ ಸಹ ಸಂತಸ ತಂದಿದೆ. ತರಬೇತಿಯೊಂದಿಗೆ ನನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಈಗ ಎಲ್ಲಾ ರೀತಿಯ ಸಾಮರ್ಥ್ಯ‌ ಹೊಂದಿದ್ದೇನೆ,' ಎಂದು ಹರಿಯಾಣದ ಪಾಣಿಪತ್‌ನ ಖಾಂದ್ರಾ ಗ್ರಾಮದ 19ರ ಹರೆಯದ ನೀರಜ್‌ ಹೇಳಿದ್ದಾರೆ.

2016ರ ಐಎಎಎಫ್‌ ವಿಶ್ವ 20 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 86.48ಮೀ. ದೂರ ಜಾವೆಲಿನ್‌ ಎಸೆದ ಚೋಪ್ರಾ, ಹೊಸ ಜೂನಿಯರ್‌ ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>