Quantcast
Channel: VijayKarnataka
Viewing all articles
Browse latest Browse all 6795

5 ಕೋಟಿ ಮತ್ತೆ, ಈಗ ಕೊಡಿ ಭತ್ಯೆ

$
0
0

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ ಮುಗಿದು ತಿಂಗಳು ಕಳೆದರೂ ಕ್ರೀಡಾಪಟುಗಳ ಭತ್ಯೆ ನೀಡದ ಸರಕಾರ

ಸೋಮಶೇಖರ್‌ ಪಡುಕರೆ

ಬೆಂಗಳೂರು: ''ಒಲಿಂಪಿಕ್ಸ್‌ನಲ್ಲಿ ಚಿನ್ನ,ಬೆಳ್ಳಿ ಹಾಗೂ ಕಂಚು ಗೆದ್ದವರಿಗೆ ಅನುಕ್ರಮವಾಗಿ 5, 3, 2 ಕೋಟಿ ರೂ. ಬಹುಮಾನ ನೀಡುತ್ತೇವೆ. ಉದ್ಯೋಗದಲ್ಲಿ ಆದ್ಯತೆ ನೀಡುತ್ತೇವೆ, ಕ್ರೀಡಾ ನೀತಿ ಜಾರಿಗೆ ತರುತ್ತೇವೆ, ರಾಷ್ಟ್ರಮಟ್ಟದಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡುತ್ತೇವೆ,'' ರಾಜ್ಯ ಸರಕರಾದ ಮಂತ್ರಿ ಮಹೋದಯರು ಅವಕಾಶ ಪ್ರತಿ ಕ್ರೀಡಾಕೂಟದಲ್ಲಿ ಹೇಳುವ ನಿತ್ಯದ ಮಾತಿದು. ಆದರೆ ಕರ್ನಾಟಕದಲ್ಲಿ ಕ್ರೀಡಾ ಪಟುಗಳ ವಾಸ್ತವ ಕತೆ ಬೇರೆಯೇ ಆಗಿದೆ.

ಕಳೆದ ತಿಂಗಳು ಹುಬ್ಬಳ್ಳಿ -ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಕ್ರೀಡಾಕೂಟದ ಭತ್ಯೆಯಾಗಿ 1,200 ರೂ.ಗಳನ್ನು ರಾಜ್ಯ ಸರಕಾರ ನೀಡಬೇಕಾಗಿತ್ತು. ಆದರೆ ಇದುವರೆಗೂ ನಮಗೆ ಈ ಚಿಕ್ಕ ಭತ್ಯೆ ಇನ್ನೂ ಕೈ ಸೇರಿಲ್ಲ ಎಂದು ಕ್ರೀಡಾಪಟುಗಳು ಹೇಳಿಕೊಳ್ಳುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ಘೋಷಿಸಿರುವುದು ಸ್ವಾಗತಾರ್ಹ, ಆದರೆ ಅದು ಗೆದ್ದಾಗ ನೀಡುವ ಬಹುಮಾನ. ಒಲಿಂಪಿಕ್ಸ್‌ನಲ್ಲಿ ಪದಕ ಸಿಗುವಂತೆ ಮಾಡಲು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರಿಗೆ ತುರ್ತಾಗಿ ಪ್ರೋತ್ಸಾಹ ನೀಡಬೇಕಾದ ಅನಿವಾರ‍್ಯತೆ ಸರಕಾರದ ಮುಂದಿದೆ.

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು ಎಂಬ ಸುದ್ದಿ ಆರಂಭದಲ್ಲಿ ಹಬ್ಬಿತ್ತು, ಆದರೆ ದಾಖಲೆ ಮಾಡಿದ ಕ್ರೀಡಾಪಟುವೊಬ್ಬರು ಸಂಘಟಕರನ್ನು ಈ ಬಗ್ಗೆ ಪ್ರಶ್ನಿಸಿದಾಗ, ''ನಗದು ಬಹುಮಾನಕ್ಕೆ ಬಜೆಟ್‌ ಇಲ್ಲ, ಈ ಬಾರಿ ಕೊಡಲಾಗದು,'' ಎಂಬ ಉತ್ತರ ನೀಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕ್ರೀಡಾಕೂಟ ನಡೆದರೆ ಕ್ರೀಡಾಕೂಟ ಮುಕ್ತಾಯವಾಗುವುದರೊಳಗೆ ಕ್ರೀಡಾಪಟುಗಳಿಗೆ ಸೇರಬೇಕಾಗಿದ್ದ ಭತ್ಯೆಯನ್ನು ನೀಡಿ ಕಳುಹಿಸುತ್ತಾರೆ. ದಸರಾ ಕ್ರೀಡಾಕೂಟ ಇದಕ್ಕೆ ಮಾದರಿ. ಅಲ್ಲಿ ಪದಕ ಗೆದ್ದವರಿಗೆ ಹಾಗೂ ದಾಖಲೆ ಬರೆದವರಿಗೆ ಅದೇ ದಿನ ನಗದು ಬಹುಮಾನ ಹಾಗೂ ಕ್ರೀಡಾಕೂಟ ಮುಗಿಯುತ್ತಿದ್ದಂತೆ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ ಇವೆಲ್ಲವನ್ನೂ ಮರೆತು, ರಾಜ್ಯ ಸರಕಾರ ನೀಡಿರುವ 3 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಕೈ ತೊಳೆದುಕೊಂಡಿದೆ.

ಇಲ್ಲಿ ಕೇಳುವರಿಲ್ಲ

''ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಗೆಲ್ಲುವಂತೆ ಮಾಡುವುದು ನಮ್ಮ ಗುರಿ,'' ಎಂದು ರಾಜ್ಯ ಯುವಜನ ಸೇವಾ ಕ್ರೀಡಾ ಸಚಿವ ಪ್ರಮೋದ ಮಧ್ವರಾಜ್‌ ಕ್ರೀಡಾಕೂಟದ ವೇಳೆ ಹೇಳಿದ್ದಾರೆ. ಅಲ್ಪ ಮೊತ್ತದ ಭತ್ಯೆಯನ್ನು ನೀಡಲಾಗದೆ ಬಜೆಟ್‌ ಇಲ್ಲ ಎಂದು ಹೇಳುವ ರಾಜ್ಯ ಸರಕಾರ ಟೋಕಿಯೊದಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳನ್ನು ಹುಟ್ಟುಹಾಕಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ''ಸರ್‌ ನಮಗೆ 5 ಕೋಟಿ ರೂ. ಬಹುಮಾನ ಬೇಡ, ಏಕೆಂದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತೇವೋ ಇಲ್ಲವೋ ಬೇರೆ ಮಾತು, ಆದರೆ ರಾಜ್ಯಮಟ್ಟದಲ್ಲಿ ಗೆದ್ದಿರುವ ಪದಕಗಳಿಗೆ ಬೆಲೆ ಕೊಡಲಿ, ಅದು ಸಾಧ್ಯವಿಲ್ಲವೆಂದರೆ ಕನಿಷ್ಠ ಭತ್ಯೆಯನ್ನಾದರೂ ಸೂಕ್ತ ಸಮಯದಲ್ಲಿ ನೀಡಲಿ,'' ಎಂದು ರಾಜ್ಯ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದಿರುವ ಕ್ರೀಡಾಪಟುವೊಬ್ಬರು ಹೇಳಿದ್ದಾರೆ.

''ಮಂಗಳೂರಿನಲ್ಲಿ ನಡೆದ ಫೆಡರೇಷನ್‌ ಕಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದೆ, ಇದುವರೆಗೂ ಅದಕ್ಕೆ ಸಂಬಂಧಿಸಿದ ನಗದು ಬಹುಮಾನ ಬಂದಿಲ್ಲ, ನಮ್ಮ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷರು ರಾಜ್ಯದ ಪ್ರಮುಖ ಖಾತೆಯಾಗಿರುವ ಗೃಹ ಖಾತೆಯನ್ನು ಹೊಂದಿದ್ದಾರೆ, ಆದರೆ ಅವರಿಗೆ ಕ್ರೀಡಾಪಟುಗಳ ಸಮಸ್ಯೆಗಳ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ,'' ಎಂದು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಕ್ರೀಡಾಪಟುವೊಬ್ಬರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ನಾಲ್ಕು ವರ್ಷಗಳ ನಗದು ಬಹುಮಾನ

ತಮಿಳುನಾಡು, ಕೇರಳ, ಹರಿಯಾಣ, ಪಂಜಾಬ್‌ ಯಾವುದೇ ರಾಜ್ಯವನ್ನು ತೆಗೆದುಕೊಂಡರೂ ಅಲ್ಲಿ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಉದ್ಯೋಗ ನೀಡುತ್ತಿದೆ. ಉದ್ಯೋಗದಲ್ಲಿ ಕ್ರೀಡಾ ಸಾಧಕರಿಗೆ ಮೀಸಲಾತಿಯನ್ನು ಜಾರಿಗೆ ತಂದಿದೆ. ಪದಕ ಗೆದ್ದು ಬರುತ್ತಿದ್ತಂತೆ ಉದ್ಯೋಗವನ್ನು ಘೋಷಿಸಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಪೊಲೀಸ್‌ ಪೇದೆ ಹಾಗೂ ಅರಣ್ಯ ರಕ್ಷಕರ ಹುದ್ದೆ ಹೊರತುಪಡಿಸಿದರೆ ಉನ್ನತ ಹುದ್ದೆಗಳು ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ. ಉದ್ಯೋಗದ ಮಾತು ಒತ್ತಟ್ಟಿಗಿರಲಿ, ಸರಕಾರವೇ ಘೋಷಿಸಿರುವ ನಗದು ಬಹುಮಾನ ಕಳೆದ 4 ವರ್ಷಗಳಿಂದ ಕ್ರೀಡಾಪಟುಗಳ ಕೈ ಸೇರಿಲ್ಲ.

ಕ್ರೀಡಾ ಇಲಾಖೆ ನಿಲುವು

ಈ ಸಮಸ್ಯೆ ಕುರಿತು ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್‌ ಅಗರ್ವಾಲ್‌ ಅವರನ್ನು ಸಂಪರ್ಕಿಸಿದಾಗ, ''ಭತ್ಯೆಯನ್ನು ಕ್ರೀಡಾಪಟುಗಳ ಖಾತೆಗೆ ಜಮಾ ಮಾಡಲಾಗುವುದು. ಈ ಪ್ರಕ್ರಿಯೆ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ. ಕೆಲವು ಕ್ರೀಡಾಪಟುಗಳು ನೀಡಿದ ಆರ್‌ಟಿಜಿಎಸ್‌ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಈ ಕಾರಣ ವಿಳಂಬವಾಗಿದೆ,'' ಎಂದಿದ್ದಾರೆ.

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರಿಗೂ ಇದುವರೆಗೂ ಯಾವುದೇ ಭತ್ಯೆ ಸಿಗಲಿಲ್ಲ, ''ಕ್ರೀಡಾಕೂಟದಲ್ಲಿ ತಾಂತ್ರಿಕ ಅಧಿಕಾರಿಯಾಗಿ ಜವಾಬ್ದಾರಿ ನಿಭಾಯಿದ್ದೇನೆ, ಇದುವರೆಗೂ ಯಾವುದೇ ಭತ್ಯೆ ನನ್ನ ಖಾತೆಗೆ ಜಮಾ ಆಗಿಲ್ಲ,'' ಎಂದು ರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!