Quantcast
Channel: VijayKarnataka
Viewing all articles
Browse latest Browse all 6795

ಡೇವಿಸ್‌ ಕಪ್‌ಗೆ ಲಿಯಾಂಡರ್‌ ಲಭ್ಯ

$
0
0

ಡೇವಿಸ್‌ ಕಪ್‌: ಏಪ್ರಿಲ್‌ 7ರಿಂದ ನಡೆಯಲಿರುವ ಉಜ್ಬೇಕಿಸ್ತಾನ ಎದುರಿನ ಪಂದ್ಯಕ್ಕೆ ತಂಡ ಪ್ರಕಟ

ಹೊಸದಿಲ್ಲಿ: ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಓಷಿಯಾನಿಯಾ ವಲಯದ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಕ್ಕೆ ಪ್ರಕಟಿಸಲಾದ ಭಾರತ ಡೇವಿಸ್‌ ಕಪ್‌ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಈ ಮೂಲಕ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ ಎಂದು ಹಬ್ಬಿದ್ದ ಉಹಾಪೋಹಗಳಿಗೆ ತೆರೆಬಿದ್ದಾಂತಾಗಿದೆ.

ಇದೇ ಮೊದಲ ಬಾರಿ ಆಟವಾಡದ ನಾಯಕರಾಗಿ ನೇಮಕಗೊಂಡಿರುವ ಮಹೇಶ್‌ ಭೂಪತಿ ಅವರ ನೇತೃತ್ವದ ತಂಡದಲ್ಲಿ ಮತ್ತೊಬ್ಬ ಹಿರಿಯ ಆಟಗಾರ ರೋಹನ್‌ ಬೋಪಣ್ಣ ಅವರಿಗೆ ಮರಳಿ ಸ್ಥಾನ ನೀಡಲಾಗಿದೆ.

ಕಳೆದ ತಿಂಗಳು ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯಕ್ಕೆ ಬೋಪಣ್ಣ ಅವರನ್ನು ಕಡೆಗಣಿಸಲಾಗಿತ್ತು. ಈ ಪಂದ್ಯದಲ್ಲಿ ಭಾರತ 4-1ರ ಜಯ ದಾಖಲಿಸಿತ್ತು. ಇತ್ತೀಚೆಗೆ ಕೊನೆಗೊಂಡ ದುಬೈ ಎಟಿಪಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೋಪಣ್ಣ, ಜತೆಗಾರ ಮಾರ್ಟಿನ್‌ ಮಟೊವ್‌ಸ್ಕೀ ಜತೆಗೂಡಿ ರನ್ನರ್‌ ಅಪ್‌ ಸ್ಥಾನ ಗಳಿಸಿದ್ದರು. ಪೇಸ್‌ ಸಹ ಜತೆಗಾರ ಗ್ರಾಸಿಯಾ ಗುಲೆರ್ಮೊ ಲೋಪೆಂಜ್‌ ಅವರೊಟ್ಟಿಗೆ ಸೆಮಿಫೈನಲ್‌ ತಲುಪಿದ್ದರು.

ಭಾರತ ತಂಡ, ಡಬಲ್ಸ್‌ ವಿಭಾಗದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಅವರನ್ನು ಹೊಂದಿದ್ದರೆ, ಸಿಂಗಲ್ಸ್‌ನಲ್ಲಿ ಯೂಕಿಭಾಂಬ್ರಿ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಅವರನ್ನು ಒಳಗೊಂಡಿದೆ.

ಸಾಕೇತ್‌ ಮೈನೇನಿ ಹಾಗೂ ಸುಮಿತ್‌ ನಾಗಲ್‌ ಗಾಯದ ಸಮಸ್ಯೆಗಳಿಂದಾಗಿ ಅಲಭ್ಯರಾಗಿದ್ದಾರೆ. ಹೀಗಾಗಿ ರಾರ‍ಯಂಕಿಂಗ್‌ನಲ್ಲಿ ಉತ್ತಮ ಸ್ಥಾನದಲ್ಲಿರುವ ರಾಮ್‌ಕುಮಾರ್‌ ರಾಮನಾಥನ್‌, ಯೂಕಿ ಭಾಂಬ್ರಿ ಹಾಗೂ ರೋಹನ್‌ ಬೋಪಣ್ಣ ನೇರವಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಉನ್ನತ ರಾರ‍ಯಂಕ್‌ ಹೊಂದಿದ್ದರೂ ಬೋಪಣ್ಣ ಅವರಿಗೆ ಸ್ಥಾನ ಲಭ್ಯವಾಗಿರಲಿಲ್ಲ. ಆದರೆ ವಿಶ್ವದ 24ನೇ ರಾರ‍ಯಂಕ್‌ ಹೊಂದಿರುವ ರೋಹನ್‌, ತಮ್ಮ ಸ್ಥಾನ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಏ.7ರಿಂದ ಪಂದ್ಯ

ಏಷ್ಯಾ ಓಷಿಯಾನಿಯಾ ವಿಭಾಗದ 2ನೇ ಸುತ್ತಿನ ಪಂದ್ಯ ಏಪ್ರಿಲ್‌ 7-9ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಇಲ್ಲಿ ಜಯ ದಾಖಲಿಸುವ ತಂಡ ವಿಶ ಗ್ರೂಪ್‌ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಆಸ್ಪ್ರೇಲಿಯಾ ಓಪನ್‌ ಟೂರ್ನಿಯಲ್ಲಿ ನೊವಾಕ್‌ ಜೊಕೊವಿಕ್‌ಗೆ ಆಘಾತ ನೀಡಿದ ವಿಶ್ವದ 68ನೇ ರಾರ‍ಯಂಕ್‌ನ ಆಟಗಾರ ಡೆನಿಸ್‌ ಇಸ್ಟೋಮಿನ್‌ ಉಜ್ಬೇಕಿಸ್ತಾನ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ ತಂಡ ಇಂತಿದೆ

ಲಿಯಾಂಡರ್‌ ಪೇಸ್‌ (ಡಬಲ್ಸ್‌).

ರೋಹನ್‌ ಬೋಪಣ್ಣ (ಡಬಲ್ಸ್‌).

ಯೂಕಿಭಾಂಬ್ರಿ (ಸಿಂಗಲ್ಸ್‌).

ರಾಮ್‌ಕುಮಾರ್‌ ರಾಮನಾಥನ್‌ (ಸಿಂಗಲ್ಸ್‌).


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>