ಆನಂದ ಮಹದಾನಂದ ಆನಂದ ಎಂದರೇನು? ಆನಂದ ಎನ್ನುವುದು ಸ್ವಾನುಭವವೇ ಅಥವಾ ಜಾತಕನ ಕುಂಡಲಿಯೊಳಗಿನ ಗ್ರಹಗಳ ಪ್ರಭಾವವೇ? ಆನಂದದ ತ್ರಿಕೋಣ ಎಂದರೇನು? ಒಂದು ನೋಟ. * ಶ್ಯಾಮಲಾ ಬಿ. ಆನಂದವೇ ಪರಬ್ರಹ್ಮ ಎನ್ನುತ್ತದೆ ತೈತ್ತರೀಯೋಪನಿಷತ್. ಆನಂದವನ್ನು ಗೃಹಸ್ಥಾಶ್ರಮದಲ್ಲಿದ್ದರೂ ಹೊಂದಬಹುದು. ಹಾಗಾದರೆ ಆನಂದವನ್ನು ಹೊಂದುವುದು ಎಂದರೇನು? ಅದು ಸ್ವಾನುಭವವೇ ಅಥವಾ ಅಂತರಂಗದ ನೆಮ್ಮದಿಯೇ? ಅಂತರಂಗದ ನೆಮ್ಮದಿ ಅನೇಕ ರೂಪವಾಗಿದ್ದರೂ ಅಪೇಕ್ಷೆಯ ಮೂಲ ಮಾತ್ರ ಒಂದೇ ಆಗಿದೆ. ಜೀವನದ ಪ್ರತಿ ಹಂತದಲ್ಲೂ ವ್ಯಕ್ತಿ ಪಡೆಯುವ ಸುಖ, ಸಂತೋಷ, ಆನಂದ ಎಂಬುದು ಯಾವ ರೂಪದಲ್ಲಿ, ಯಾವ ಪ್ರಮಾಣದಲ್ಲಿ ಮತ್ತು ಅದನ್ನು ಅನುಭವಿಸುವ ಕಾಲ ಅದರಲ್ಲಿ ಬರುವ ದೋಷಗಳು, ದುಃಖ ಮತ್ತು ಪ್ರಮಾದಗಳು ಹಾಗೂ ಒಡಕುಗಳು ಎಲ್ಲವನ್ನು ಕುÇಂಕುಶವಾಗಿ ಜ್ಯೋತಿಷ್ಯಶಾಸ್ತ್ರದ ಸಹಾಯದಿಂದ ತಿಳಿಯಬಹುದಾಗಿದೆ. ಸ್ತ್ರೀ ಜಾತಕದಲ್ಲಿ ಈ ಆನಂದದ ಪರಾಮರ್ಶೆ ಹೇಗೆಂಬುದನ್ನು ತಿಳಿಯೋಣ. ಮೋಕ್ಷ ತ್ರಿಕೋಣ ಸ್ಥಾನಗಳಾದ ಚತುರ್ಥ, ಅಷ್ಟಮ ಹಾಗೂ ದ್ವಾದಶ ಸ್ಥಾನಗಳೇ ಅಂತರಂಗ ಆನಂದವನ್ನು ಸೂಚಿಸುವ ತ್ರಿಕೋಣ ಸ್ಥಾನಗಳಾಗಿವೆ. ಈ ಸ್ಥಾನಗಳ ಪರಾಮರ್ಶೆ ಸ್ತ್ರೀ ಜಾತಕದಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. * ಚತುರ್ಥಅಂತರಂಗ ಆನಂದವಾದುದರಿಂದ, ಸ್ತ್ರೀಯ ಅಂತರಂಗದ ಆನಂದವು, ಮುಖ್ಯವಾಗಿ ಕುಟುಂಬದ ಸುಖ, ಶಾಂತಿ, ನೆಮ್ಮದಿ, ಏಳಿಗೆಗಳೆಲ್ಲವನ್ನೂ ಅವಲಂಬಿಸಿರುವುದರಿಂದ ಈ ಚತುರ್ಥ ಭಾವದಿಂದಲೂ, ಎಲ್ಲ ಕೋನಗಳಿಂದಲೂ, ಎಲ್ಲರಿಗೂ ಉತ್ತಮ ಫಲದಾಯಕವಾದುದರಿಂದ ಚತುರ್ಥವನ್ನು ಸ್ತ್ರೀ ಜಾತಕದಲ್ಲಿ ಮುಖ್ಯವಾಗಿ ಪರಿಗಣಿಸುವುದು ಸೂಕ್ತವಾಗಿದೆ. * ಚತುರ್ಥಸ್ಥಾನವು ಶುದ್ಧವಾಗಿದ್ದೂ, ಪಾಪಗ್ರಹ ಸಂಬಂಧವನ್ನು ಹೊಂದದಿದ್ದಲ್ಲಿ ಅಂತರಂಗದ ಆನಂದ ಹೊಂದಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಆಕೆಗೆ ದೊರೆತ ಸಂಸ್ಕಾರವೂ(ದ್ವಿತೀಯ) ಸಹ ಪ್ರಮುಖವಾಗಿದೆ. *ಅಷ್ಟಮ ಸ್ಥಾನವು ದಾಂಪತ್ಯಾನಂದ ಸ್ಥಾನವಾಗಿರುವುದರಿಂದ, ಪತಿಗೃಹವನ್ನೂ, ವೈವಾಹಿಕ ಜೀವನವನ್ನು ಸೂಚಿಸುವುದು. ಅಷ್ಟಮ ಶುದ್ಧತೆಯು ಅತ್ಯಂತ ಪ್ರಮುಖವಾಗಿದ್ದರೂ, ದೋಷಗಳು ಕಂಡುಬಂದಲ್ಲಿ ಅಂತರಂಗದಾನಂದ ಹೊಂದಿರುವ ನಾರಿಯು ಯಾರಿಗೂ ತಿಳಿಸದೆ ತನ್ನ ದಾಂಪತ್ಯವನ್ನು ಸರಿಮಾಡಿಕೊಳ್ಳುವಲ್ಲಿ ಸಫಲಳಾಗುವುದರೊಂದಿಗೆ ದಾಂಪತ್ಯಾನಂದವನ್ನು ಹೊಂದುವಳು. * ಅಷ್ಟಮವು ಸ್ತ್ರೀ ಜಾತಕದಲ್ಲಿ ಮಾಂಗಲ್ಯ ಸ್ಥಾನವೂ ಆಗಿದ್ದು, ಆ ಸ್ಥಾನದಲ್ಲಿ ಕುಜ, ರಾಹುವಿನಿಂದ ಉಂಟಾಗುವ ದೋಷಗಳನ್ನು, ಅನಾಹುತಗಳನ್ನು ವಿವಾಹ ಪೂರ್ವದಲ್ಲೇ ಗುರುತಿಸಿ, ಪರಿಹಾರಗಳನ್ನು ನೀಡಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದಲ್ಲಿ ದಾಂಪತ್ಯಾನಂದವನ್ನು ಸುದೀರ್ಘ ಕಾಲದವರೆಗೂಅನುಭವಿಸಲು ಸಾಧ್ಯವಾಗುವುದು. * ದ್ವಾದಶ ಸ್ಥಾನವು ಶಯನಾನಂದ ಸ್ಥಾನವಾಗಿದ್ದು, ಈ ಸ್ಥಾನದಲ್ಲಿ ರವಿಯ ಸ್ಥಿತತ್ವ ಅಧಿಕಾರಯುತ ನಡತೆಯಿಂದ ಶಯನ ಸುಖ ನಾಶವನ್ನು, ಕುಜನ ಸ್ಥಿತತ್ವ ಜಗಳಗಳಿಂದ ಸುಖ ನಾಶವನ್ನು, ಶನಿಯ ಸ್ಥಿತತ್ವ ಮಂದತ್ವದಿಂದ ಸುಖ ನಾಶವನ್ನು, ರಾಹುವಿನ ಸ್ಥಿತತ್ವ ಶಯನ ಸುಖದ ಅಪಹರಣ ಅಥವಾ ವಂಚನೆಯನ್ನು, ಕೇತು ಶಯನ ಸುಖಕ್ಕೆ ಮೋಕ್ಷ ವನ್ನು ಮತ್ತು ಗುರುವಿದ್ದಾಗ ಅದ್ಯಾತ್ಮ ಚಿಂತನೆಯಿಂದ ಶಯನ ಸುಖ ನಾಶವನ್ನು ಸೂಚಿಸುವುದು. * ಈ ಗ್ರಹಗಳು ದ್ವಾದಶದಲ್ಲಿರುವುದೇ ವಿಚ್ಛೇಧನೆಗೆ ಕಾರಣವಾಗಿ ಶಯನ ಸುಖ ನಾಶಕ್ಕೆ ಪೂರಕ ಅಂಶಗಳಾಗುವುವು. * ಆನಂದ ತ್ರಿಕೋಣ ಸ್ಥಾನಗಳಿಗೆ ಮಾರಕ, ಬಾಧಕ, ದುಸ್ಥಾನದ ಸಂಬಂಧದಿಂದ ಉಂಟಾಗುವ ದೋಷಗಳನ್ನು ಪರಿಹರಿಸಿಕೊಂಡು, ಮುನ್ನೆಚ್ಛರಿಕೆಯ ಕ್ರಮಗಳನ್ನು ಅನುಸರಿಸಿದಲ್ಲಿ ಆನಂದದಿಂದ ಜೀವಿಸಲು ಸಾಧ್ಯವಾಗುವುದು. ಆನಂದ ತ್ರಿಕೋಣಗಳಾದ 4, 8 ಹಾಗೂ 12 ಸ್ಥಾನಗಳು ಸ್ತ್ರೀ ಜಾತಕದಲ್ಲಿ ಸಮಕೋನ ತ್ರಿಭುಜವಾಗಿದ್ದರೆ ಉತ್ತಮ ಫಲವು. ಸಮ ದ್ವಿಬಾಹು ತ್ರಿಭುಜವಾಗಿದ್ದರೆ ಮಧ್ಯಮ ಫಲವು ಹಾಗೂ ವಿಷಮಬಾಹು ತ್ರಿಭುಜವಾಗಿದ್ದರೆ ಅಧಮ ಫಲವು ಎಂಬುದನ್ನು ಸೂಚಿಸುವುದು.ಅಂತರಂಗ ದುಃಖದಿಂದ ಕೂಡಿದ್ದರೂ ಆನಂದ ಹೊಂದಲು ಸಾಧ್ಯವಿಲ್ಲ. ದಾಂಪತ್ಯ ಜೀವನ ಸಮಸ್ಯೆಗಳಿಂದ ಕೂಡಿದ್ದರೂ ಆನಂದ ಹೊಂದುವುದು ಕಷ್ಟವಾಗುವುದು. ಶಯನವೂ ದೋಷಗಳಿಂದ ಕೂಡಿದ್ದರೆ ಶಯನಾನಂದ ಸಾಧÜ್ಯವಾಗುವುದಿಲ್ಲ. ಇವುಗಳಿಂದ ಸ್ತ್ರೀ ಕಷ್ಟ ಅನುಭವಿಸುವುದಲ್ಲದೇ, ಕುಟುಂಬವೂ ತೊಂದರೆಗಳನ್ನು ಎದುರಿಸಬೇಕಾಗುವುದು. ಆದ್ದರಿಂದ ಈ ಆನಂದ ತ್ರಿಕೋಣ ಸ್ಥಾನಗಳಾದ 4, 8 ಮತ್ತು 12 ಸ್ಥಾನಗಳಿಗೆ ದೋಷಗಳಿರಬಾರದು. ಮೂರೂ ಕೋನಗಳ ಪೂರಕ ಸ್ಥಿತಿ ಪೂರ್ಣಬ್ರಹ್ಮಾನಂದವನ್ನು ಹೊಂದಲು ಸಾಧÜ್ಯವಾಗುವುದು. ಈ ತ್ರಿಕೋನ ಸ್ಥಾನಗಳು ಸ್ತ್ರೀಯ ಆನಂದವನ್ನು ಕಾಪಾಡುವ ಮುಖ್ಯ ಸ್ಥಾನಗಳಾಗಿವೆ.
↧
ಆನಂದ ಭಾವವನ್ನು ನೀಡುವ ಸ್ಥಾನಗಳು
↧