Quantcast
Channel: VijayKarnataka
Viewing all articles
Browse latest Browse all 6795

‘ಹೆಬ್ಬುಲಿ’ ದರ್ಶನಕ್ಕೆ ನೂಕುನುಗ್ಗಲು: ಅಭಿಮಾನಿಗಳಿಗೆ ಲಾಠಿ ರುಚಿ

$
0
0

ಮಂಡ್ಯ: ನಗರದ ಮಹಾವೀರ ಚಿತ್ರಮಂದಿರ ಆವರಣದಲ್ಲಿ ಚಿತ್ರನಟ ಸುದೀಪ್‌ ಅವರನ್ನು ನೋಡಲು ಗುರುವಾರ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ನಿಯಂತ್ರಿಸಲು ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದರು.

'ಧಿಹೆಬ್ಬುಲಿ' ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಮಹಾವೀರ ಚಿತ್ರಮಂದಿರಕ್ಕೆ ಮಧ್ಯಾಹ್ನ 2.45ಕ್ಕೆ ಸುದೀಪ್‌ ಆಗಮಿಸಿದರು. ಅವರು ಮಾತನಾಡಲು ವ್ಯವಸ್ಥೆ ಮಾಡಿದ್ದ ಧ್ವನಿವರ್ಧಕ ಕೈಕೊಟ್ಟಿತು. ನಿರಾಸೆಗೊಂಡ ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಲು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು, ಲಾಠಿ ರುಚಿ ತೋರಿಸಿ ಗುಂಪು ಚದುರಿಸಿದರು. ಚಿತ್ರದ ಯಶಸ್ಸಿಗೆ ಕಾರಣವಾದ ಅಭಿಮಾನಿಗಳಿಗೆ ಸುದೀಪ್‌ ಧನ್ಯವಾದ ಹೇಳಿ ಅಲ್ಲಿಂದ ನಿರ್ಗಮಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್‌, ''ಹೆಬ್ಬುಲಿ ಚಿತ್ರದ ಯಶಸ್ಸಿ ಹಿನ್ನೆಲೆ ಎಲ್ಲರಿಗೂ ಥ್ಯಾಂಕ್ಸ್‌ ಹೇಳಲು ಬಂದಿದ್ದೇನೆ. ಇಡೀ ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಬಂದಿದೆ,'' ಎಂದು ಸಂತಸ ಹಂಚಿಕೊಂಡರು.

''ಡಬ್ಬಿಂಗ್‌ ಹೋರಾಟ ಇಂದು, ನೆನ್ನೆಯದಲ್ಲ. ತುಂಬಾ ದಿನದಿಂದ ನಡೆಯುತ್ತಿದೆ. ನಮಗೆ ತಂದೆ, ತಾಯಿ ತುಂಬಾ ಮುಖ್ಯ. ಅಷ್ಟೇ ಪ್ರೀತಿ. ಆ ಪ್ರೀತಿ ಎಲ್ಲಿದ್ದರೂ ಕಡಿಮೆಯಾಗಲ್ಲ. ನಾವು ಎಲ್ಲೇ ಇದ್ದರೂ ತಂದೆ ತಾಯಿಗೆ ಕರೆ ಮಾಡಿ ಮಾತನಾಡ್ತೇವೆ. ತಂದೆ-ತಾಯಿ ಪಕ್ಕ ಇದ್ರೆ ಮಾತ್ರ ಪ್ರೀತಿ ಅನ್ಕೋಬೇಡಿ. ಕನ್ನಡ ನಮ್ಮದಲ್ವ. ವೈಯಕ್ತಿಕವಾಗಿ, ದೈಹಿಕವಾಗಿ ಮಾತ್ರ ಕನ್ನಡದ ಪರ ಇದ್ದೇವೆ ಅಂದ್ರೆ ತಪ್ಪಾಗುತ್ತೆ. ನಾವು ಎಲ್ಲೇ ಇದ್ರೂ ಹೋರಾಟ ಮಾಡುತ್ತೇವೆ,'' ಎಂದು ಡಬ್ಬಿಂಗ್‌ ಕುರಿತು ಪ್ರತಿಕ್ರಿಯಿಸಿದರು.

''ದಿಢೀರ್‌ ಆಗಿ ಹೋರಾಟ ಹಮ್ಮಿಕೊಂಡಿರೋದ್ರಿಂದ ಅಲ್ಲಿಗೆ ಹೋಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದ್ರೆ ನಾವು ನಮ್ಮ ಚಿತ್ರರಂಗವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ'' ಎಂದರು.

ರಿಯಾಲಿಟಿ ಶೋ ಗಾಯಕಿ ಸುಹಾನ ಖಂಡಿತವಾಗಿ ನಮ್ಮ ಹೆಮ್ಮೆ. ಅವರು ಮತ್ತು ಅವರ ಜೀವನ ಚೆನ್ನಾಗಿರಬೇಕು. ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ. ಖಂಡಿತವಾಗಿ ಅವರು ಮುಂದುವರಿಯುತ್ತಾರೆ,'' ಎಂದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>