Quantcast
Channel: VijayKarnataka
Viewing all articles
Browse latest Browse all 6795

ಕನ್ನಡ ಭಾಷೆ ಅಳಿವಿನಂಚಿನಲಿಲ್ಲ

$
0
0

ಮಂಡ್ಯ: ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ನಮ್ಮ ಮಾತೃ ಭಾಷೆ ಆಗಿಯೇ ಎಂದೆಂದಿಗೂ ಅಳಿಯದೇ ಉಳಿಯುತ್ತದೆ ಎಂದು ಕರ್ನಾಟಕ ಪೊಲೀಸ್‌ ಅಕಾಡೆಮಿ ಉಪ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬೇರೆ ಭಾಷೆಗಳನ್ನು ನೋಡಿದರೆ ಆಯಾ ವರ್ಗದ ಜನರಿಗೆ ಅವರು ಮಾತನಾಡುವ ಭಾಷೆಯು ಮಾತೃಭಾಷೆ ಆಗಿಯೇ ಅಚ್ಚಳಿಯದೇ ಉಳಿಸಿಕೊಂಡು ಬಂದಿರುವುದು ಕಾಣಸಿಗುತ್ತಾರೆ. ಅದೇ ರೀತಿ ಕನ್ನಡ ಭಾಷಾ ಪ್ರೇಮಿಗಳು ನಮ್ಮಲ್ಲಿದ್ದಾರೆ ಎಂದರು.

ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ರೂಢಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಗುಣವಿದೆ. ಪ್ರತಿಯೊಬ್ಬರೂ ಸೌಹಾರ್ದಯುತವಾದ ಗುಣ ಬೆಳೆಸಿಕೊಳ್ಳಬೇಕು. ಕರಾವಳಿಯ ಜನರು ಸಾಂಸ್ಕೃತಿಕವಾಗಿ ಮುಂದುವರೆದಿದ್ದಾರೆ. ಅವರು ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಹುಟ್ಟೂರಿನ ಬಗ್ಗೆ ಎಲ್ಲರಿಗೂ ತಮ್ಮದೇ ತುಡಿತ ಇರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಶಿಸ್ತು, ಕ್ರಿಯಾಶೀಲತೆ, ಬದ್ಧತೆ, ಬದುಕನ್ನು ಕರಾವಳಿಯ ಜನರನ್ನು ನೋಡಿ ಕಲಿಯಬೇಕು ಎಂದು ಹೇಳಲಾಗುತ್ತಿತ್ತು. ಆದರಿಂದು ಪರಿಸ್ಥಿತಿ ಬದಲಾಗಿದ್ದು, ಕೋಮು ಕಲಹಗಳಲ್ಲಿ ಆತಂಕ ಮೂಡಿಸುತ್ತಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.

ಜಿಲ್ಲೆಯ ಜನರು ಎಲ್ಲರನ್ನೂ ಗೌರವಿದಿಂದ ಕಾಣುತ್ತಾರೆ. ಅದೇ ರೀತಿ ಕರಾವಳಿಯ ಜನರನ್ನು ಕೂಡ ಗೌರವಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷ ಣ ಹಾಗೂ ಉದ್ಯಮದ ಪ್ರತೀಕವಾಗಿ ಕರಾವಳಿಯ ಜನರು ಹೆಸರು ಮಾಡಿದ್ದಾರೆ. ಅದು ಹಾಗೆಯೇ ಮುಂದುವರೆಯುವ ಮೂಲಕ ಬೇರೆಯವರಿಗೂ ಮಾದರಿಯಾಗಿ ನಿಲ್ಲಲ್ಲಿ ಎಂದು ಹಾರೈಸಿದರು.

ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಪಿ.ಮೃತ್ಯುಂಜಯ, ಶೈಲಜಾ ಚಂದ್ರಶೇಖರ್‌, ಎಸ್‌.ಸಿ.ಮಂಗಳಾ ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈವಿಧ್ಯವನ್ನು ಗುರುದೇವ ಲಲಿತಾಕಲಾ ಅಕಾಡೆಮಿ ಕಲಾವಿದರು ನೃತ್ಯ ವೈವಿಧ್ಯ ಕಾರ‍್ಯಕ್ರಮ ಪ್ರಸ್ತುತಪಡಿಸಿದರು. ಬಳಿಕ ಭೂತದ ಕೋಲ ಕಾರ‍್ಯಕ್ರಮ ನಡೆಯಿತು.

ಕರಾವಳಿ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಒಕ್ಕೂಟದ ಪ್ರಧಾನ ಕಾರ‍್ಯದರ್ಶಿ ಶ್ರೀನಿವಾಸಶೆಟ್ಟಿ, ಸಾಹಿತಿ ಡಾ. ಪ್ರದೀಪ್‌ಕುಮಾರ್‌ ಹೆಬ್ರಿ, ಒಕ್ಕೂಟದ ಖಜಾಂಚಿ ಚಂದ್ರಶೇಖರ್‌ ಹಾಜರಿದ್ದರು.



Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>