Quantcast
Channel: VijayKarnataka
Viewing all articles
Browse latest Browse all 6795

ಸಾಂತ್ವನ ಹೇಳದ ಸಂಸದ ಖರ್ಗೆ ವಿರುದ್ದ ಆಕ್ರೋಶ

$
0
0

ಯಾದಗಿರಿ: ತಾಲೂಕಿನ ರಾಮಸಮುದ್ರ ಗ್ರಾಮದ ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಾಘತದಲ್ಲಿ 11 ಜನ ಮೃತಪಟ್ಟ ಗಣಪುರದ ಕುಟುಂಬಸ್ಥರಿಗೆ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾಂತ್ವನ ಹೇಳುವ ಗೋಜಿಗೆ ಹೋಗದಿರುವುದಕ್ಕೆ ಟೋಕರಿ ಕೋಲಿ ಕಬ್ಬಲಿಗ ಸಮಾಜ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಅಸಮಧಾನ ವ್ಯಕ್ತಪಡಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಕ್ಕೆ ಭೇಟಬೇಕಾಗಿತ್ತು, ಅಲ್ಲದೆ ಸೂಕ್ತ ಪರಿಹಾರ ಕೊಡಿಸಲು ಸರಕಾರದ ಮೇಲೆ ಒತ್ತಡ ಹೇರಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಊರಿದೆ. ಶನಿವಾರ ಇದೇ ಮಾರ್ಗವಾಗಿ ಸುರಪುರದಲ್ಲಿ ನಡೆದ ಬಸ್‌ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದಾರೆ. ಸೌಜನ್ಯಕ್ಕೂ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳದಿರುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪಘಾತರದಲ್ಲಿ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಕೆಲವರು ರಾಯಚೂರಿನ ರೀಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಲ್ಲಿ ವೈದ್ಯರು ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದೆ ಎಂದು ತಿಳಿಸಿದರು.

ತಮ್ಮ ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ಅವರನ್ನು ಮರೆಯುತ್ತಿರುವುದು ಸರಿಯಲ್ಲ. ನಾಲ್ಕು ದಶಕಗಳ ಕ್ಷೇತ್ರದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ. ಈಗ ಹೀಗೆ ಮಾಡಿದರೆ ಹೇಗೆ ಎಂದರು.

ಬಡವರ ನೋವು ಕೇಳಲು ಅವರಿಗೆ ಪುರಸೊತ್ತು ಇಲ್ಲದಂತಿದೆ ಎಂದು ವ್ಯಂಗ್ಯವಾಡಿದರು. ಕೂಡಲೇ ಗಣಪೂರ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೇ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಖರ್ಗೆ ಅವರು, ಗುರುಮಠಕಲ್‌, ಕಂದಕೂರ, ರಾಮಸಮುದ್ರ, ಯಾದಗಿರಿಯಿಂದ ಸುರಪುರಕ್ಕೆ ತೆರಳಲಾಗಿದೆ. ಈ ಹೆದ್ದಾರಿಯಿಂದ ಕೇವಲ ಒಂದು ಕೀಲೋಮೀಟರ್‌ ಗಣಪೂರ ಗ್ರಾಮವಿದೆ.ಆದರೂ ಅಲ್ಲಿಗೆ ಹೋಗಿಲ್ಲ. ಮೃತರ ಕುಟುಂಬದವರಿಗೆæ ಪರಿಹಾರ ನೀಡಲು ಸರಕಾರ ವಿಳಂಬ ಮಾಡುತ್ತಿದೆ. ಅದನ್ನು ಖಂಡಿಸಿ ಸೋಮವಾರ ಅಪಾಘತ ನಡೆದ ಸ್ಥಳ ರಾಮಸಮುದ್ರ ಗ್ರಾಮದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಭೀಮರಾಯ ಗಣಪುರ, ನಾಗೇಂದ್ರ ಕೃಷ್ಣಾ ಸೈದಾಪುರ, ವೆಂಕಟೇಶ ಕುಂಟಿಮರಿ ಆಶನಾಳ, ಗುರು ಮೊದಲಾದವರಿದ್ದರು.



Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>