Quantcast
Channel: VijayKarnataka
Viewing all articles
Browse latest Browse all 6795

ಸುದೀಪ್‌ x ದರ್ಶನ್‌: ಗೆಳೆತನದ ಸಮರಕ್ಕೆ ಕಾರಣವಾದ ಮೆಜೆಸ್ಟಿಕ್

$
0
0

-ಹರೀಶ್‌ ಬಸವರಾಜ್‌

ಸುದೀಪ್‌ ಮತ್ತು ದರ್ಶನ್‌ ಗೆಳೆತನದ ಕೋಲ್ಡ್‌ವಾರ್‌ ಗಾಂಧಿನಗರದಲ್ಲಿ ಬಿರುಗಾಳಿ ಎಬ್ಬಿಸಿದೆ. ಜತೆಗೆ ಅವರವರ ಅಭಿಮಾನಿಗಳ ಮುನಿಸಿಗೂ ಕಾರಣವಾಗಿದೆ. ರವಿವಾರ ತಮ್ಮ ಟ್ವೀಟರ್‌ ಖಾತೆಯಲ್ಲಿ 'ತಮ್ಮ ಮತ್ತು ಸುದೀಪ್‌ ಮಧ್ಯೆ ಯಾವುದೇ ಗೆಳೆತನವಿಲ್ಲ. ನಾವಿಬ್ಬರೂ ಸ್ಯಾಂಡಲ್‌ವುಡ್‌ ನಟರಷ್ಟೇ' ಎಂದು ದರ್ಶನ್‌ ಬರೆದುಕೊಂಡಿದ್ದರು. ಅದೀಗ ಕೋಲಾಹಲಕ್ಕೆ ಕಾರಣವಾಗಿದೆ.

ಕನ್ನಡ ಸಿನಿಮಾ ರಂಗದಲ್ಲಿ ಕುಚುಕು ಗೆಳೆಯರೆಂದೇ ಇಬ್ಬರೂ ಫೇಮಸ್‌. ಇವರ ಬಹುದಿನದ ಗೆಳೆತನಕ್ಕೆ ಬ್ರೇಕ್‌ ಬಿದ್ದಿದ್ದು ಅವರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ಮಧ್ಯ ಎಲ್ಲವೂ ಸರಿ ಇಲ್ಲ ಎನ್ನಲಾಗಿತ್ತು. ಆ ಬಗ್ಗೆ ಯಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ದರ್ಶನ್‌ ಇದೇ ಮೊದಲ ಬಾರಿಗೆ ಟ್ವೀಟ್‌ ಮಾಡುವ ಮೂಲಕ ಅದನ್ನು ಒಪ್ಪಿಕೊಂಡಿದ್ದಾರೆ.

ಏನಾಗಿದೆ ಇಬ್ಬರ ಮಧ್ಯ?

ತಮ್ಮ ಗೆಳೆತನ ಹಳಸಿದ ಬಗ್ಗೆ ಈವರೆಗೂ ಏನೂ ಮಾತನಾಡದ ದರ್ಶನ್‌, ಇದ್ದಕ್ಕಿದ್ದಂತೆ ಈ ವಿಷಯವನ್ನು ಸ್ಫೋಟಿಸಲು ಕಾರಣವೇನು ಎಂಬ ಚರ್ಚೆ ಕೂಡ ಗಾಂಧಿನಗರದಲ್ಲಿ ನಡೆದಿದೆ. ಕೊನೆಗೆ ಸಿಕ್ಕಿರುವ ಉತ್ತರ ದರ್ಶನ್‌ ಬಗ್ಗೆ ಸುದೀಪ್‌ ಆಡಿರುವ ಮಾತು. ಕೆಲ ತಿಂಗಳ ಹಿಂದೆ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಸುದೀಪ್‌, 'ಮೆಜೆಸ್ಟಿಕ್‌ ಸಿನಿಮಾಗೆ ಮೊದಲು ಆಫರ್‌ ಬಂದಿದ್ದು ನನಗೆ. ಆದರೆ, ನನಗೆ ನಟಿಸಲು ಆಗಲಿಲ್ಲ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕ್ಲಾಪ್‌ ಹಿಡಿದುಕೊಂಡು ನಿಂತಿದ್ದ ದರ್ಶನ್‌ ನೋಡಿದ್ದೆ. ಅವರನ್ನೇ ಅಪ್ರೋಚ್‌ ಮಾಡಿ ಅಂತ ಹೇಳಿದೆ. ಕೊನೆಗೆ ದರ್ಶನ್‌ ಆ ಚಿತ್ರಕ್ಕೆ ನಾಯಕನಾದರು. ಕಷ್ಟಪಟ್ಟು ಬೆಳೆದು ಬಂದರು' ಎಂದು ಹೇಳಿದ್ದಾರೆ.

ಈ ಮಾತುಗಳೇ ದರ್ಶನ್‌ ಅವರನ್ನು ಕೆರಳಿಸಿವೆ ಅನ್ನುವ ಮಾತು ಕೇಳಿಬರುತ್ತಿದೆ. ಈ ಕುರಿತಾಗಿಯೂ ದರ್ಶನ್‌ ಟ್ವೀಟ್‌ ಮಾಡಿದ್ದಾರೆ. ಮಜೆಸ್ಟಿಕ್‌ ಸಿನಿಮಾ ಸಿಕ್ಕಿದ್ದು ಸುದೀಪ್‌ನಿಂದ ಅಲ್ಲ ಅಂದಿದ್ದಾರೆ. ಈ ಬಗ್ಗೆ ಮೆಜೆಸ್ಟಿಕ್‌ ಸಿನಿಮಾದ ನಿರ್ಮಾಪಕ ಬಾ.ಮಾ.ಹರೀಶ್‌ ಹೇಳುವುದೇ ಬೇರೆ. ಲವಲವಿಕೆಯೊಂದಿಗೆ ಮಾತನಾಡಿದ ಅವರು, 'ಸುದೀಪ್‌ ಹೇಳಿರುವುದೆಲ್ಲ ನಿಜ. ನಾವು ಮೆಜೆಸ್ಟಿಕ್‌ ಸಿನಿಮಾಗೆ ಸುದೀಪ್‌ ಅವರನ್ನು ಕೇಳಲು ಹೋದಾಗ ವಾಲಿ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ಮಜೆಸ್ಟಿಕ್‌ ಒಪ್ಪಿಕೊಂಡರೆ ಡೇಟ್ಸ್‌ ಹೊಂದಾಣಿಕೆ ಕಷ್ಟ. ಹಾಗಾಗಿ ತೂಗುದೀಪ ಶ್ರೀನಿವಾಸ್‌ ಅವರ ಮಗ ದರ್ಶನ್‌ ಇದ್ದಾರೆ. ಒಳ್ಳೆ ಹೈಟ್‌ ಇದೆ. ನೀನಾಸಂ ಹೋಗಿ ಬಂದಿದ್ದಾರೆ. ಅವರನ್ನು ಹೋಗಿ ಕೇಳಿ ಎಂದರು. ಆನಂತರ ನಾವು ದರ್ಶನ್‌ ಅವರನ್ನು ಭೇಟಿ ಮಾಡಿ ಫೈನಲ್‌ ಮಾಡಿದೆವು' ಅಂತಾರೆ.

ಟ್ವಿಟರ್‌ನಲ್ಲಿ ಏಕಾಂಗಿ ಸಮರ

ದರ್ಶನ್‌ ಮಾಡಿದ್ದ ಟ್ವೀಟ್‌ಗೆ ಈವರೆಗೂ ಸುದೀಪ್‌ ಉತ್ತರಿಸಿಲ್ಲ. ಆದರೂ, ದರ್ಶನ್‌ ಈ ವಿಷಯದ ಕುರಿತು ನಿರಂತರವಾಗಿ ಟ್ವೀಟ್‌ ಮಾಡುತ್ತಿದ್ದಾರೆ. ದರ್ಶನ್‌ ಆಡಿದ ಮಾತಿಗೆ ನಿಮ್ಮ ಉತ್ತರವೇನು ಎಂದು ಸುದೀಪ್‌ಗೆ ಕೇಳಿದಾಗ ಅವರಿಂದ ಬಂದ ಉತ್ತರ 'ನೋ ಕಾಮೆಂಟಸ್‌'.

ನಿರಂತರವಾಗಿ ದರ್ಶನ್‌ ಟ್ವೀಟ್‌ ಮಾಡುತ್ತಿರುವುದನ್ನು ಗಮನಿಸಿದ ಅವರ ಸ್ನೇಹಿತರು, ಅವರ ಟ್ವೀಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಅಂದಿದ್ದರು. ಈ ಮಾತನ್ನೂ ದರ್ಶನ್‌ ನಿರಾಕರಿಸಿದ್ದಾರೆ. 'ನನ್ನ ಖಾತೆ ಹ್ಯಾಕ್‌ ಆಗಿಲ್ಲ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ನಾನೇ ಬರೆಯುತ್ತಿದ್ದೇನೆ. ಇದು ನನ್ನ ಸ್ವಂತ ಅಭಿಪ್ರಾಯ' ಅಂತಾರೆ.

ನಾನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದೆಲ್ಲ ಸತ್ಯ. ನಾನೇ ಅದನ್ನು ಬರೆಯುತ್ತಿದ್ದೇನೆ. ನನ್ನೊಂದಿಗೆ ನನ್ನ ಅಭಿಮಾನಿಗಳು ಇದ್ದಾರೆ. ಅವರೇ ನನ್ನನ್ನು ಬೆಳೆಸಿದ್ದು ಎಂದು ದರ್ಶನ್‌ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>