Quantcast
Channel: VijayKarnataka
Viewing all articles
Browse latest Browse all 6795

ಆಂಧ್ರದಲ್ಲಿ ಕಾಲ್‌ಮನಿ ದಂಧೆ: ಪ್ರಭಾವಿಗಳ ಪಾತ್ರ

$
0
0

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಕಾಲ್‌ಮನಿ ದಂಧೆ ಎಂಬ ಹೊಸ ತಲೆನೋವು ಆರಂಭಗೊಂಡಿದೆ. ಅಮಾಯಕರಿಗೆ ತಾವಾಗಿಯೇ ದೂರವಾಣಿ ಕರೆ ಮಾಡಿ ಸಾಲ ನೀಡುವ ದಲ್ಲಾಳಿಗಳು ಬಳಿಕ ಅದಕ್ಕೆ ದುಬಾರಿ ಬಡ್ಡಿ ವಿಧಿಸುತ್ತಿದ್ದಾರೆ. ಸಹಜವಾಗಿಯೇ ಅಸಲು-ಬಡ್ಡಿ ತೆರಲು ವಿಫಲವಾಗುವ ಜನರನ್ನು ಹಿಂಸಿಸುವುದರ ಜತೆಗೆ ಆವರ ಆಸ್ತಿ-ಪಾಸ್ತಿಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕಿಂತಲೂ ಆಘಾತಕಾರಿ ವಿಷಯವೆಂದರೆ, ಸಾಲ ಪಡೆಯುವ ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ.

ವಿಜಯವಾಡ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಜಾಲ ಹರಡಿದ್ದು, ಈಗಾಗಲೇ ಸಾವಿರಾರು ಜನರು ಈ ಪಾಶಕ್ಕೆ ಬಲಿಯಾಗಿದ್ದಾರೆ.

ಏನಿದು ದಂಧೆ?

ಪ್ರತಿಯೊಂದು ದೂರವಾಣಿ ಸಂಖ್ಯೆಗೂ ಕರೆ ಮಾಡಿ ಸಾಲ ಬೇಕಾ ಎಂದು ಕೇಳಲಾಗುತ್ತದೆ. ಒಪ್ಪಿಕೊಂಡರೆ ಮನೆಗೆ ಬರುವ ದಲ್ಲಾಳಿಗಳು ಪ್ರಾಮಿಸರಿ ನೋಟ್ಸ್ ಬರೆಸಿಕೊಂಡು, ಖಾಲಿ ಚೆಕ್ ಪಡೆದು ಸಾಲ ನೀಡುತ್ತಾರೆ. ಬಳಿಕ ಪಡೆದ ಸಾಲಕ್ಕೆ ಶೇ.200ರಿಂದ 300ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಹಜವಾಗಿಯೇ ಮಧ್ಯಮ ಮತ್ತು ಬಡವರ್ಗದ ಜನ ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಆಗ ಸಾಲಗಾರರು ತಮ್ಮ ನಿಜ ಬಣ್ಣ ತೋರಿಸುತ್ತಾರೆ. ದೈಹಿಕ ಹಲ್ಲೆ, ಕಾನೂನು ಕ್ರಮ ಮೊದಲಾದ ಬೆದರಿಕೆಯೊಡ್ಡು ಸಾಲಪಡೆದ ವ್ಯಕ್ತಿಯ ಅಷ್ಟೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಾಗುತ್ತದೆ. ಸಾಲ ಪಡೆದವರು ಹೆಣ್ಣು ಮಕ್ಕಳಾಗಿದ್ದರಂತೂ ಮುಗಿದೇ ಹೋಯಿತು. ನಾನಾ ಬೆದರಿಕೆ ತಂತ್ರಗಳ ಮೂಲಕ ಬಲವಂತವಾಗಿ ಅವರನ್ನು ಲೈಂಗಿಕವಾಗಿ ಶೋಷಿಸಲಾಗುತ್ತದೆ. ಅಷ್ಟೇ ಅಲ್ಲ ಹಲವರನ್ನು ವೇಶ್ಯಾವಾಟಿಕೆಗೆ ದೂಡಿದ ವರದಿಯೂ ಇದೆ.

ಉದ್ಯಮಿಗಳು, ರಾಜಕಾರಣಿಗಳು ಭಾಗಿ

ಕಾಲ್‌ಮನಿ ದಂಧೆಯಲ್ಲಿ ಪ್ರಭಾವಿ ಉದ್ಯಮಿಗಳು, ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವೈಎಸ್‌ಆರ್ ಕಾಂಗ್ರೆಸ್ ವರಿಷ್ಠ ಜಗನ್ ರೆಡ್ಡಿ ಪ್ರಕಾರ, ಆಡಳಿತಾರೂಢ ತೆಲುಗುದೇಶಂ ಪಕ್ಷದ ಪ್ರಭಾವಿ ಸಚಿವರು ಮತ್ತು ಶಾಸಕರು ಇದರಲ್ಲಿ ಶಾಮೀಲಾಗಿದ್ದಾರಂತೆ.

ಬೆಚ್ಚಿದ ನಾಯ್ಡು: ನ್ಯಾಯಾಂಗ ತನಿಖೆಗೆ ಆದೇಶ

ಹೊಸ ರೀತಿಯ ಹಗರಣದ ವಿಷಯ ಕೇಳಿ ಸಿಎಂ ಚಂದ್ರಬಾಬು ನಾಯ್ಡು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ ಪ್ರಕರಣದ ಸಮಗ್ರ ತನಿಖೆಗೆ ನ್ಯಾಯಾಂಗ ತನಿಖೆಗೂ ಆದೇಶಿಸಿದ್ದಾರೆ.

80ಕ್ಕೂ ಅಧಿಕ ಜನರ ಬಂಧನ

ಹಗರಣ ಸಂಬಂಧ ಇದುವರೆಗೆ ನಾನಾ ಪಕ್ಷಗಳು 80ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಿದ್ದು 1.5 ಲಕ್ಷ, ವಸೂಲಿ ಮಾಡಿದ್ದ 6 ಲಕ್ಷ!

ಕಾಲ್‌ಮನಿ ದಂಧೆಯಿಂದ ಸಾಲ ಪಡೆದು ಜೀವನ ನರಕ ಮಾಡಿಕೊಂಡ ಮಹಿಳೆಯೊಬ್ಬರ ಕತೆ ಇದು. ಇವರು ಪಡೆದಿದ್ದು ಕೇವಲ 1.5 ಲಕ್ಷ ರೂ.ಗಳನ್ನು ಮಾತ್ರ. ಬಡ್ಡಿ-ಚಕ್ರಬಡ್ಡಿ ಸೇರಿಸಿ 6 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಲಾಯಿತು. ಅಷ್ಟು ಹಣವಿಲ್ಲದ ಕಾರಣ ಈ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಲಾಗಿದೆ. ಈ ಮಹಿಳೆ ಪೊಲೀಸರಿಗೆ ದೂರು ನೀಡುವ ಸಾಹಸ ಮಾಡಿದ್ದರಿಂದ ಗುಪ್ತವಾಗಿ ನಡೆಯುತ್ತಿದ್ದ ಜಾಲ ಬೆಳಕಿಗೆ ಬಂದಿದೆ.

ಹಗರಣ ಮೊತ್ತ 2 ಸಾವಿರ ಕೋಟಿಗೂ ಹೆಚ್ಚು

ಕಾಲ್‌ಮನಿ ದಂಧೆಯ ಮೊತ್ತ ಎರಡು ಸಾವಿರ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ವಿಧಾನಸಭೆಯಲ್ಲಿ ಕೋಲಾಹಲ, ನಾಯ್ಡು ರಾಜೀನಾಮೆಗೆ ಅಗ್ರಹ

ಕಾಲ್‌ಮನಿ ದಂಧೆ ಆಂಧ್ರಪ್ರದೇಶ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದೆ. ಇದರಲ್ಲಿ ತೆಲುಗುದೇಶಂ ಪಕ್ಷದ ನಾಯಕರು ಪಾಲ್ಗೊಂಡಿರುವ ಆರೋಪವಿರುವುದರಿಂದ ಪ್ರತಿಪಕ್ಷ ಸದಸ್ಯರು ಕೋಲಾಹಲ ನಡೆಸಿದ್ದಾರೆ. ಹಗರಣ ಸಂಬಂಧ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜೀನಾಮೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.





19 ಜನರ ಸೆರೆ, 23 ಲಕ್ಷ ಜಪ್ತಿ

ಕಾಲ್ ಮನಿ ದಂಧೆಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ರಾಜಮಂಡ್ರಿ ಜಿಲ್ಲೆಯ ವಿವಿಧೆಡೆ ಪೊಲೀಸರು ಶುಕ್ರವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ 19 ಜನರನ್ನು ಬಂಧಿಸಿ, 23 ಲಕ್ಷ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅನಧಿಕೃತ ವಾಣಿಜ್ಯ ಮಳಿಗೆಗಳು ಹಾಗೂ ವಹಿವಾಟು ಅಡ್ಡೆಗಳ ಮೇಲೆ ದಾಳಿ ನಡೆಸಿ ಇಬ್ಬರು ರೌಡಿ ಶೀಟರ್‌ಗಳು ಸೇರಿದಂತೆ 19 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರಿಂದ 23.20 ಲಕ್ಷ ನಗದು, 80 ಸಹಿ ಹಾಕಿದ ಬ್ಲ್ಯಾಂಕ್ ಚೆಕ್ ಸೇರಿದಂತೆ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ 18 ಪ್ರಕರಣಗಳನ್ನು ದಾಖಲಾಗಿಸಲಾಗಿದೆ ಎಂದು ರಾಜಮಂಡ್ರಿ ಎಸ್ಪಿ ಎಸ್.ಹರಿಕೃಷ್ಣ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>