Quantcast
Channel: VijayKarnataka
Viewing all articles
Browse latest Browse all 6795

3ನೇ ಹಂತದ ನಗರೋತ್ಥಾನ ಯೋಜನೆಗೆ 750 ಕೋಟಿ ರೂ...

$
0
0

ಶ್ರೀರಂಗಪಟ್ಟಣ: ಮುಖ್ಯಮಂತ್ರಿಗಳ ಪಟ್ಟಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಯ ಮೂರನೇ ಹಂತದ ನಗರೋತ್ಥಾನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ 7.50 ಕೋಟಿ ವೆಚ್ಚದ ನಾನಾ ಕಾಮಗಾರಿಗೆ ಪುರಸಭೆ ವಿಶೇಷ ಸಭೆಯಲ್ಲಿ ಶನಿವಾರ ಅನುಮೋದನೆ ಸಿಕ್ಕಿತು.

ಪುರಸಭೆ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಆರ್‌.ಯಶೋಧ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ, 3ನೇ ಹಂತದ ನಗರೋತ್ಥಾನ ಯೋಜನೆಯಡಿ 7.50 ಕೋಟಿ ರೂ.ಅನುದಾನ ವೆಚ್ಚ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಪೈಕಿ 24 ಗಂಟೆ ಕುಡಿಯುವ ನೀರು ಯೋಜನೆ ಅನುಷ್ಠಾನ ಕಾಮಗಾರಿಗೆ 2.07ಲಕ್ಷ ರೂ., ಶೇಕಡ 24.10(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಯೋಜನೆಗೆ 98.30 ಲಕ್ಷ , ಮಳೆ ನೀರು ಚರಂಡಿ ಕಾಮಗಾರಿಗೆ 42 ಲಕ್ಷ , ರಸ್ತೆ ಅಭಿವೃದ್ಧಿಗೆ 2.76 ಕೋಟಿ, ಉದ್ಯಾನವನ ಮತ್ತು ಸ್ಮಶಾನ ಅಭಿವೃದ್ಧಿಗೆ 61 ಲಕ್ಷ ವೆಚ್ಚ ಮಾಡಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.

ಕಾವೇರಿ ಸಂಗಮ ಸೇರಿದಂತೆ ನಾನಾ ಕಡೆ ದೋಣಿ ವಿಹಾರ ನಡೆಸಲು ಶುಲ್ಕ, ಸಂತೆ ಶುಲ್ಕ, ನೆಲಬಾಡಿಗೆ ಶುಲ್ಕ ಈ ಮೂರು ಶುಲ್ಕಗಳ ಸಂಗ್ರಹಕ್ಕೆ 2017-18 ನೇ ಸಾಲಿಗೆ ವಾರ್ಷಿಕ ಬಹಿರಂಗ ಹರಾಜು ನಡೆಸಲು ಸದಸ್ಯರು ಒಪ್ಪಿಗೆ ನೀಡಿದರು. ಸ್ವಚ್ಛತಾ ಕಾರ‍್ಯದ ವಾಹನಗಳಿಗೆ 8 ಮಂದಿ ಚಾಲಕರು ಹಾಗೂ ನೀರು ಸರಬರಾಜು ವಿಭಾಗದ 15 ಮಂದಿ ನೌಕರರನ್ನು ಹೊರ ಗುತ್ತಿಗೆ ಆಧಾರದ ಮೇಲೆ ಟೆಂಡರ್‌ ಮೂಲಕ ತೆಗೆದುಕೊಳ್ಳಲು ತಿರ್ಮಾನಿಸಲಾಯಿತು.

ಬೆಂಗಳೂರು ಮೈಸೂರು ಹೆದ್ದಾರಿ ಪಟ್ಟಣದ ಪಶ್ಚಿಮ ವಾಹಿನಿಯಿಂದ ಕಿರಂಗೂರು ವೃತ್ತದವರೆಗೆ ಅಳವಡಿಸಿರುವ ವಿದ್ಯುತ್‌ ದೀಪಗಳು ಕೆಟ್ಟು ನಿಂತಿವೆ, ಗುತ್ತಿಗೆ ವಹಿಸಿಕೊಂಡಿರುವವರು ಸಮರ್ಪಕವಾಗಿ ವಿದ್ಯುತ್‌ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ರಾತ್ರಿ ವೇಳೆ ಪಾದಚಾರಿಗಳು ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆಯಾಗಿದೆ ವಿದ್ಯುತ್‌ ದೀಪಗಳನ್ನು ಸರಿಪಡಿಸಿ ಎಂದು ಸದಸ್ಯೆ ಪದ್ಮಮ್ಮ ಹೇಳಿದರು.

ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಜನ ನಿಬಿಡ ಸ್ಥಳಗಳಲ್ಲಿ ಮಕ್ಕಳು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕಿ ಎಂದು ಸದಸ್ಯ ಸಿದ್ದರಾಜು ಎಂದರು.

ಸ್ಮಶಾನಗಳಲ್ಲಿ ಗಿಡ- ಗಂಟಿಗಳು ಬೆಳೆದು ನಿಂತಿವೆ. ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಳ್ಳ, ಕೊಳ್ಳದಿಂದ ಕೂಡಿವೆ. ಶವ ಹೊತ್ತೊಯ್ಯಲು ಕಷ್ಟವಾಗಿದೆ. ಸ್ಮಶಾನಗಳನ್ನು ಅಭಿವೃದ್ಧಿ ಮಾಡಿ ಮೂಲ ಸೌಕರ‍್ಯ ಒದಗಿಸಿ ಎಂದು ಸದಸ್ಯ ವೆಂಕಟೇಶ್‌ ಎಂದು ಪ್ರಸ್ತಾಪಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಕಳಸ ಪುನರ್‌ ಪ್ರತಿಷ್ಠಾಪನೆ ಕಾರ‍್ಯಕ್ಕೆ ಸೌಜನ್ಯಕ್ಕೂ ಪುರಸಭೆ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ, ಆಹ್ವಾನ ಪತ್ರಿಕೆಯನ್ನೂ ನೀಡಿಲ್ಲ. ದೇವಾಲಯ ಇಒ ಧನಲಕ್ಷ್ಮಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸದಸ್ಯ ಎಸ್‌.ಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಾಯಿಗಳ ಹಾವಳಿ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್‌ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಸ್‌.ಲೋಕೇಶ್‌ ಭರವಸೆ ನೀಡಿದರು.

ಸದಸ್ಯರಾದ ಎಂ.ಎಲ್‌ ದಿನೇಶ್‌, ವೆಂಕಟಸ್ವಾಮಿ, ಗೌರಮ್ಮ, ಕಾವೇರಮ್ಮ, ಉಮಾಶಂಕರ್‌, ನಳಿನಿಸತ್ಯನಾರಾಯಣ, ಈ.ಕುಮಾರ. ಟಿ.ಕೃಷ್ಣ, ರಾಧ ಶ್ರೀಕಂಠು, ಸೋಮಶೇಖರ್‌ ಹಾಜರಿದ್ದರು.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್