Quantcast
Channel: VijayKarnataka
Viewing all articles
Browse latest Browse all 6795

ಸೂಪರ್‌ ಮ್ಯಾಜಿಕ್‌

$
0
0

ಬೆಳಕಿನ ಆಟ

ಬೆಳಕಿಗೆ ವಿಶೇಷವಾದ ಶಕ್ತಿಗಳಿವೆ. ಅದು ಒಂದು ವಸ್ತುವನ್ನು ಇಬ್ಭಾಗವಾಗಿರುವಂತೆ ತೋರಿಸಬಲ್ಲದು ಅಥವಾ ಒಂದು ವಸ್ತುವನ್ನು ಕಾಣದಂತೆಯೂ ಮಾಡಬಲ್ಲದು. ಇದನ್ನು ನೋಡಬೇಕಾದರೆ ನೀವು ಈ ಕೆಳಗಿನ ಪ್ರಯೋಗವನ್ನು ಮಾಡಿ ನೋಡಿ ಅದಕ್ಕೆ ಕಾರಣವನ್ನೂ ಕಂಡುಕೊಳ್ಳಿ.

ಬೇಕಾಗುವ ಸಾಮಗ್ರಿ

ಒಂದು ಗಾಜಿನ ಬೀಕರ್‌ (ಪ್ರಯೋಗಾಲಯದಲ್ಲಿ ಬಳಸುವ ಗಾಜಿನ ಪಾತ್ರೆ), ಸ್ವಲ್ಪ ನೀರು, ಗಾಜಿನ ಟೆಸ್ಟ್‌ ಟ್ಯೂಬ್‌, ಅಡುಗೆ ಎಣ್ಣೆ ಅಥವಾ ಗ್ಲಿಸರಿನ್‌, ಒಂದು ಪೆನ್ಸಿಲ್‌.

ಮಾಡುವ ವಿಧಾನ

1. ಗಾಜಿನ ಬೀಕರ್‌ನ ಮುಕ್ಕಾಲು ಭಾಗದಷ್ಟು ನೀರು ತುಂಬಿರಿ.

2. ಈ ನೀರಿಗೆ ಪೆನ್ಸಿಲ್‌ ಅನ್ನು ಚಿತ್ರದಲ್ಲಿ ತೋರಿಸಿರುವಂತೆ ಓರೆಯಾಗಿ ಇಡಿ.

3. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರನ್ನು ಸ್ವಲ್ಪ ದೂರದಲ್ಲಿ ಕುಳ್ಳಿರಿಸಿ ಈ ಬೀಕರ್‌ ಅನ್ನು ವೀಕ್ಷಿಸುವಂತೆ ಹೇಳಿ.

4. ನೀರಿಗೆ ಹಾಕಿದ ಪೆನ್ಸಿಲನ್ನು ಹೊರಗಡೆಯಿಂದ ನೋಡುವಾಗ ಅರ್ಧಕ್ಕೆ ತುಂಡಾದಂತೆ ಅಥವಾ ಇಬ್ಭಾಗವಾದಂತೆ ಕಾಣುತ್ತದೆ.

5. ಈಗ ಬೀಕರ್‌ನಿಂದ ನೀರನ್ನು ಸಂಪೂರ್ಣ ತೆಗೆದು ಖಾಲಿ ಮಾಡಿ.

6. ಬಳಿಕ ಈ ಬೀಕರ್‌ಗೆ ಅಡುಗೆ ಎಣ್ಣೆ ಅಥವಾ ಗ್ಲಿಸರಿನ್‌ ಸುರಿಯಿರಿ.

7. ಈಗ ಬೀಕರ್‌ಗೆ ಟೆಸ್ಟ್‌ ಟ್ಯೂಬ್‌ ಅನ್ನು ನೇರವಾಗಿ ಹಾಕಿ.

8. ಅಡುಗೆ ಎಣ್ಣೆ ಅಥವಾ ಗ್ಲಿಸರಿನ್‌ನಲ್ಲಿ ಮುಳುಗಿದ ಟೆಸ್ಟ್‌ಟ್ಯೂಬ್‌ನ ಭಾಗ ಬಹುತೇಕ ಅದೃಶ್ಯವಾಗಿರುತ್ತದೆ.

ಕಾರಣ ಇಲ್ಲಿದೆ

ಒಂದು ವಸ್ತುವಿನ ಮೇಲೆ ಬೀಳುವ ಬೆಳಕಿನ ಕೆಲವು ಭಾಗಗಳು ನಮ್ಮ ಕಣ್ಣುಗಳಿಗೆ ವಾಪಾಸ್‌ ಪ್ರತಿಫಲಿಸುವುದರಿಂದ ನಾವು ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಅಂದರೆ ಗಾಳಿಯಿಂದ ನೀರಿಗೆ ಚಲಿಸುವಾಗ ಅದು ಬಹುತೇಕ ಪ್ರತಿಫಲನಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ವಕ್ರೀಭವನ ಅಥವಾ ರಿಫ್ರೆಕ್ಷ ನ್‌ ಎಂದು ಹೇಳುತ್ತಾರೆ. ವಕ್ರೀಭವನವೆಂದರೆ ಮಾಧ್ಯಮಗಳು ಬದಲಾದಾಗ ಬೆಳಕು ಬಾಗುವ ಒಂದು ಪ್ರಕ್ರಿಯೆ ಮಾತ್ರ. ಈ ವಕ್ರೀಭವನ ಪ್ರಕ್ರಿಯೆ ನಡೆಯಲು ಕಾರಣವೂ ಇದೆ. ಅದೇನೆಂದರೆ ಬೆಳಕು ಚಲಿಸುವ ಮಾಧ್ಯಮದ ಗುಣ ಲಕ್ಷ ಣಗಳು ಗಾಳಿಯಿಂದ ಭಿನ್ನವಾಗಿರುವುದು. ಅಂದರೆ ನಮಗೆ ನೀರಿನಲ್ಲಿ ಈಜುವುದಕ್ಕಿಂತ ಗಾಳಿಯಲ್ಲಿ ನಡೆದಾಡುವುದು ಸುಲಭವೆನಿಸುತ್ತದೆ. ನೀರಿನಲ್ಲಿ ಸುಲಭವಾಗಿ ಈಜಲು ನೀವು ನಿಮ್ಮ ದೇಹವನ್ನು ಕೆಲವು ಕೋನಗಳಲ್ಲಿ ಬಾಗಿಸಬೇಕಾಗುತ್ತದೆ. ಇದೇ ರೀತಿ ಬೆಳಕು ಕೂಡಾ ಮಾಡುತ್ತದೆ. ಬೆಳಕಿನ ಅಲೆಗಳು ತಾವು ಚಲಿಸುವ ಮಾಧ್ಯಮಕ್ಕೆ ತಕ್ಕಂತೆ ತನ್ನ ಕೋನ ಮತ್ತು ವೇಗವನ್ನು ಬದಲಿಸಿಕೊಳ್ಳುತ್ತವೆ. ಇದು ಬೆಳಕಿನ ಪಥವನ್ನು ಬದಲಿಸುವುದರಿಂದ ನೀರಿನಲ್ಲಿ ಮುಳುಗಿದ ಪೆನ್ಸಿಲ್‌ ಇಬ್ಭಾಗವಾದಂತೆ ಅಥವಾ ಬಾಗಿದಂತೆ ಕಾಣುತ್ತದೆ.

ಗ್ಲಾಸ್‌ ಮತ್ತು ಅಡುಗೆ ಎಣ್ಣೆಯ ವಿಷಯಕ್ಕೆ ಬಂದರೆ ಇವೆರಡರ ಗುಣಲಕ್ಷ ಣಗಳು ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿದೆ. ಅಂದರೆ ಇವೆರಡೂ ಮಾಧ್ಯಮಗಳು ಬೆಳಕಿನ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಇಲ್ಲಿ ಬೆಳಕು ವಕ್ರೀಭವನಗೊಳ್ಳುವುದಿಲ್ಲ. ಅದು ಎಣ್ಣೆಯಿಂದ ಗಾಜಿಗೆ ಮತ್ತು ಗಾಜಿನಿಂದ ಎಣ್ಣೆಗೆ ಒಂದೇ ವೇಗದಲ್ಲಿ ಮತ್ತು ನಯವಾಗಿ ಹರಿಯುತ್ತದೆ. ಆದ್ದರಿಂದ ನಮ್ಮ ಕಣ್ಣುಗಳಿಗೆ ಎಣ್ಣೆಯಲ್ಲಿ ಮುಳುಗಿದ ಟೆಸ್ಟ್‌ಟ್ಯೂಬ್‌ನ ಭಾಗ ಕಾಣುವುದೇ ಇಲ್ಲ.

ಸರಳ ವಿಜ್ಞಾನ: ಗಾಜು ಕಾಯಿಸುವ ಕಲೆ

ಗಾಜಿನ ಪಾತ್ರೆಗಳನ್ನು ಬೆಂಕಿಯಲ್ಲಿ ಬಿಸಿ ಮಾಡುವಾಗ ತಂತಿಯ ಜಾಲರಿಯನ್ನು ಯಾಕೆ ಉಪಯೋಗಿಸುತ್ತಾರೆ?

ಗಾಜು ಶಾಖವನ್ನು ಸರಿಯಾಗಿ ಹೀರಿಕೊಳ್ಳದ ಕೆಟ್ಟ ವಾಹಕವಾಗಿದೆ. ಒಂದು ವೇಳೆ ಗಾಜಿನ ಪಾತ್ರೆಯನ್ನು ಬೆಂಕಿಯ ಜ್ವಾಲೆಯಲ್ಲಿ ನೇರವಾಗಿ ಬಿಸಿ ಮಾಡಿದರೆ, ಶಾಖವು ಆ ಪಾತ್ರೆಯ ಇತರ ಭಾಗಗಳಿಗೆ ಸೂಕ್ತವಾಗಿ ಹರಡುವುದಿಲ್ಲ ಹಾಗೂ ಜ್ವಾಲೆಗೆ ಸ್ಪರ್ಶಿಸುವ ಭಾಗಕ್ಕೂ ಶಾಖ ತಗಲುವುದಿಲ್ಲ. ಅಲ್ಲದೆ ಪಾತ್ರೆಯ ಹೊರಭಾಗಕ್ಕೆ ಸಿಗುವ ಶಾಖ ಒಳಗಿನ ಮೇಲ್ಮೈಗೆ ಸಿಗುವುದಿಲ್ಲ. ಇದರಿಂದ ಪಾತ್ರೆಯ ಒಳಭಾಗಕ್ಕಿಂತ ಹೊರಗಿನ ಭಾಗ ಹೆಚ್ಚು ಹಿಗ್ಗುತ್ತದೆ. ಈ ಅಸಮಾನ ಹಿಗ್ಗುವಿಕೆಯ ಕಾರಣ ಗಾಜು ಬಿರುಕು ಬಿಟ್ಟು ತುಂಡಾಗುತ್ತದೆ. ಇದನ್ನು ತಪ್ಪಿಸಲು ಗಾಜನ್ನು ತಂತಿಯ ಜಾಲರಿಯಲ್ಲಿಟ್ಟು ಬಿಸಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಶಾಖದ ಉತ್ತಮ ವಾಹಕವಾದ ಕಬ್ಬಿಣ ಅಥವಾ ತಾಮ್ರದಿಂದ ಮಾಡಿದ ತಂತಿಯ ಜಾಲರಿಯಲ್ಲಿಟ್ಟು ಬಿಸಿ ಮಾಡಲಾಗುತ್ತದೆ. ಇದರಿಂದ ಶಾಖವು ಪರೋಕ್ಷ ವಾಗಿ ಮತ್ತು ನಿಧಾನವಾಗಿ ಗಾಜಿನ ಪಾತ್ರೆಗೆ ಹರಡುತ್ತದೆ ಮತ್ತು ಪಾತ್ರೆಯು ತುಂಡಾಗುವುದಿಲ್ಲ.

ಯಾರಿವರು?

1. ಇಂಗ್ಲೆಂಡ್‌ನಲ್ಲಿ 1882 ರಲ್ಲಿ ಜನಿಸಿದ ಇವರು ಖ್ಯಾತ ಖಗೋಳ ಶಾಸ್ತ್ರಜ್ಞ, ಭೌತಶಾಸ್ತ್ರಜ್ಞ ಮತ್ತು ಗಣಿತ ತಜ್ಞರಾಗಿದ್ದಾರೆ.

2. ಇವರು ಖಗೋಳ ಭೌತ ವಿಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ನಕ್ಷ ತ್ರಗಳ ಚಲನೆ, ಆಂತರಿಕ ರಚನೆ ಮತ್ತು ವಿಕಾಸವನ್ನು ಅನ್ವೇಷಣೆ ಮಾಡಿದ್ದಾರೆ.

3. 1919 ರಲ್ಲಿ ನಡೆದ ಪೂರ್ಣ ಸೂರ್ಯಗ್ರಹಣದಲ್ಲಿ ಇವರು ಅಲ್ಬರ್ಟ್‌ ಐನ್‌ಸ್ಟೀನ್‌ ಅವರ ಸಾಪೇಕ್ಷ ಸಿದ್ಧಾಂತವನ್ನು ಮೊದಲ ಬಾರಿಗೆ ಪರೀಕ್ಷಾರ್ಥ ಪ್ರಯೋಗ ಮಾಡಿ ನೋಡಿ ಅದು ನಿಜವೆಂದು ಸಾಬೀತುಪಡಿಸಿದರು.

4. ಇವರ ಹಲವಾರು ಕೃತಿಗಳು ಮತ್ತು ಉಪನ್ಯಾಸಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿವೆ.

ಉತ್ತರ: ಅರ್ಥೂರ್‌ ಎಡ್ಡಿಂಗ್‌ಟನ್‌


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>