Quantcast
Channel: VijayKarnataka
Viewing all articles
Browse latest Browse all 6795

ಚಿತ್ರ ವಿಮರ್ಶೆ: ದಂಗಲ್

$
0
0

* ಮೀನಾ ಐಯ್ಯರ್
ದಂಗಲ್ ಕತೆ: ಹರಿಯಾಣದ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ತಮಗೆ ಹುಟ್ಟಿದ್ದೆಲ್ಲಾ ಹೆಣ್ಣು ಮಕ್ಕಳಾದಾಗ ಪುರುಷರ ಕ್ರೀಡೆಯೆಂದೇ ಗುರುತಿಸಲಾಗಿದ್ದ ಕುಸ್ತಿಯನ್ನು ಸಮಾಜದ ಕಟ್ಟುಪಾಡುಗಳನ್ನು ಮೀರಿ ತಮ್ಮ ಹೆಣ್ಣು ಮಕ್ಕಳಾದ ಗೀತಾ ಫೋಗತ್(ಫಾತಿಮಾ) ಮತ್ತು ಬಬಿತಾ ಫೋಗತ್(ಸಾನ್ಯ)ರನ್ನು ಅಂತರಾಷ್ಟ್ರೀಯ ಕುಸ್ತಿಪಟುಗಳಾಗಿಸಿದ ಕತೆ.

ದಂಗಲ್ ವಿಮರ್ಶೆ: ಕಾಮನ್‌ವೆಲ್ತ್ ಗೇಮ್‌ನಲ್ಲಿ ಬಬಿತಾ ಹಾಗೂ ಗೀತಾ ಚಾಂಪಿಯನ್ನರಾದದ್ದು ಗೊತ್ತಿರುವ ವಿಷಯವಾದರೂ, ಅವರಿಬ್ಬರ ವಿಜಯ ಹಾಗೂ ಹೆಣ್ಣು ಮಕ್ಕಳನ್ನು ಕುಸ್ತಿಪಟುವಾಗಿಸಲು ಪಣತೊಟ್ಟ ತಂದೆ, ಅದಕ್ಕಾಗಿ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ತಾನು ಬಯಸಿದಂತೆ ತನ್ನ ಹೆಣ್ಣು ಮಕ್ಕಳನ್ನು ಅಂತರಾಷ್ಟ್ರೀಯ ಕುಸ್ತಿ ಕ್ರೀಡಾಪಟುಗಳನ್ನಾಗಿಸಿದ ಕತೆಯನ್ನು ಅತ್ಯಂತ ಆಕರ್ಷಕವಾಗಿ ಹೇಳಲಾಗಿದೆ. ಈ ಚಿತ್ರ ವೀಕ್ಷಿಸಿದ ಹೆಣ್ಣು ಮಕ್ಕಳಿಗೆ ತಾವೂ ಕೂಡ ಕುಸ್ತಿ ಕ್ರೀಡೆಯಲ್ಲಿ ಬೆಳೆಯಬೇಕು ಎಂಬ ಆಸೆ ಮೂಡಿದರೆ ಅಚ್ಚರಿಯಿಲ್ಲ.

ಈ ಚಿತ್ರವನ್ನು ಆಕರ್ಷಕವಾಗಿ ಕಟ್ಟಿ ಕೊಡುವಲ್ಲಿ ನಿರ್ದೇಶಕ ನಿತೇಶ್ ತಿವಾರಿ ಸೈ ಎನಿಸಿಕೊಂಡಿದ್ದಾರೆ. ಇವರ ಜೊತೆಗೆ ಪಿಯೂಷ್ ಗುಪ್ತ, ಶ್ರೇಯಸ್ ಜೈನ್ ಮತ್ತು ನಿಖಿಲ್ ಮಲ್ಹೋತ್ರರವರ ವರ್ಕ್ ಕೂಡ ಗಮನಾರ್ಹವಾಗಿದೆ. ತಂದೆ ಮತ್ತು ಮಗಳ ಸಂಬಂಧ, ನಮ್ಮಲ್ಲಿ ಗಂಡು ಮಕ್ಕಳಿಗಿರುವ ಪ್ರಾಧ್ಯಾನತೆ, ಅವುಗಳನ್ನು ಬದಿಗೊತ್ತಿ ಹೆಣ್ಣು ಮಕ್ಕಳನ್ನೇ ತಮ್ಮ ಇಚ್ಛೆಯಂತೆ ಕುಸ್ತಿಪಟುಗಳಾಗಿ ಮಾಡುವ ತಂದೆಯ ಛಲ, ಹಾಸ್ಯದ ತುಣುಕುಗಳು ಎಲ್ಲವೂ ವೀಕ್ಷಕನ್ನು ಸ್ವಲ್ಪವೂ ಕದಲದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು ಈ ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ಕಾಣಿಸಿರುವ ಅಮೀರ್ ಖಾನ್ ಫೋಗತ್‌ರ ಮಧ್ಯಮ ವಯಸ್ಸಿನ ಪಾತ್ರಕ್ಕಾಗಿ ಮೈತೂಕ ಹೆಚ್ಚಿಸಿ, ಬೊಜ್ಜು ಬೆಳೆಸಿ ಪಾತ್ರಕ್ಕೆ ಲುಕ್‌ನಲ್ಲಿ ಹಾಗೂ ಅಭಿನಯದಲ್ಲಿ 100% ನ್ಯಾಯ ಒದಗಿಸಿದ್ದಾರೆ. ಇನ್ನು ಗೀತಾ ಹಾಗೂ ಬಬಿತಾರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾನಿಯಾ ಹಾಗೂ ಫಾತಿಮಾ ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಸೈ ಎನಿಸಿಕೊಂಡಿದ್ದಾರೆ.

ಪ್ರೀತಮ್ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳು ಸೂಪರ್ ಆಗಿವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>