Quantcast
Channel: VijayKarnataka
Viewing all articles
Browse latest Browse all 6795

ಪರೀಕ್ಷೆ ಬರೆದವರು 12,000, ಪಾಸಾದವರು 20,000

$
0
0

ಆಗ್ರಾ: ಅಲ್ಲಿ ಪರೀಕ್ಷೆಗೆ ಹಾಜರಾದವರು 12,800 ವಿದ್ಯಾರ್ಥಿಗಳು. ಆದರೆ ಫಲಿತಾಂಶ ಹೊರಬಿದ್ದಾಗ 20,089 ವಿದ್ಯಾರ್ಥಿಗಳು ಪಾಸಾಗಿದ್ದರು!

ಬಿ.ಆರ್. ಅಂಬೇಡ್ಕರ್ ವಿವಿಯ ವಿದ್ಯಾರ್ಥಿಗಳ ಬಿಇಡಿ ಪರೀಕ್ಷೆಯ ಫಲಿತಾಂಶ ಅಲ್ಲಿನ ಸಿಬ್ಬಂದಿಗೆ ಇಂಥದೊಂದು ಅಚ್ಚರಿಯ ಆಘಾತ ಹೊತ್ತುತಂದಿತ್ತು.

ಗೋಲ್‌ಮಾಲ್ ವಾಸನೆ ಬರುತ್ತಿದ್ದಂತೆಯೇ ಕಡೇ ಕ್ಷಣದಲ್ಲಿ ಫಲಿತಾಂಶವನ್ನು ತಡೆ ಹಿಡಿದ ಉಪಕುಲಪತಿ ಮೊಹಮ್ಮದ್ ಮುಜಾಮಿಲ್, ಈ ವಿಚಾರವಾಗಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಖಾಸಗಿ ಕಾಲೇಜುಗಳ ಹಲವು ಆಡಳಿತಾಧಿಕಾರಿಗಳು ಕಂಬಿ ಹಿಂದೆ ಹೋಗುವ ಸಾಧ್ಯತೆಗಳಿವೆ.

ಈ ಬಗ್ಗೆ ಶನಿವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ವಕ್ತಾರ ಪ್ರೊ. ಮನೋಜ್ ಶ್ರೀವಾಸ್ತವ, ''ವಿವಿಯ ಅಂಗಸಂಸ್ಥೆಗಳಾದ ಎಲ್ಲ ಖಾಸಗಿ ಕಾಲೇಜುಗಳಿಗೆ ಪತ್ರ ಬರೆದು, ಅವರ ಕಾಲೇಜುಗಳ ವಿದ್ಯಾರ್ಥಿಗಳ ಹೆಸರಿನ ಪಟ್ಟಿ ಹಿಡಿದು ತರಲು ಕೇಳಲಾಗಿದೆ'' ಎಂದು ತಿಳಿಸಿದ್ದಾರೆ.

ತಮಗೆ 12,800 ವಿದ್ಯಾರ್ಥಿಗಳ ಮಾಹಿತಿಯನ್ನು ಮಾತ್ರ ನೀಡಲಾಗಿತ್ತು. ಆದರೆ 7000 ಹೆಚ್ಚುವರಿ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಶೀಲಿಸಲಾಗಿದೆ ಎಂದು ಫಲಿತಾಂಶ ತಯಾರಿಸಿದ ಖಾಸಗಿ ಏಜೆನ್ಸಿ ಆರೋಪಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಉಪಕುಲಪತಿಗಳು ಸ್ಪಷ್ಟನೆ ಕೋರಿದ ನಂತರ, ತಾವು ನಿಗದಿತ ಸೀಟ್‌ಗಳಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು ತೆಗೆದುಕೊಂಡಿದ್ದು, ಈ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದಾರೆ ಎಂದು ಖಾಸಗಿ ಕಾಲೇಜುಗಳು ಒಪ್ಪಿಕೊಂಡಿವೆ.

''ಇದಕ್ಕಿಂತ ಆಘಾತಕಾರಿ ಎಂದರೆ, ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಖಾಸಗಿ ಕಾಲೇಜುಗಳು 2014-15ರ ಹೈಕೋರ್ಟ್ ಆದೇಶ ಬಳಸಿಕೊಳ್ಳುತ್ತಿವೆ. ಈ ಎಲ್ಲ ಹೆಚ್ಚುವರಿ ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ದಿನ ಇಲ್ಲವೇ, ವಾರದ ಮುಂಚೆ ಕಾಲೇಜಿಗೆ ದಾಖಲಾಗಿದ್ದಾರೆ. ಅಂದರೆ, ಅವರು ತರಗತಿಗಳಿಗೆ ಹಾಜರಾಗಿಯೂ ಇಲ್ಲ, ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿಯೂ ಇಲ್ಲ'' ಎನ್ನುತ್ತಾರೆ ವಿವಿಯ ಹಿರಿಯ ಅಧಿಕಾರಿಯೊಬ್ಬರು.

ವಿಶ್ವವಿದ್ಯಾಲಯವು ಪ್ರವೇಶ ಪರೀಕ್ಷೆ ಪಾಸ್ ಆದ ವಿದ್ಯಾರ್ಥಿಗಳ ಪ್ರತ್ಯೇಕ ಮಾಹಿತಿ ಹಾಗೂ ಕೌನ್ಸೆಲಿಂಗ್‌ನ ಸಿಡಿಯನ್ನು ತಂದು ಒಪ್ಪಿಸಲು ಕಾಲೇಜುಗಳಿಗೆ ಆದೇಶಿಸಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>