Quantcast
Channel: VijayKarnataka
Viewing all articles
Browse latest Browse all 6795

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಗೀತ ನಿರ್ದೇಶಕರು

$
0
0

- ಪದ್ಮಾ ಶಿವಮೊಗ್ಗ

ಈ ವರ್ಷ ಕನ್ನಡ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ಆಗಿದ್ದು ವಿಶೇಷ. ಸ್ಯಾಂಡಲ್‌ವುಡ್‌ಗೆ ಯುವ ಗಾಯಕರು, ಸಂಗೀತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದಲ್ಲದೇ, ಪರಭಾಷೆಯವರಿಗಿಂತ ಕನ್ನಡದ ಹಾಡುಗಾರರೇ ಮಿಂಚಿದ್ದು ಸಮಾಧಾನಕರ. ಹಾಡುಗಳಿಂದಲೇ ಕುತೂಹಲ ಹುಟ್ಟಿಸಿದ ಚಿತ್ರಗಳು ಇವೆ. ಮತ್ತೊಂದೆಡೆ ನಿರೀಕ್ಷೆಯನ್ನು ಹುಸಿ ಮಾಡಿದ ಸಿನಿಮಾಗಳೂ ಇವೆ.

ನಟರಾಜ ಸವೀರ್‍ಸ್‌ ಚಿತ್ರ ಹಾಡಿನಿಂದಲೇ ಕುತೂಹಲ ಹುಟ್ಟಿಸಿತ್ತು. ಪವನ್‌ ಒಡೆಯರ್‌ ಬರೆದ 'ಅಲ್ಲಾ ಅಲ್ಲಾ' ಗೀತೆಗೆ ಅನೂಪ್‌ ಸೀಳಿನ್‌ ಹಾಡಿದ್ದರು. ಆದರೆ, ಹಾಡುಗಳಿಂದ ಗಮನ ಸೆಳೆದಿದ್ದ ಗಣೇಶ್‌ ಅಭಿನಯದ ಮುಂಗಾರು ಮಳೆ - 2 ನಿರೀಕ್ಷೆಯನ್ನು ಹುಸಿ ಮಾಡಿತು. ಶಿವರಾಜ್‌ ಕುಮಾರ್‌ ಅಭಿನಯದ ಕಬೀರ ಚಿತ್ರದಲ್ಲಿ ಕಬೀರರ ದೋಹಗಳನ್ನೇ ಚಿತ್ರಗೀತೆಯನ್ನಾಗಿ ದಿ. ಗೋಪಾಲ್‌ ವಾಜಪೇಯಿ ಪರಿವರ್ತಿಸಿದ್ದು, ಇಸ್ಮಾಯಿಲ್‌ ದರ್ಬಾರ್‌ ಸಂಗೀತ ಸಂಯೋಜನೆ ಮಾಡಿದ್ದು ವಿಶೇಷ. ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ ಚಿತ್ರದ ಹಾಡುಗಳು ಸಂಗೀತದ ರಸದೌತಣ ನೀಡೋಕೆ ಕಾರಣ ಪಂಡಿತ್‌ ನೀಲಾದ್ರಿ ಕುಮಾರ್‌ ಸಂಗೀತ. ಜುನ್ನೆ ಬ್ಯಾನರ್ಜಿ, ಸಾವನಿ ಮುದುಗಲ್‌, ಬಾಲಚಂದ್ರ ಪ್ರಭು, ಜೋನಿತಾ ಗಾಂಧಿ ಕಂಠದಲ್ಲಿ ಹಾಡುಗಳು ಮಧುರವಾಗಿ ಮೂಡಿಬಂದಿವೆ.

ಎಸ್‌.ಡಿ. ಅರವಿಂದ್‌ ಸಂಗೀತ ನೀಡಿ, ನಿರ್ದೇಶಿಸಿದ್ದ ಲಾಸ್ಟ್‌ ಬಸ್‌ ಚಿತ್ರದಲ್ಲಿ ಡಾ. ಕೆ.ವೈ. ನಾರಾಯಣ ಸ್ವಾಮಿ ಬರೆದ 'ದೂರಿ ದೂರಿ' ಹಾಡು ಏಷ್ಯಾ ಬಿಬಿಸಿ ರೇಡಿಯೋ ಕೇಂದ್ರದಲ್ಲಿ ಪ್ರಸಾರವಾದ ಕನ್ನಡ ಚಿತ್ರಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪರಪಂಚ ಚಿತ್ರಕ್ಕೆ ಯೋಗ್‌ರಾಜ್‌ ಭಟ್‌ ಬರೆದ 'ಹುಟ್ಟಿದ ಊರನು' ಹಾಡು ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಇದನ್ನು ವೆಂಕಟ್‌ ಹಾಡಿ ತೆರೆಯ ಮೇಲೂ ಕಾಣಿಸಿಕೊಂಡಿದ್ದರು. ಎಷ್ಟೋ ಜನ ಈ ಹಾಡು ಕೇಳಿ ತಮ್ಮ ಊರಿಗೆ ಹಿಂತಿರುಗಬೇಕೆಂದು ಅನಿಸಿತು ಎಂದು ಹೇಳಿಕೊಂಡಿದ್ದರು. ದಿನೇಶ್‌ ಬಾಬು ನಿರ್ದೇಶನದ ಪ್ರಿಯಾಂಕಾ ಚಿತ್ರದ ಟೈಟಲ್‌ ಟ್ರಾಕ್‌ (ಸಿಂಗರ್‌ ಉನ್ನಿ ಮೆನನ್‌) ಜನಪ್ರಿಯವಾಯಿತು. ಕೇಶವ ಚಂದ್ರ ಮೊದಲ ಚಿತ್ರದಲ್ಲೇ ಜನಮೆಚ್ಚುಗೆ ಗಳಿಸಿದರು. ಶಿವಯೋಗಿ ಪುಟ್ಟರಾಜ ಗವಾಯಿ ಚಿತ್ರದಲ್ಲಿ 16 ಹಾಡುಗಳು ಅಮರ ಪ್ರಿಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದು ವಿಶೇಷ. ರವಿಚಂದ್ರನ್‌ ಅಭಿನಯ ಮತ್ತು ನಿರ್ದೇಶನದ ಅಪೂರ್ವ ಚಿತ್ರದಲ್ಲಿ ಕೂಡ 11 ಹಾಡುಗಳಿದ್ದವು. 10 ಹಾಡುಗಳಲ್ಲಿ ಗೌತಮ್‌ ಶ್ರೀವತ್ಸ ಕಂಠದಲ್ಲಿ ಮೂಡಿಬಂದವು. ಅತಿ ಹೆಚ್ಚು ಹಾಡುಗಳಿದ್ದ ಇನ್ನೊಂದು ಚಿತ್ರ ಬದ್ಮಾಶ್‌. 9 ಹಾಡುಗಳಿದ್ದ ಚಿತ್ರದಲ್ಲಿ ರಘು ದೀಕ್ಷಿತ್‌ ಕಂಠದಲ್ಲಿ 'ಹರೆ ರಾಮಾ' ಜನಪ್ರಿಯವಾಗಿತ್ತು. ಮಾದ ಮತ್ತು ಮಾನಸಿ ಚಿತ್ರದಲ್ಲಿ ಟೈಟಲ್‌ ಟ್ರ್ಯಾಕ್‌ ಶ್ರೇಯಾ ಘೋಷಾಲ್‌ ಕಂಠದಲ್ಲಿ ಮಧುರವಾಗಿ ಮೂಡಿಬಂತು. ನಾನು ಮತ್ತು ವರಲಕ್ಷ್ಮಿ ಚಿತ್ರದಲ್ಲಿ ವಿ. ಹರಿಕೃಷ್ಣ ಹಾಡಿದ 'ನಾ ಚೆನ್ನಾಗಿದ್ದೆ..' ಹಿಟ್‌ ಆದ ಹಾಡು. ಶಿವರಾಜ್‌ ಕುಮಾರ್‌ ಅಭಿನಯದ ಚಿತ್ರ ಶಿವಲಿಂಗದಲ್ಲಿ ಬೊಂಬೆ ಬೊಂಬೆ ಹಾಡು ಕಾರ್ತಿಕ್‌ ಮತ್ತು ವಾಣಿ ಕಂಠದಲ್ಲಿ ಹಿಟ್‌ ಆಯ್ತು.

ಗಣೇಶ್‌ ಅಭಿನಯದ ಸ್ಟೈಲ್‌ ಕಿಂಗ್‌ ಚಿತ್ರದಲ್ಲಿ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಗಂಗು ಗಂಗೂ, ಸ್ಟೈಲೋ ಸ್ಟೈಲೋ, ಅಲಲೆ ಸುಕುಮಾರಿ ಹಾಡುಗಳು ಹಿಟ್‌ ಆದವು. ಚೇತನ್‌ ನಾಯಕ್‌ ಗಂಗೂ ಗಂಗೂ ಹಾಡಿನ ಮೂಲಕ ಹಿನ್ನೆಲೆ ಗಾಯಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಸಿಂಗರ್‌ ಆಗಿದ್ದು ವಿಶೇಷ. ವಿನಯ್‌ ರಾಜ್‌ಕುಮಾರ್‌ ಅಭಿನಯದ ರನ್‌ ಆಂಟನಿ ಚಿತ್ರದ ಹಾಡುಗಳೂ ಗಮನ ಸೆಳೆದವು. ಬಾಲಿವುಡ್‌ನ ಜಾವೇದ್‌ ಆಲಿ ಒಂದು ಹಾಡನ್ನು ಹಾಡಿದ್ದು ವಿಶೇಷ. ಯೋಗ್‌ರಾಜ್‌ ಭಟ್‌ ದನ ಕಾಯೋನು ಚಿತ್ರಕ್ಕಾಗಿ ಬರೆದ 2 ಹಾಡುಗಳು ಹಿಟ್‌ ಆದವು. ಹಾಲು ಕುಡಿದ ಮಕ್ಕಳೆ ಉಳಿಯೋಲ್ಲ (ಗಾಯಕ ಶರಣ್‌), ನಂದು ನಿಂದು (ವಿಜಯ್‌ ಪ್ರಕಾಶ್‌) ಹಾಡಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮುಕುಂದ ಮುರಾರಿ ಚಿತ್ರದ ವಿ. ನಾಗೇಂದ್ರ ಪ್ರಸಾದ್‌ ಬರೆದ ಗೋಪಾಲ ಬಾ, ಶಂಕರ್‌ ಮಹಾದೇವನ್‌ ಕಂಠದಲ್ಲಿ ಮೂಡಿಬಂದ ಟೈಟಲ್‌ ಸಾಂಗ್‌ ಹೆಚ್ಚು ಕೇಳುಗರನ್ನು ಗಳಿಸಿದವು. ರಾಮ ರಾಮಾರೇ ಚಿತ್ರದ ಮೂರು ಹಾಡುಗಳು ಹೆಸರು ಮಾಡಿದವು. ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ ವಾಸುಕಿ ವೈಭವ್‌.

ಇನ್ನು ಸ್ಟಾರ್‌ ನಟರಾದ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಜೋಗಿ ಪ್ರೇಮ್‌, ಸುದೀಪ್‌, ಉಪೇಂದ್ರಕೆಲ ವರ್ಷಗಳಿಂದ ಗಾಯಕರಾಗಿಯೂ ಬಿಝಿಯಾಗಿದ್ದರು. ಈ ವರ್ಷ ಶರಣ್‌, ರವಿಶಂಕರ್‌, ನೀನಾಸಂ ಸತೀಶ್‌, ಶರಣ್‌, ಶುಭಾ ಪೂಂಜಾ, ಐಂದ್ರಿತಾ ರೇ, ಐಶಾನಿ ಶೆಟ್ಟಿ, ರಾಗಿಣಿ, ನೆನಪಿರಲಿ ಪ್ರೇಮ್‌, ಚಿಕ್ಕಣ್ಣ ಸಿಂಗರ್‌ ಲಿಸ್ಟಿಗೆ ಸೇರಿದ್ದಾರೆ. ಪುನೀತ್‌ ನಟನೆಯ ಚಕ್ರವ್ಯೂಹ ಚಿತ್ರದಲ್ಲಿ ಜೂ.ಎನ್‌ಟಿಆರ್‌ ಹಾಗೂ ಕಾಜಲ್‌ ಅಗರ್‌ವಾಲ್‌ ಹಾಡಿದ್ದು ವಿಶೇಷ ಎನಿಸಿತು.

ಅಂಕಿತ, ಚನ್ನಪ್ಪ, ಅಂಕುರ್‌ ಶರ್ಮಾ, ಪ್ರತೀಕ್ಷಾ ಭಟ್‌, ಸಿದ್ಧಾಂತ್‌, ಕಿರಣ್‌ ಕಾವೇರಪ್ಪ, ಶರತ್‌, ಧನಂಜಯ್‌ ರಂಜನ್‌, ಕಾರ್ತಿಕ್‌, ವಾಸುಕಿ ವೈಭವ್‌ ಹೀಗೆ ಸಾಕಷ್ಟು ಹೊಸ ಗಾಯಕರು ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಗೀತರಚನಾಕಾರರಾಗಿ ನ. ದಾಮೋದರ ಶೆಟ್ಟಿ, ಶ್ರೀ ಚಂದ್ರು, ಶಿವನಂಜೇಗೌಡ ಇನ್ನೂ ಹಲವರು ಗಮನ ಸೆಳೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗ್‌ರಾಜ್‌ ಭಟ್‌, ಕೆ. ಕಲ್ಯಾಣ್‌ ಈ ವರ್ಷವೂ ಗೀತ ರಚನೆಯಲ್ಲಿ ಬಿಝಿ. ಮ್ಯೂಸಿಕ್‌ ಕಂಪೋಸರ್‌ಗಳಾದ ವಿ. ಹರಿಕೃಷ್ಣ ಮತ್ತು ಅರ್ಜುನ ಜನ್ಯ, ಅನೂಪ್‌ ಸೀಳಿನ್‌, ಅಜನೀಶ್‌ ಬೇಡಿಕೆಯಲ್ಲಿದ್ದಾರೆ.

ಟಾಪ್‌ ಸಾಂಗ್ಸ್‌

ತ್ರಾಸ್‌ ಆಗ್ತೈತಿ- ದೊಡ್ಮನೆ ಹುಡುಗ (ಗಾಯಕರು ಹರಿಕೃಷ್ಣ, ಇಂದು ನಾಗರಾಜ್‌)

ಬೆಳಗೆದ್ದು- ಕಿರಿಕ್‌ ಪಾರ್ಟಿ (ವಿಜಯ್‌ ಪ್ರಕಾಶ್‌)

ಅಲ್ಲಾ ಅಲ್ಲಾ- ನಟರಾಜ ಸರ್ವಿಸ್‌ (ಅನೂಪ್‌ ಸೀಳಿನ್‌)

ಸಾಲುತಿಲ್ಲವೆ- ಕೋಟಿಗೊಬ್ಬ -2 (ಶ್ರೇಯಾ ಘೋಷಾಲ್‌, ವಿಜಯ್‌ ಪ್ರಕಾಶ್‌)

ಸರಿಯಾಗಿ- ಮುಂಗಾರು ಮಳೆ-2 (ಅರ್ಮಾನ್‌ ಮಲ್ಲಿಕ್‌)


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ