Quantcast
Channel: VijayKarnataka
Viewing all articles
Browse latest Browse all 6795

ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ :ಆಟದ ಜತೆಗೊಂದಿಷ್ಟು ಜಟಾಪಟಿ

$
0
0

ಕ್ರೀಡಾಂಗಣ ಸ್ಫೂರ್ತಿಯ ಅಂಗಳವಾಗಿರಬೇಕು. ಸಿಟ್ಟು, ಸೆಡವು ಏನೇ ಇದ್ದರೂ ಕ್ರೀಡಾ ಮನೋಭಾವನೆಗೆ ಧಕ್ಕೆ ತರುವಂತಿರಬಾರದು. ಆದರೆ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯುವ ಪ್ರತಿಯೊಂದು ಕ್ರಿಕೆಟ್‌ ಸರಣಿಯಲ್ಲೂ ಒಂದಿಲ್ಲೊಂದು ವಿವಾದಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಸರಣಿಯಲ್ಲೂ ಇಂತಹ ಘಟನೆ ಮರುಕಳಿಸಿದೆ. ಈ ಸರಣಿಯಲ್ಲಿ ರವಿಚಂದ್ರನ್‌ ಅಶ್ವಿನ್‌ ಮತ್ತು ಜೇಮ್ಸ್‌ ಆ್ಯಂಡರ್ಸನ್‌ ಗಲಾಟೆ ಹಾಗೂ ನಾಯಕ ವಿರಾಟ್‌ ಕೊಹ್ಲಿ ಮತ್ತು ಬೆನ್‌ ಸ್ಟೋಕ್ಸ್‌ ನಡುವಿನ ವಿವಾದಗಳು ಪ್ರಮುಖವಾಗಿ ಸುದ್ದಿಯಾದವು. ಭಾರತ ಮತ್ತು ಇಂಗ್ಲೆಂಡ್‌ ಆಟಗಾರರ ನಡುವೆ ಕ್ರೀಡಾಂಗಣದಲ್ಲಿ ನಡೆದ ಪ್ರಮುಖ ವಿವಾದಗಳ ಸುತ್ತ ಒಂದು ನೋಟ.

ಜೇಮ್ಸ್‌ ಆ್ಯಂಡರ್ಸನ್‌ ಮತ್ತು ರವಿಚಂದ್ರನ್‌ ಅಶ್ವಿನ್‌ (2016)

ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ವಿರಾಟ್‌ ಕೊಹ್ಲಿ ಔಟಾಗದೆ 235 ರನ್‌ ಗಳಿಸಿದ್ದರು. ಇದಕ್ಕೆ ಹತಾಶೆಯಿಂದ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್‌, 'ತವರು ಪಿಚ್‌ನಿಂದಾಗಿ ವಿರಾಟ್‌ ಇಷ್ಟು ದೊಡ್ಡ ಇನಿಂಗ್ಸ್‌ ಕಟ್ಟಲು ಸಾಧ್ಯವಾಯಿತು. ಇದೇ ರೀತಿ ಬೌಲಿಂಗ್‌ನಲ್ಲಿ ಅವರು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಲಿ' ಎನ್ನುವ ವಿವಾದಿತ ಹೇಳಿಕೆ ನೀಡಿದ್ದರು. ಇದನ್ನು ತಿಳಿದ ಆರ್‌. ಅಶ್ವಿನ್‌ ಮರುದಿನ ಬ್ಯಾಟಿಂಗ್‌ಗೆ ಬಂದ ಆ್ಯಂಡರ್ಸನ್‌ ಅವರಿಗೆ 'ಹೀಗೆ ಹೇಳಿದ್ದು ಸರಿಯಲ್ಲ. ನಿಮಗೆ ಹತಾಶೆಯಾಗಿದ್ದರೆ ಉತ್ತಮವಾಗಿ ಆಡಿ ತೋರಿಸಿ. ಹತಾಶೆಯನ್ನು ತೋರಿಸುವ ವಿಧಾನ ಇದಲ್ಲ' ಎಂದು ಹೇಳಿದ್ದರು. ಹೀಗೆ ಇಬ್ಬರ ನಡುವೆ ಮೈದಾನದಲ್ಲೇ ವಾಗ್ಯುದ್ಧ ಆರಂಭವಾಯಿತು. ಈ ಸಂದರ್ಭದಲ್ಲಿ ಆಟಗಾರರು ಮತ್ತು ಅಂಪಾಯರ್‌ ಮಧ್ಯ ಪ್ರವೇಶಿಸಿ ವಾಗ್ವಾದವನ್ನು ಶಮನ ಮಾಡಿದ್ದರು.

ವಿರಾಟ್‌ ಕೊಹ್ಲಿ ಮತ್ತು ಬೆನ್‌ ಸ್ಟೋಕ್‌ (2016)

ಮೊಹಾಲಿ ಟೆಸ್ಟ್‌ನಲ್ಲಿ (ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ) ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಬೆನ್‌ ಸ್ಟೋಕ್ಸ್‌ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಕಾರಣವಿಲ್ಲದೆ ಹರಿಹಾಯ್ದು ವಿವಾದಕ್ಕೆ ಕಾರಣರಾದರು. ಕೊಹ್ಲಿ ಜತೆ ವಾಗ್ವಾದ ಮತ್ತು ಔಟಾಗಿ ಹೋಗುವಾಗ ಬಾಯಿಗೆ ಕೈ ಬೆರಳಿಟ್ಟು ಸಂಜ್ಞೆ ಮಾಡಿದ್ದರು. ಇದಕ್ಕೆ ಬೆನ್‌ ಸ್ಟೋಕ್ಸ್‌ ಅವರಿಗೆ ಪಂದ್ಯದ ಶೇ.15ರಷ್ಟು ಶುಲ್ಕ ನೀಡಬೇಕೆಂದು ಐಸಿಸಿ ತಾಕೀತು ಮಾಡಿತು.

ಜೆಲ್ಲಿ ಬಿನ್‌ ವಿವಾದ (2007)

2007ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಜೆಲ್ಲಿ ಬೆಲ್ಸ್‌ , ಭಾರತದ ಜಹೀರ್‌ ಖಾನ್‌ ಬ್ಯಾಟಿಂಗ್‌ ಮಾಡುತ್ತಿರುವಾಗ ಅವರ ಮೈಗೆ ಚೆಂಡು ಎಸೆದು ವಿವಾದಕ್ಕೆ ಕಾರಣರಾದರು. ಜಹೀರ್‌ ಸಿಟ್ಟಿಗೆದ್ದು ಜೆಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಂಪಾಯರ್‌ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಯಿತು. ಈ ಪಂದ್ಯದಲ್ಲಿ ಭಾರತ ವಿರೋಚಿತ ಗೆಲುವನ್ನು ತನ್ನದಾಗಿಸಿಕೊಂಡಿತು.

ರವೀಂದ್ರ ಜಡೇಜಾ ಮತ್ತು ಜೇಮ್ಸ್‌ ಆ್ಯಂಡರ್ಸನ್‌ (2014)

2014ರ ಜುಲೈ 10ರಂದು ನಾಟಿಂಗ್‌ಹ್ಯಾಮ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಅತಿಥೇಯ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ (5 ಪಂದ್ಯಗಳ ಸರಣಿ) ಭಾರತದ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಮತ್ತು ಜೇಮ್ಸ್‌ ಆ್ಯಂಡರ್ಸನ್‌ ನಡುವೆ ಕೊಳಕು ಮಾತಿನ ಜಟಾಪಟಿ ನಡೆದು ಅದು ಐಸಿಸಿ ಅಂಗಳಕ್ಕೆ ಹೋಗಿ ತೀರ್ಮಾನವಾಗಿತ್ತು.

ಸೌರವ್‌ ಗಂಗೂಲಿ ಮತ್ತು ಫ್ಲಿಂಟಾಫ್‌ (2002)

2002ರಲ್ಲಿ ಮುಂಬಯಿಯಲ್ಲಿ ನಡೆದ ಏಕದಿನ ಟೂರ್ನಿಯೊಂದರಲ್ಲಿ ಇಂಗ್ಲೆಂಡ್‌ನ ಆ್ಯಂಡ್ರೀವ್‌ ಫ್ಲಿಂಟಾಫ್‌ ಭಾರತ ವಿರುದ್ಧ ಗೆದ್ದಾಗ ಜರ್ಸಿ ತೆಗೆದು ಸಂಭ್ರಮಿಸಿದರು. ಫ್ಲಿಂಟಾಫ್‌ಗೆ ತಿರುಗೇಟು ನೀಡಲು ಗಂಗೂಲಿ ಕೂಡಾ ಕಾಯುತ್ತಿದ್ದರು. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಗೆದ್ದಾಕ್ಷಣ ನಾಯಕ ಸೌರವ್‌ ಗಂಗೂಲಿ ತಮ್ಮ ಜರ್ಸಿ ಕಳಚಿ ಸಂಭ್ರಮಿಸಿದರು. ಇದು ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್‌ ವಿರುದ್ಧದ ತ್ರಿಕೋನ ಸರಣಿಯಾಗಿತ್ತು.

ಮೈಕಲ್‌ ವ್ಯಾಗನ್‌ ವಿವಾದ (2011)

ನಾಟಿಂಗ್‌ ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಆ್ಯಂಡರ್ಸನ್‌ ಎಸೆತದಲ್ಲಿ ಚೆಂಡು ಲಕ್ಷ್ಮಣ್‌ಗೆ ತಾಗಿ ಕೀಪರ್‌ ಕೈ ಸೇರಿತ್ತು. ಆಗ ಇಂಗ್ಲೆಂಡ್‌ ಆಟಗಾರರು ವಿಕೆಟ್‌ಗೆ ಬಲವಾದ ಅಪೀಲ್‌ ಮಾಡಿದರು. ಅಂಪೈರ್‌ ಅಸದ್‌ ರೌಫ್‌ ನಾಟೌಟ್‌ ತೀರ್ಪು ನೀಡಿದರು. ಆಗ ಇಂಗ್ಲೆಂಡ್‌ ನಾಯಕ ಡಿಆರ್‌ಎಸ್‌ ನಿಯಮಕ್ಕೆ ಮೊರೆಹೋದರು. ಮೂರನೇ ಅಂಪೈರ್‌ ಕೂಡ ಇಂಗ್ಲೆಂಡ್‌ ವಿರುದ್ಧ ತೀರ್ಪು ನೀಡಿದರು. ಈ ನಡುವೆ ಕೇವಿನ್‌ ಪೀಟರ್ಸನ್‌ ಹಾಗೂ ಲಕ್ಷ್ಮಣ್‌ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ 'ಲಕ್ಷ್ಮಣ್‌ ತಮ್ಮ ಬ್ಯಾಟ್‌ಗೆ ವ್ಯಾಸಲಿನ್‌ ಹಚ್ಚಿದ್ದರು' ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ವ್ಯಾಗನ್‌ ಟ್ವೀಟ್‌ ಮಾಡಿ ವಿವಾದ ಸೃಷ್ಟಿಸಿದ್ದರು.

ನಾಸೀರ್‌ ಹುಸೇನ್‌ ಡಾಂಕಿ ವಿವಾದ (2011)

ಇಂಗ್ಲೆಂಡ್‌ ವಿರುದ್ಧದ ಟಿ-20 ಪಂದ್ಯದಲ್ಲಿ ಪಾರ್ಥಿವ್‌ ಪಟೇಲ್‌ ಕ್ಯಾಚ್‌ ಬಿಟ್ಟಿದ್ದರು. ಪಂದ್ಯದ ನಂತರ ದೂರದರ್ಶನದಲ್ಲಿ ಮಾತನಾಡುತ್ತ ನಾಸೀರ್‌ ಹುಸೇನ್‌, ಭಾರತ ತಂಡದಲ್ಲಿ ಮೂರರಿಂದ ನಾಲ್ಕು ಜನ ಉತ್ತಮ ಕ್ಷೇತ್ರ ರಕ್ಷಕರಿದ್ದಾರೆ ಮತ್ತು ಒಂದೆರಡು ಡಾಂಕಿಗಳಿವೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>