Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ: ಡಿಸೆಂಬರ್‌ 27, 2016

$
0
0

ಮೇಷ:- ಎಲ್ಲರಂತೆ ನೀವು ಸಹ ಮದುವೆಗಾಗಿ ಇಷ್ಟಪಡುತ್ತಿದ್ದೀರಿ. ಆದರೆ ಸದ್ಯದ ಗ್ರಹಸ್ಥಿತಿಯು ಇನ್ನು ಸಹ ನಿಮ್ಮ ಮೇಲೆ ಕೃಪೆ ಮಾಡಿರುವುದಿಲ್ಲ. ಭಗವಂತನ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದು ಲೇಸು.

ವೃಷಭ:- ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಮಾತೇ ಅಂತಿಮ. ನಿಮಗೆ ಎದುರು ಮಾತನಾಡುವ ಶಕ್ತಿ ಇತರರಿಗೆ ಇರುವುದಿಲ್ಲ. ನಿಮ್ಮ ಬಾಳಸಂಗಾತಿಯೂ ಕೂಡಾ ನಿಮ್ಮ ಅಣತಿಯಂತೆ ನಡೆಯುವುದರಿಂದ ಸಹಜವಾಗಿ ಈ ದಿನ ನೀವು ಬೀಗುವಿರಿ.

ಮಿಥುನ:- ಆರ್ಥಿಕವಾದ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಯೋಜನೆಗಳನ್ನು ಭದ್ರವಾಗಿ ರೂಪಿಸಿಕೊಳ್ಳುವುದು ಈ ದಿನದ ತುರ್ತು ಕೆಲಸವಾಗಿರುತ್ತದೆ. ಈ ದಿನದ ಕೆಲಸವನ್ನು ಮುಂದೂಡದೆ ಸರಿಯಾದ ಸಮಯಕ್ಕೆ ಕೆಲಸ ಮಾಡಿ ಮುಗಿಸಿರಿ.

ಕಟಕ:- ಕಾಲ ಶ್ರೇಷ್ಠವಾದದ್ದು, ಮುತ್ತು ಒಡೆದರೆ ಹೋಯಿತು, ಹೊತ್ತು ಹೋದರೆ ಮುಗಿಯಿತು ಎಂಬಂತೆ ಈ ದಿನದ ಮಹತ್ತರ ಕೆಲಸಗಳನ್ನು ಇಂದೇ ಮಾಡಿ ಮುಗಿಸಿರಿ. ಇದರಿಂದ ಹೆಚ್ಚಿನ ತಲೆಭಾರ ಕಡಿಮೆ ಆಗುವುದು. ಈ ದಿಶೆಯಲ್ಲಿ ಸ್ನೇಹಿತರ ಬೆಂಬಲ ಪಡೆಯಿರಿ.

ಸಿಂಹ:- ಒಳಿತನ್ನು ಹೇಳಲು ಹೋದರೂ ಅಪಾರ್ಥ ಮಾಡಿಕೊಳ್ಳುವ ಸಂದರ್ಭವಿದೆ. ಅದಕ್ಕೆ ಕಾರಣ ಈ ಹಿಂದಿನ ನಿಮ್ಮ ಸಾಮಾಜಿಕ ನಿಲುವು. ಆಪ್ತರಲ್ಲಿ ಮತ್ತು ಗಣ್ಯವ್ಯಕ್ತಿಗಳ ಜೊತೆಯಲ್ಲಿ ವ್ಯವಹಾರ ಮಾಡುವಾಗ ಉಡಾಫೆ ಮಾತು ಸಲ್ಲದು.

ಕನ್ಯಾ:- ಕೆಲವು ಸಲ ಹುಲ್ಲುಕಡ್ಡಿಯ ಸಹಾಯವನ್ನು ಕೂಡಾ ಪಡೆಯಬೇಕಾಗುತ್ತದೆ. ಹಾಗಾಗಿ ಈ ದಿನ ಯಾರನ್ನು ಕಡೆಗಣಿಸದಿರಿ. ಕಡೆಗಣಿಸಿದ ವ್ಯಕ್ತಿಯ ಮುಂದೆ ನಿಮಗೆ ಸಹಾಯ ಮಾಡುವ ಪರಿಸ್ಥಿತಿ ಎದುರಾಗುವುದು.

ತುಲಾ:- ಬಾಳಸಂಗಾತಿಯ ಮಾತುಗಳಿಂದ ಘಾಸಿಗೊಳ್ಳುವಿರಿ. ಸಾಡೇಸಾತಿ ಶನಿಯ ಕಾಡಾಟದ ಕೊನೆಯ ಹಂತದಲ್ಲಿದ್ದೀರಿ. ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಎಲ್ಲವೂ ಒಳಿತಾಗುವುದು. ಬರುವ ವರ್ಷದಿಂದ ಹೆಚ್ಚಿನ ಅನುಕೂಲ ಕಂಡುಬರುವುದು.

ವೃಶ್ಚಿಕ:- ಮಹತ್ತರವಾದ ಕೆಲಸವೊಂದು ಗುರುವಿನ ಅನುಗ್ರಹದಿಂದ ನೆರವೇರುವುದು. ಇದರಿಂದಾಗಿ ಸಮಾಜದಲ್ಲಿ ಮಾನಮನ್ನಣೆಗಳು ಉಂಟಾಗುವುದು. ಉಷ್ಣ ಸಂಬಂಧದಿಂದ ಉಂಟಾಗುವ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಧನಸ್ಸು:- ಕೆಲವೊಮ್ಮೆ ನೀವಾಡುವ ಮಾತಿನಿಂದ ಪೇಚಿಗೆ ಸಿಲುಕಿಕೊಳ್ಳುವಿರಿ. ಕೆಲವರಿಗೆ ಇದರಿಂದ ಲಾಭವೂ ಉಂಟಾಗುವ ಸಾಧ್ಯತೆ. ಸರ್ಕಾರಿ ನೌಕರರಿಗೆ ಬಡ್ತಿ ಯೋಗವಿದ್ದು ಇರುವ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋಗಲು ಸೂಚನೆ ಸಿಗುವುದು.

ಮಕರ:- ವಿಶೇಷವಾದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಪದೋನ್ನತಿಗೆ ಹೆಚ್ಚಿನದಾದ ಅವಕಾಶ ಕೂಡಿಬರುವುದು. ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ನಿರ್ವಹಿಸಿದಲ್ಲಿ ಇನ್ನು ಹೆಚ್ಚಿನ ಅವಕಾಶಗಳು ನಿಮಗೆ ದೊರೆಯುವುದು.

ಕುಂಭ:- ದೂರದ ಊರಿನ ಸಂಬಂಧಿಗಳು ಬಂದು ಅಶಾಂತಿ ನಿರ್ಮಿಸುವ ಸಾಧ್ಯತೆ ಅಧಿಕವಿದೆ. ಹಾಗಾಗಿ ಈ ದಿನ ಮೌನವ್ರತ ತಾಳುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಮೀನ:- ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೀತಿಯ ಒತ್ತಡ ಬರಬಹುದು. ಹಾಗಾಗಿ ಅದನ್ನು ತಿರಸ್ಕರಿಸದಿರಿ. ಹೊಸ ವಾತಾವರಣದಲ್ಲಿ ನೂತನ ಜನರ ಪರಿಚಯವು ನಿಮಗೆ ಹೆಚ್ಚಿನ ಉತ್ಸಾಹ ನೀಡುವುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>