Quantcast
Channel: VijayKarnataka
Viewing all articles
Browse latest Browse all 6795

ಸುಂದರಾಂಗ ಜಾಣ: ಸುಸ್ತಾಗುವಷ್ಟು ನಗಿಸುವ ಸುಂದರಾಂಗ

$
0
0

-ಪದ್ಮಾ ಶಿವಮೊಗ್ಗ

ರಾಮಾ ಶಾಮಾ ಭಾಮಾ ನಂತರ ಮತ್ತೆ ಕಾಮಿಡಿ ಚಿತ್ರ ನಿರ್ದೇಶನ ಮಾಡಿದ್ದಾರೆ ರಮೇಶ್‌ ಅರವಿಂದ್‌. ಸುಂದರಾಂಗ ಜಾಣ ತೆಲುಗಿನಲ್ಲಿ ತೆರೆಕಂಡ ಸೂಪರ್‌ ಹಿಟ್‌ ಚಿತ್ರ 'ಭಲೇ ಭಲೇ ಮಗಾಡಿವೋಯ್‌' ರಿಮೇಕ್‌. ಗಣೇಶ್‌ ಅಭಿನಯದ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ರೋಮ್ಯಾಂಟಿಕ್‌ ಕಾಮಿಡಿ ಚಿತ್ರವನ್ನು ಎಲ್ಲೂ ಬೋರಾಗದಂತೆ ನಿರ್ದೇಶಿಸಲಾಗಿದೆ.

ಮಾರುತಿ ದಾಸರಿ ತೆಲುಗಿನಲ್ಲಿ ಕತೆ ಬರೆದು ನಿರ್ದೇಶಿಸಿದ್ದರು. ಅದನ್ನು ಕನ್ನಡಕ್ಕೆ ತಂದಿದ್ದಾರೆ ರಮೇಶ್‌ ಅರವಿಂದ್‌ ಮೂಲಕ್ಕೂ ಮುಕ್ಕಾಗದಂತೆ, ಕನ್ನಡ ಪ್ರೇಕ್ಷಕನಿಗೂ ಇಷ್ಟವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಲೈಮಾಕ್ಸ್‌ ಸೇರಿ ಕೆಲ ದೃಶ್ಯಗಳು, ಪಾತ್ರ ಪೋಷಣೆ ಹಳೆಯ ಚಿತ್ರಗಳನ್ನೇ ನೆನಪಿಸಿದರೂ ಸಂಭಾಷಣೆ, ಚುರುಕಾದ ನಿರೂಪಣೆ ಕಾರಣಕ್ಕೆ ಪ್ರೇಕ್ಷಕರನ್ನು ನಕ್ಕು ನಗಿಸುವಂತೆ ಮಾಡುತ್ತದೆ. ಈ ಚಿತ್ರದಲ್ಲಿ ಸ್ಕ್ರಿಪ್ಟೇ ಹೀರೊ. ಅದು ಆಡಿಸಿದಂತೆ ನಟರು ಆಡುತ್ತಾರೆ. ಸ್ಟಾರ್‌ ನಟ ಹೀರೊ ಆಗಿದ್ದರೂ, ರಮೇಶ್‌ ಅರವಿಂದ್‌ ಎಲ್ಲೂ ಸ್ಕ್ರಿಪ್ಟ್‌ಗೆ ಚ್ಯುತಿ ಬರದಂತೆ ಎಚ್ಚರಿಕೆ ವಹಿಸಿದ್ದಾರೆ. ಹಾಸ್ಯ ಅಶ್ಲೀಲದ ಗಡಿ ದಾಟದಂತೆ, ನಟನೆ ಎಲ್ಲೆ ಮೀರದಂತೆ ಲವಲವಿಕೆಯಿಂದ ನೋಡುವಂತಿದೆ ಇಡೀ ಚಿತ್ರ.

ಅಗ್ರಿಕಲ್ಚರ್‌ ಲ್ಯಾಬ್‌ನಲ್ಲಿ ಕೆಲಸ ಮಾಡುವ ಲಕ್ಕಿ (ಗಣೇಶ್‌)ಗೆ ಮರೆವಿನ ಸಮಸ್ಯೆ ಇರುತ್ತದೆ. ಎಂಥಾ ಮರೆವು ಅಂದ್ರೆ ಯಾರಾದ್ರೂ ಮಾತಾಡಿಸಿದರೆ ಒಂದು ಕ್ಷಣದ ಹಿಂದೆ ಏನು ಮಾಡಬೇಕೆಂದಿದ್ದೆ ಅನ್ನುವುದನ್ನೇ ಮರೆಯುವವನು. ಹೆರಿಗೆ ನೋವಿನಿಂದ ನರಳುತ್ತಿರುವ ಹೆಣ್ಣನ್ನು ಕಾರಿನಲ್ಲಿ ಸುರಿವ ಮಳೆಯಲ್ಲಿ ಕರೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಪೋಲಿಸರು ಅಡ್ಡ ಹಾಕಿದ ತಕ್ಷಣ ಕಾರಿನಲ್ಲಿ ಇರುವವರನ್ನೇ ಮರೆತು ಟೀ ಕುಡಿಯುತ್ತಾ ಹರಟೆ ಹೊಡೆಯುವಂಥ ಮರೆವು!

ಇವನ ಮರೆವಿನಿಂದಾಗುವ ಎಡವಟ್ಟುಗಳು ಒಂದೆರಡಲ್ಲ. ಈ ಎಡವಟ್ಟುಗಳೇ ಅವನು ಪ್ರೀತಿಸುವ ಹುಡುಗಿ ನಂದನಾ(ಶಾನ್ವಿ)ಗೆ ಸಮಾಜ ಸೇವೆಯಂತೆ ಕಂಡು, ಅವನಿಗೆ ಮಾರು ಹೋಗುತ್ತಾಳೆ. ಆದರೆ, ಅವಳಪ್ಪ, ಶಿಸ್ತಿನ ಸಿಪಾಯಿ ಪಾಂಡುರಂಗ (ದೇವರಾಜ್‌)ನ ಕಣ್ಣಲ್ಲಿ ಇವನು ನಾಲಾಯಕ್‌. ಇವನನ್ನೇ ತನ್ನ ಮಗಳು ಪ್ರೀತಿಸುತ್ತಿರುವುದು ಎಂದು ಗೊತ್ತಿರದ ಪಾಂಡುರಂಗ ಮದುವೆಗೆ ಒಪ್ಪಿಗೆ ನೀಡುತ್ತಾನೆ. ಇತ್ತ ತಾನೇ ಅವನು ಎಂದು ಹೇಳಲಾಗದ ಲಕ್ಕಿ ಪ್ರೀತಿಸುವ ಹುಡುಗಿಯನ್ನು ಮದುವೆಯಾಗಲು ಏನೇನೋ ಕಸರತ್ತು ಮಾಡುತ್ತಾನೆ ಅನ್ನೋದೆ ಸಿನಿಮಾ.

ಲಕ್ಕಿಯ ತರಲೆ ಫ್ಯಾಮಿಲಿ, ಬಕರಾಗಳಂತೆ ಅವನಿಗೆ ಸಹಾಯ ಮಾಡುವ ಸ್ನೇಹಿತರು, ಗೊಂದಲದಿಂದ ಪರದಾಡುವ ಸಾಧು ಕೋಕಿಲಾ, ಹೀಗೆ ಹಾಸ್ಯಕ್ಕಾಗಿ ಹಲವು ಪಾತ್ರಗಳು ಇವೆ. ಚಿತ್ರ ಚುರುಕಾಗಿ, ಲವಲವಿಕೆಯಿಂದ ಸಾಗುತ್ತದೆ. ಗಣೇಶ್‌ ಲಕ್ಕಿ ಪಾತ್ರಕ್ಕೆ ಪರ್ಫೆಕ್ಟ್ ಮ್ಯಾಚ್‌. ಪಾತ್ರಕ್ಕೆ ಜೀವ ತುಂಬಿದ್ದಾರೆ. ದೇವರಾಜ್‌ ನಟನೆಗೆ ಹೆಚ್ಚು ಅಂಕ. ಬಹುತೇಕ ಚಿತ್ರಗಳಲ್ಲಿ ಇರುವಂಥದ್ದೇ ಪಾತ್ರಗಳು ರಂಗಾಯಣ ರಘು ಮತ್ತು ವೀಣಾ ಸುಂದರ್‌ದು. ರವಿಶಂಕರ್‌ ಗಮನ ಸೆಳೆಯುತ್ತಾರೆ. ಛಾಯಾಗ್ರಹಣ ಚಿತ್ರದ ಮೈನಸ್‌ ಪಾಯಿಂಟ್‌. ಎಡಿಟಿಂಗ್‌ ಚೆನ್ನಾಗಿದೆ. ಕಾಮಿಡಿ ಟೈಮಿಂಗ್‌ ಮತ್ತು ಸಂಭಾಷಣೆ ಚಿತ್ರದ ಹೈಲೈಟ್‌. ಹಾಗಾಗಿ ಹಾಡುಗಳು ಬಂದು ಹೋಗಿದ್ದೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ತಾಂತ್ರಿಕ ದೋಷಗಳೂ ಗೌಣವಾಗಿಬಿಡುತ್ತವೆ. ಈ ವೀಕೆಂಡ್‌ಗೆ ಇಡೀ ಫ್ಯಾಮಿಲಿ ನೋಡಬಹುದಾದ ಚಿತ್ರವಿದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>