ಗ್ರಾಮೀಣ ಸೊಗಡನ್ನು ಹದವಾಗಿ ಬೆರೆಸಿಕೊಂಡು "ತಿಥಿ, ಚಿತ್ರ ಮಾಡಿದ್ದರು ನಿರ್ದೇಶಕ ರಾಮರೆಡ್ಡಿ. "ತರ್ಲೆ ವಿಲೇಜ್ ಚಿತ್ರದಲ್ಲಿಬಹುತೇಕವಾಗಿ ಅದೇ ಕಲಾವಿದರಿದ್ದರೂ, ಆ ಹದ ಇಲ್ಲಿಕೊಂಚ ಏರುಪೇರಾಗಿದೆ. ಚಿತ್ರದ ಶೀರ್ಷಿಕೆಯಂತೆ ನಿರ್ದೇಶಕ ಕೆ.ಎಂ.ರಘು ಹಳ್ಳಿಯಲ್ಲಿನಡೆಯಬಹುದಾದ ಸಾಕಷ್ಟು ತರ್ಲೆಗಳನ್ನು ಒಟ್ಟಾಗಿಸಿ ಈ ಸಿನಿಮಾ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿನಾಟಿ ಸಂಭಾಷಣೆಗಳನ್ನೂ ಸೇರಿಸಿದ್ದಾರೆ. ಹಾಗಾಗಿ ಕುಟುಂಬ ಸಮೇತ ಚಿತ್ರ ನೋಡಲು ಅಲ್ಲಲ್ಲಿಮುಜಗರವಾದರೂ, ಪಡ್ಡೆಗಳ ಪಾಲಿಗಂತೂ ಪರಮಾನ್ನ.
ತಿಥಿ ಸಿನಿಮಾದ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಎಲ್ಲರೂ ಇಲ್ಲಿಕಾಣಸಿಗುತ್ತಾರೆ. ಆದರೆ, ಯಾರೂ ಅಳತೆಗೋಲಿಗೆ ನಟಿಸುವುದಿಲ್ಲ. ಗಂಭೀರ ವಿಷಯವನ್ನು ಹೇಳುವುದಕ್ಕೆ ಹೋಗುವುದಿಲ್ಲ. ತಮ್ಮ ಪಾಡಿಗೆ ತಾವು ಪಾತ್ರವಾಗಿದ್ದರಿಂದ ಇವರ ಅಭಿನಯದ ನೈಜತೆ ಹಾಗೆಯೇ ಮುಂದುವರೆದಿದೆ. ಹಳ್ಳಿಯಲ್ಲಿನಡೆಯುವ ಬಹುತೇಕ ಘಟನೆಗಳೇ ತರ್ಲೆ ವಿಲೇಜ್ನ ಜೀವಾಳ. ಊರಿನ ಸಮಸ್ಯೆ, ಚುನಾವಣೆ, ಪರಸ್ತಿ್ರೕ ವ್ಯಾಮೋಹ, ಮೂಢನಂಬಿಕೆ, ಊರ ಯಜಮಾನನ ದೌಲತ್ತು ಜತೆಗೆ ಅಲ್ಲಷ್ಟು ಪೋಲಿ ದೃಶ್ಯಗಳೂ ಇವೆ. ಅದರ ಜತೆಗೆ ನಿಗೂಢ ಸಾವಿನ ಸುತ್ತ ನಡೆಯುವ ಸಸ್ಪೆನ್್ಸ ಎಳೆಯೊಂದು ಹಳ್ಳಿ ಬೀದಿಯಲ್ಲಿಹಾದು ಹೋಗುತ್ತದೆ. ಯಾವುದಕ್ಕೂ ತಾರ್ಕಿಕ ಅಂತ್ಯ ನೀಡದೆ, ತಮಾಷೆಯಾಗಿ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು. ಹಾಗಾಗಿ ಲಾಜಿಕ್ ಇಲ್ಲದೇ ಬರೀ ಮ್ಯಾಜಿಕ್ ನಡೆಯುತ್ತದೆ ಈ ಸಿನಿಮಾದಲ್ಲಿ.
ಇತ್ತೀಚಿನ ದಿನಗಳಲ್ಲಿಎರಡು ಮಾದರಿಯ ಚಿತ್ರಗಳು ತಯಾರಾಗುತ್ತಿವೆ. ಕೆಲವರು ಕತೆ ಬರೆದುಕೊಂಡು ಅದಕ್ಕೆ ದೃಶ್ಯಗಳನ್ನು ಹೆಣೆಯುತ್ತಾರೆ. ಇನ್ನೂ ಕೆಲವರು ದೃಶ್ಯಗಳನ್ನು ಹೆಣೆದುಕೊಂಡು ಕತೆಕಟ್ಟುತ್ತಾರೆ. ಇದು ಎರಡನೇ ಮಾದರಿಯ ಚಿತ್ರ. ಬಿಡಿಬಿಡಿ ದೃಶ್ಯಗಳನ್ನೇ ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ತರ್ಲೆ ವಿಲೇಜ್ ಸಿನಿಮಾ ಬಿಡಿ ಲೇಖನಗಳ ಸಂಕಲನದಂತೆ ಭಾಸವಾಗುತ್ತದೆ.
ಊರಿನ ನಾಯಕ ನಂಜಪ್ಪ (ಸೆಂಚುರಿ ಗೌಡ)ಗೌಡ ಕೇವಲ ಊರಿನ ಜನರನ್ನು ಬೈಯುವುದರಲ್ಲೇ ಕಾಲ ಕಳೆದರೆ, ಈತನನ್ನು ಕೂಲಾಗಿರಿಸುವ ಪ್ರಯತ್ನದಲ್ಲಿಗಡ್ಡಪ್ಪ ತನ್ನ ದಿನಗಳನ್ನು ಕಳೆಯುತ್ತಾನೆ. ದಲ್ಲಾಳಿ ಪಾತ್ರಧಾರಿ ತಮ್ಮಣ್ಣ ಪರಸ್ತಿ್ರೕ ಸಹವಾಸದಲ್ಲಿದ್ದರೆ, ಅಭಿಗೆ ಮತ್ತೆ ತಿಥಿ ಚಿತ್ರದ ಪಾತ್ರವನ್ನೇ ಹೋಲುವಂತಹ ಕ್ಯಾರೆಕ್ಟರ್ ಸಿಕ್ಕಿದೆ. ಎಲ್ಲರೂ ತಮಗೆ ಕೊಟ್ಟಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಮನರಂಜನೆಯೇ ಈ ಸಿನಿಮಾದ ಪ್ರಮುಖ ಉದ್ದೇಶ. ಹಾಗಾಗಿ ಅದಕ್ಕೆ ಏನೆಲ್ಲಮಸಾಲೆಗಳು ಬೇಕಿತ್ತೋ ಎಲ್ಲವೂ ಇಲ್ಲಿದೆ. ತಿಥಿ ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿದವರಿಗೆ ಈ ಸಿನಿಮಾ ನಿರಾಸೆ ಮೂಡಿಸಿದರೂ, ಮನರಂಜನೆ ಬಯಸಿ ಹೋಗುವವರಿಗೆ ಪೋಲಿ ಪುಷ್ಕಳ ಗ್ಯಾರಂಟಿ.
- ಶರಣು ಹುಲ್ಲೂರು