Quantcast
Channel: VijayKarnataka
Viewing all articles
Browse latest Browse all 6795

ತರ್ಲೆ ವಿಲೇಜ್‌: ತರ್ಲೆಗಳು ಸಾರ್‌ ತರ್ಲೆಗಳು

$
0
0

- ಶರಣು ಹುಲ್ಲೂರು

ಗ್ರಾಮೀಣ ಸೊಗಡನ್ನು ಹದವಾಗಿ ಬೆರೆಸಿಕೊಂಡು "ತಿಥಿ, ಚಿತ್ರ ಮಾಡಿದ್ದರು ನಿರ್ದೇಶಕ ರಾಮರೆಡ್ಡಿ. "ತರ್ಲೆ ವಿಲೇಜ್‌ ಚಿತ್ರದಲ್ಲಿಬಹುತೇಕವಾಗಿ ಅದೇ ಕಲಾವಿದರಿದ್ದರೂ, ಆ ಹದ ಇಲ್ಲಿಕೊಂಚ ಏರುಪೇರಾಗಿದೆ. ಚಿತ್ರದ ಶೀರ್ಷಿಕೆಯಂತೆ ನಿರ್ದೇಶಕ ಕೆ.ಎಂ.ರಘು ಹಳ್ಳಿಯಲ್ಲಿನಡೆಯಬಹುದಾದ ಸಾಕಷ್ಟು ತರ್ಲೆಗಳನ್ನು ಒಟ್ಟಾಗಿಸಿ ಈ ಸಿನಿಮಾ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿನಾಟಿ ಸಂಭಾಷಣೆಗಳನ್ನೂ ಸೇರಿಸಿದ್ದಾರೆ. ಹಾಗಾಗಿ ಕುಟುಂಬ ಸಮೇತ ಚಿತ್ರ ನೋಡಲು ಅಲ್ಲಲ್ಲಿಮುಜಗರವಾದರೂ, ಪಡ್ಡೆಗಳ ಪಾಲಿಗಂತೂ ಪರಮಾನ್ನ.

ತಿಥಿ ಸಿನಿಮಾದ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಎಲ್ಲರೂ ಇಲ್ಲಿಕಾಣಸಿಗುತ್ತಾರೆ. ಆದರೆ, ಯಾರೂ ಅಳತೆಗೋಲಿಗೆ ನಟಿಸುವುದಿಲ್ಲ. ಗಂಭೀರ ವಿಷಯವನ್ನು ಹೇಳುವುದಕ್ಕೆ ಹೋಗುವುದಿಲ್ಲ. ತಮ್ಮ ಪಾಡಿಗೆ ತಾವು ಪಾತ್ರವಾಗಿದ್ದರಿಂದ ಇವರ ಅಭಿನಯದ ನೈಜತೆ ಹಾಗೆಯೇ ಮುಂದುವರೆದಿದೆ. ಹಳ್ಳಿಯಲ್ಲಿನಡೆಯುವ ಬಹುತೇಕ ಘಟನೆಗಳೇ ತರ್ಲೆ ವಿಲೇಜ್‌ನ ಜೀವಾಳ. ಊರಿನ ಸಮಸ್ಯೆ, ಚುನಾವಣೆ, ಪರಸ್ತಿ್ರೕ ವ್ಯಾಮೋಹ, ಮೂಢನಂಬಿಕೆ, ಊರ ಯಜಮಾನನ ದೌಲತ್ತು ಜತೆಗೆ ಅಲ್ಲಷ್ಟು ಪೋಲಿ ದೃಶ್ಯಗಳೂ ಇವೆ. ಅದರ ಜತೆಗೆ ನಿಗೂಢ ಸಾವಿನ ಸುತ್ತ ನಡೆಯುವ ಸಸ್ಪೆನ್‌್ಸ ಎಳೆಯೊಂದು ಹಳ್ಳಿ ಬೀದಿಯಲ್ಲಿಹಾದು ಹೋಗುತ್ತದೆ. ಯಾವುದಕ್ಕೂ ತಾರ್ಕಿಕ ಅಂತ್ಯ ನೀಡದೆ, ತಮಾಷೆಯಾಗಿ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು. ಹಾಗಾಗಿ ಲಾಜಿಕ್‌ ಇಲ್ಲದೇ ಬರೀ ಮ್ಯಾಜಿಕ್‌ ನಡೆಯುತ್ತದೆ ಈ ಸಿನಿಮಾದಲ್ಲಿ.

ಇತ್ತೀಚಿನ ದಿನಗಳಲ್ಲಿಎರಡು ಮಾದರಿಯ ಚಿತ್ರಗಳು ತಯಾರಾಗುತ್ತಿವೆ. ಕೆಲವರು ಕತೆ ಬರೆದುಕೊಂಡು ಅದಕ್ಕೆ ದೃಶ್ಯಗಳನ್ನು ಹೆಣೆಯುತ್ತಾರೆ. ಇನ್ನೂ ಕೆಲವರು ದೃಶ್ಯಗಳನ್ನು ಹೆಣೆದುಕೊಂಡು ಕತೆಕಟ್ಟುತ್ತಾರೆ. ಇದು ಎರಡನೇ ಮಾದರಿಯ ಚಿತ್ರ. ಬಿಡಿಬಿಡಿ ದೃಶ್ಯಗಳನ್ನೇ ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ತರ್ಲೆ ವಿಲೇಜ್‌ ಸಿನಿಮಾ ಬಿಡಿ ಲೇಖನಗಳ ಸಂಕಲನದಂತೆ ಭಾಸವಾಗುತ್ತದೆ.

ಊರಿನ ನಾಯಕ ನಂಜಪ್ಪ (ಸೆಂಚುರಿ ಗೌಡ)ಗೌಡ ಕೇವಲ ಊರಿನ ಜನರನ್ನು ಬೈಯುವುದರಲ್ಲೇ ಕಾಲ ಕಳೆದರೆ, ಈತನನ್ನು ಕೂಲಾಗಿರಿಸುವ ಪ್ರಯತ್ನದಲ್ಲಿಗಡ್ಡಪ್ಪ ತನ್ನ ದಿನಗಳನ್ನು ಕಳೆಯುತ್ತಾನೆ. ದಲ್ಲಾಳಿ ಪಾತ್ರಧಾರಿ ತಮ್ಮಣ್ಣ ಪರಸ್ತಿ್ರೕ ಸಹವಾಸದಲ್ಲಿದ್ದರೆ, ಅಭಿಗೆ ಮತ್ತೆ ತಿಥಿ ಚಿತ್ರದ ಪಾತ್ರವನ್ನೇ ಹೋಲುವಂತಹ ಕ್ಯಾರೆಕ್ಟರ್‌ ಸಿಕ್ಕಿದೆ. ಎಲ್ಲರೂ ತಮಗೆ ಕೊಟ್ಟಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಮನರಂಜನೆಯೇ ಈ ಸಿನಿಮಾದ ಪ್ರಮುಖ ಉದ್ದೇಶ. ಹಾಗಾಗಿ ಅದಕ್ಕೆ ಏನೆಲ್ಲಮಸಾಲೆಗಳು ಬೇಕಿತ್ತೋ ಎಲ್ಲವೂ ಇಲ್ಲಿದೆ. ತಿಥಿ ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿದವರಿಗೆ ಈ ಸಿನಿಮಾ ನಿರಾಸೆ ಮೂಡಿಸಿದರೂ, ಮನರಂಜನೆ ಬಯಸಿ ಹೋಗುವವರಿಗೆ ಪೋಲಿ ಪುಷ್ಕಳ ಗ್ಯಾರಂಟಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>