Quantcast
Channel: VijayKarnataka
Viewing all articles
Browse latest Browse all 6795

ನಟರಾಜ ಸರ್ವಿಸ್ ಚಿತ್ರ ವಿಮರ್ಶೆ: ತೆಳು ಹಾಸ್ಯದ ನಟರಾಜ ಸರ್ವೀಸ್

$
0
0

ಕನ್ನಡ ಚಿತ್ರ


* ಪದ್ಮಾ ಶಿವಮೊಗ್ಗ

ಶರಣ್‌ಗೆ ಅಭಿಮಾನಿಗಳ ಕೊರತೆ ಇಲ್ಲ. ಕಾಮಿಡಿಗಾಗಿಯೇ ಅವರ ಚಿತ್ರಗಳನ್ನು ಇಷ್ಟಪಟ್ಟು ನೋಡುವವರಿದ್ದಾರೆ. ಹಾಗಾಗಿ ತಮ್ಮ ಬುಹೇತ ಚಿತ್ರಗಳಲ್ಲಿ ಅವರು ಹೀರೊಯಿಸಂ ಬಿಟ್ಟು ಸಾಮಾನ್ಯ ಪಾತ್ರಗಳಲ್ಲೇ ನಟಿಸುತ್ತಾ ಬಂದು ಗೆದ್ದಿದ್ದಾರೆ. ನಟರಾಜ ಸರ್ವಿಸ್ ಚಿತ್ರದಲ್ಲಿ ಕೂಡಾ ಅಂಥದ್ದೇ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಪವನ್ ಒಡೆಯರ್ ಮತ್ತು ಶರಣ್ ಜೋಡಿಯ ಚಿತ್ರ ಎನ್ನುವ ಕಾರಣಕ್ಕೆ ಸ್ವಲ್ಪ ಜಾಸ್ತಿ ಕಾಮಿಡಿ ನಿರೀಕ್ಷೆ ಮಾಡಿಕೊಂಡು ಹೋದರೆ ಈ ಚಿತ್ರ ಕೊಂಚ ನಿರಾಶೆ ಆಗುತ್ತದೆ.

ನಟರಾಜ (ಶರಣ್) ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಜೈಲಿನಲ್ಲೇ ಜಾಲಿಯಾಗಿ ಇರುವವನು. ಜೈಲು ಮತ್ತು ಹೊರಗಿನ ಜಗತ್ತು ಅವನ ಪಾಲಿಗೆ ಬೇರೆ ಬೇರೆಯಲ್ಲ. ಬ್ಯಾಂಕ್ ಲೂಟಿ ಮಾಡಿ ಶ್ರೀಮಂತನಾಗಬೇಕು, ತಪ್ಪಿದರೆ ಪೋಲಿಸರ ಕೈಗೆ ಸಿಕ್ಕಿ ಕೊನೆಪಕ್ಷ ಮೂರು ವರ್ಷವಾದರೂ ಜೈಲಿನಲ್ಲಿ ಬಿಟ್ಟಿ ಊಟ ಮಾಡಿಕೊಂಡಿರಬೇಕು ಎಂಬ ಆಸೆ ಅವನಿಗೆ. ಇನ್ನು ಸಹನಾ (ಮಯೂರಿ) ಜ್ಯೋತಿಷಿ ಯೊಬ್ಬನ ಮಾತಿನಂತೆ ದುರಾದೃಷ್ಟವನ್ನೇ ತರುವ ಹುಡುಗಿ. ಅವಳನ್ನು ಪ್ರೀತಿಸುವೆ ಎಂದಾಕ್ಷಣ ಐವರು ಹುಡುಗರು ಸಾಯುತ್ತಾರೆ. ಅಲ್ಲಿ ನಿರಂತರವಾಗಿ ಅನ್‌ಲಕ್ಕಿ ಹುಡುಗಿ ಎಂಬ ಮೂದಲಿಕೆ ಬೇರೆ. ಕೊನೆಗೂ ಇದನ್ನೆಲ್ಲಾ ನಂಬದ ಸಂಜಯ್ ಎಂಬ ಹುಡುಗ ಅವಳನ್ನು ಪ್ರೀತಿಸುತ್ತಾನೆ. ಅವನ ಅಪ್ಪ ದೊಡ್ಡ ರೌಡಿ. ಆ ಅಪ್ಪನಿಗೋ ಜ್ಯೋತಿಷ್ಯದಲ್ಲಿ ವಿಪರೀತ ಅನ್ನುವಷ್ಟು ನಂಬಿಕೆ. ಸಹನಾ ದುರಾದೃಷ್ಟಕ್ಕೆ ಇವರ ಕುಟುಂಬವೂ ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತದೆ. ಕೊನೆಗೆ ಅವಳು ಜೀವ ಉಳಿಸಿಕೊಳ್ಳಲು ಹೋಗಿ ಕಾಡಿನಲ್ಲಿ ಸಿಕ್ಕಿಕೊಳ್ಳುತ್ತಾಳೆ. ಕಳ್ಳತನ ಬಿಡಲಾಗದೆ ಶರಣ್ ಕೂಡಾ ಆಕಸ್ಮಿಕವಾಗಿ ಕಾಡಿಗೆ ಬರುತ್ತಾನೆ. ಇಬ್ಬರೂ ಮೀಟ್ ಮಾಡುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅಸಲಿ ಸ್ಟೋರಿ. ಅದೇನು ಅನ್ನೋದನ್ನ ಚಿತ್ರದಲ್ಲೇ ನೋಡಿ.

ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ. ಮೊದಲರ್ಧ ಚುರುಕಾಗಿದೆ. ಆದರೆ, ಕತೆಗಾಗಿ ಜ್ಯೋತಿಷ್ಯವನ್ನು ನಿಜವೆಂದು ನಂಬಿಸುವ ಅನಾರೋಗ್ಯಕರ ನಿಲುವಿಗೆ ನಿರ್ದೇಶಕರು ಬದ್ಧರಾಗಿದ್ದಾರೆ. ದ್ವಿತಿಯಾರ್ಧ ನಟರಾಜ ಸರ್ವಿಸ್‌ನಂತೆಯೇ ಸಾಗುತ್ತದೆ. ಸಾವುಗಳು, ಅಪಘಾತಗಳು ಪವಾಡದಂತೆ ನಡೆಯುತ್ತವೆ. ಹಾಸ್ಯಕ್ಕೆ ಹಾತೊರೆದು ಕೂತ ಪ್ರೇಕ್ಷಕನ ಮೇಲೆ ಕಾಮಿಡಿಯ ತುಂತುರು ಮಳೆಯಾಗುತ್ತದೆ.

ಉಳಿದಂತೆ ಶರಣ್, ಮಯೂರಿ ಚೆನ್ನಾಗಿ ನಟಿಸಿದ್ದಾರೆ. ಛಾಯಾಗ್ರಹಣ ಸಪ್ಪೆ. ಒಂದೆರಡು ಹಾಡುಗಳು ಚೆನ್ನಾಗಿವೆ. ಅನೂಪ್ ಸಂಗೀತ ಚಿತ್ರಕ್ಕೆ ಚೇತರಿಕೆ ತಂದಿದೆ. ವಿಚಿತ್ರವೆಂದರೆ ಪವನ್ ಒಡೆಯರ್ ಹಿಂದಿನ ಚಿತ್ರಗಳ ಮ್ಯಾಜಿಕ್ ಇಲ್ಲಿ ಕಾಣಿಸುವುದಿಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>