Quantcast
Channel: VijayKarnataka
Viewing all articles
Browse latest Browse all 6795

ಬೀಜ ಖರೀದಿಗೆ ಹಳೆ ನೋಟು

$
0
0

*ರೈತರಿಗೆ ವಿನಾಯಿತಿ ಪ್ರಕಟಿಸಿದ ಸರಕಾರ

ಹೊಸದಿಲ್ಲಿ: ನೋಟು ರದ್ದು ಕ್ರಮ ದೇಶದ ಕೃಷಿಕರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮತ್ತಷ್ಟು ಉಪಕ್ರಮಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ.

ರೈತರು ಬೀಜ ಖರೀದಿಸಲು ಹಳೆಯ 500 ರೂ. ನೋಟುಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೇರಿದ ಮಳಿಗೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಮಳಿಗೆಗಳು, ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮಗಳು, ಕೇಂದ್ರ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗಳಲ್ಲಿ ರೈತರು ಹಳೆ ನೋಟು ನೀಡಿ ಬೀಜ ಖರೀದಿಸಬಹುದು. ಇದಕ್ಕಾಗಿ ಅವರು ಗುರುತು ಪತ್ರ ನೀಡಿದರೆ ಸಾಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.

ಕೃಷಿ ಚಟುವಟಿಕೆಗೆ ತೊಡಕು ಉಂಟಾಗಬಾರದು ಎಂಬ ಕಾರಣಕ್ಕಾಗಿ ರೈತರು ಮತ್ತು ಕೃಷಿ ಸಾಲ ಮತ್ತು ಖಾತೆಗಳಿಂದ ವಾರಕ್ಕೆ 25 ಸಾವಿರ ರೂ. ಪಡೆಯಲು ಅನುಮತಿ ಕಲ್ಪಿಸಲಾಗಿತ್ತು.

ಬೆಳೆ ವಿಮೆ ಕಂತು ಪಾವತಿ ಅವಧಿ ವಿಸ್ತರಣೆ

ಇದರೊಂದಿಗೆ ರೈತರು ತಮ್ಮ ಬೆಳೆ ವಿಮೆ ಪಾವತಿ ಮಾಡುವ ಅವದಿಯನ್ನು 15 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಎಪಿಎಂಸಿ ಸಂಘದಲ್ಲಿ ನೋಂದಾಯಿಸಿಕೊಂಡ ಕೃಷಿ ಉತ್ಪನ್ನ ವ್ಯಾಪಾರಿಗಳಿಗೆ ತಮ್ಮ ಖಾತೆಯಿಂದ ವಾರಕ್ಕೆ 50 ಸಾವಿರ ರೂ.ಗಳಷ್ಟು ಹಣ ಪಡೆಯಲು ಅವಕಾಶ ನೀಡಲಾಗಿತ್ತು. ಜತೆಗೆ ವಾರಕ್ಕೆ 50 ಸಾವಿರ ರೂ.ಗಳಷ್ಟು ಓವರ್‌ಡ್ರಾಫ್ಟ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ.


ಚಾಲ್ತಿ ಖಾತೆ(ಕರೆಂಟ್‌ ಅಕೌಂಟ್‌)/ಓವರ್‌ಡ್ರಾಫ್ಟ್‌ ಮತ್ತು ಬೆಳೆಸಾಲ ಖಾತೆ ಹೊಂದಿರುವ ಕೃಷಿ ಉತ್ಪನ್ನ ವ್ಯಾಪಾರಿಗಳು ಈಗ ವಾರಕ್ಕೆ 50 ಸಾವಿರ ರೂ. ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕ್‌ಗಳಲ್ಲಿ ಕ್ಯೂ ಇಲ್ಲ, ಎಟಿಎಂಗಳಲ್ಲಿ ನೋಟಿಲ್ಲ

ನೋಟು ರದ್ದುಗೊಂಡು 12 ದಿನಗಳ ಕಳೆದರೂ, ಜನರ ಹಣದ ಬವಣೆ ತಪ್ಪಿಲ್ಲ. ಬ್ಯಾಂಕ್‌ಗಳಲ್ಲಿ ಹಣ ವಿನಿಮಯ ಮತ್ತು ಡೆಪಾಸಿಟ್‌ ಮಾಡುವವರ ಸರತಿ ಕರಗಿದೆಯಾದರೂ, ದಿನನಿತ್ಯದ ಬಳಕೆಗೆ ಹಣ ಬೇಕಾದವರು ಎಟಿಎಂಗಳ ಮುಂದೆ ಗಂಟೆಗಟ್ಟಲೆ ತಪಸ್ಸು ಮಾಡಬೇಕಾಗಿದೆ. ದೇಶದ ಮುಕ್ಕಾಲು ಪಾಲು ಎಟಿಎಂಗಳು ಇನ್ನೂ ಕಾರಾರ‍ಯರಂಭ ಮಾಡಿಲ್ಲ. ಹಣ ಇರುವ ಬೆರಳೆಣಿಕೆಯಷ್ಟು ಎಟಿಎಂಗಳಲ್ಲಿ ಎಲ್ಲರಿಗೂ ಹಣ ಸಿಗುತ್ತಿಲ್ಲ. ಸಿಗುತ್ತಿರುವ 2000 ರೂ. ಮುಖಬೆಲೆಯ ನೋಟನ್ನು ಹೇಗೆ ಚಿಲ್ಲರೆ ಮಾಡುವುದು ಎಂಬ ಚಿಂತೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಕೈಯಲ್ಲಿ ಸಾವಿರಗಟ್ಟಲೆ ಹಣವಿದ್ದರೂ, ಚಿಲ್ಲರೆ ಸಿಗದೇ ಪರದಾಡುವ ಸ್ಥಿತಿ ಜನರದ್ದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>