Quantcast
Channel: VijayKarnataka
Viewing all articles
Browse latest Browse all 6795

ಸಾಹಿತ್ಯ ಸಮ್ಮೇಳನದಲ್ಲಿ ಮೊಬೈಲ್‌ ಎಟಿಎಂ: ಎಸ್‌ಬಿಎಂ ಒಪ್ಪಿಗೆ

$
0
0

* ಪತ್ರಿಕಾಗೋಷ್ಠಿಯಲ್ಲಿ ಮನು ಬಳಿಗಾರ್‌ ಮಾಹಿತಿ * ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ

ಬೆಂಗಳೂರು: ರಾಯಚೂರಿನಲ್ಲಿ ಡಿ.2ರಂದು ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಚಾರಿ ಎಟಿಎಂಗಳನ್ನು ಸ್ಥಾಪಿಸುವಂತೆ ಬ್ಯಾಂಕ್‌ಗಳಿಗೆ ಮಾಡಿಕೊಂಡ ಮನವಿಗೆ 'ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು' ಸಕಾರಾತ್ಮಕವಾಗಿ ಸ್ಪಂದಿಸಿದೆ. ಉಳಿದ ಬ್ಯಾಂಕುಗಳು ಕೂಡ ಪೂರಕವಾಗಿ ಪ್ರತಿಕ್ರಿಯಿಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳಿಗಾರ್‌ ಈ ಮಾಹಿತಿ ನೀಡಿದರು. ಮಂಗಳವಾರ 'ವಿಕ' ಏರ್ಪಡಿಸಿದ್ದ ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಿಗಾರ್‌ ಅವರು, ಹಳೆ ನೋಟು ನಿಷೇಧದಿಂದ ಸಾಹಿತ್ಯಾಭಿಮಾನಿಗಳಿಗೆ ಆಗುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಸಂಚಾರಿ ಎಟಿಎಂ ಸ್ಥಾಪನೆ ಕುರಿತು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

''ಸಮ್ಮೇಳನಕ್ಕೆ ಸರಕಾರವು ಈಗಾಗಲೇ ಎರಡು ಕೋಟಿ ರೂ. ಬಿಡುಗಡೆ ಮಾಡಿದೆ. ಜತೆಗೆ ಇನ್ನೂ ಎರಡು ಕೋಟಿ ರೂ.ಗಳನ್ನು ಇನ್ನು 3-4 ದಿನಗಳಲ್ಲಿ ಕೊಡಲಿದೆ. ಸಮ್ಮೇಳನದಲ್ಲಿ ಮೂರು ದಿನವೂ 50 ಸಾವಿರ ಜನರಿಗೆ ಊಟ-ತಿಂಡಿಯ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಈ ಬಾರಿ 90ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಊಟ-ತಿಂಡಿ ಮತ್ತಿತರ ಕೆಲಸಗಳಲ್ಲಿ ನೆರವಾಗಲು ಎರಡು ಸಾವಿರ ಜನರ 'ಕನ್ನಡ ಸೇವಕರು' ಪಡೆಯನ್ನು ಸಿದ್ಧಗೊಳಿಸಿ, ಅವರಿಗೆ ತರಬೇತಿ ನೀಡಲಾಗುತ್ತಿದೆ. ಅತಿಥಿಗಳು ಮತ್ತು ಪ್ರತಿನಿಧಿಗಳ ವಾಸ್ತವ್ಯದ ಅನುಕೂಲಕ್ಕಾಗಿ ರಾಯಚೂರಿನ ಹೋಟೆಲುಗಳ ಸಂಘದವರು 500 ಕೊಠಡಿಗಳನ್ನು ಉಚಿತವಾಗಿ ಒದಗಿಸಲು ಮುಂದೆಬಂದಿದ್ದಾರೆ. ಕಲ್ಯಾಣ ಮಂಟಪಗಳು, ಸರಕಾರಿ ಹಾಸ್ಟೆಲ್‌ಗಳು, ಶಾಲಾಕಾಲೇಜುಗಳು, ಪ್ರವಾಸಿ ಮಂದಿರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು ಆರು ಸಾವಿರ ಜನರಿಗೆ ವಸತಿ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ'' ಎಂದು ಬಳಿಗಾರ್‌ ಹೇಳಿದರು.

ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಗೌರವ ಕಾರ್ಯದರ್ಶಿಗಳಾದ ಭೀಮನಗೌಡ ಇಟಗಿ, ಜೆ ಎಲ್‌ ಈರಣ್ಣ, ವ ಚ ಚನ್ನೇಗೌಡ, ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಸುದರ್ಶನ ಬೇಳೂರು ಮುಂತಾದವರು ಉಪಸ್ಥಿತರಿದ್ದರು.

ಭದ್ರತೆಗೆ ಸಿಸಿ ಟಿವಿ ಕ್ಯಾಮರಾ

''ಸಮ್ಮೇಳನದ ಪ್ರಧಾನ ವೇದಿಕೆಯು ಒಟ್ಟು ಆರು ಎಕರೆಗಿಂತ ವಿಸ್ತಾರವಾಗಿದ್ದು, ಯಾವುದೇ ಭದ್ರತಾ ಲೋಪ ಆಗದಂತೆ ಎಚ್ಚರ ವಹಿಸಲಾಗಿದೆ. ಇದಕ್ಕಾಗಿ ಸಭಾಂಗಣದ ಸುತ್ತಮುತ್ತ 15ಕ್ಕೂ ಹೆಚ್ಚು ಸಿ.ಸಿ. ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಜತೆಗೆ, ಸಮ್ಮೇಳನದ ಪ್ರತಿಯೊಂದು ಚಟುವಟಿಕೆಗಳನ್ನೂ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಇದರ ಹೊಣೆಯನ್ನು ರಾಯಚೂರು ಜಿಲ್ಲಾ ಕಸಾಪ ಘಟಕ ಹೊತ್ತುಕೊಂಡಿದೆ,'' ಎಂದು ಮನು ಬಳಿಗಾರ್‌ ಹೇಳಿದರು.

ಒಒಡಿ ಪ್ರಮಾಣಪತ್ರ ನಿರಾತಂಕ

ಸಮ್ಮೇಳನಕ್ಕೆ ಬರುವ ಸರಕಾರಿ ನೌಕರರಿಗೆ ಒಒಡಿ ಪ್ರಮಾಣಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಸಮ್ಮೇಳನಗಳಲ್ಲೂ ನೂಕುನುಗ್ಗಲು ಸಾಮಾನ್ಯ. ಆದರೆ, ಈ ಬಾರಿ ಹೀಗಾಗದಂತೆ ಎಚ್ಚರ ವಹಿಸಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಸಾಪ ಘಟಕಗಳ ಅಧ್ಯಕ್ಷರಿಗೇ ಈ ಜವಾಬ್ದಾರಿ ವಹಿಸಿದೆ. ಇದರ ಪ್ರಕಾರ ಸರಕಾರಿ ನೌಕರರಿಗೆ ಡಿ.3ರ ರಾತ್ರಿಯಿಂದ ಅಥವಾ ಡಿ.4ರ ಬೆಳಗ್ಗೆಯಿಂದ ಒಒಡಿ ಕೊಡುವ ವ್ಯವಸ್ಥೆ ಮಾಡಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>