Quantcast
Channel: VijayKarnataka
Viewing all articles
Browse latest Browse all 6795

ನೋಟು ರದ್ದು: ಸವೀರ್‍ಸ್‌ನಲ್ಲಿ ವ್ಯತ್ಯಯ

$
0
0

500 ಹಾಗೂ 1000 ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ‘ನಟರಾಜ್‌ ಸವೀರ್‍ಸ್‌’ ಚಿತ್ರತಂಡಕ್ಕೆ ಆಗಿರುವ ಅನುಭವವೇ ಬೇರೆ. ಅದೇನು ಅಂತೀರಾ, ಇಲ್ಲಿದೆ ವಿವರ.

- ಪದ್ಮಾ ಶಿವಮೊಗ್ಗ

ದೇಶಾದ್ಯಂತ 500 ಹಾಗೂ 1000 ರೂ. ಮುಖಬೆಲೆಯ ಹಳೆಯ ನೋಟುಗಳು ಬ್ಯಾನ್‌ ಆದಾಗಿನಿಂದ ಸಾರ್ವಜನಿಕರಿಗೆ ಹಣಕಾಸು ವ್ಯವಹಾರದಲ್ಲಿ ಒಂದಿಷ್ಟು ವ್ಯತ್ಯಯ ಆಗಿದ್ದೇನೋ ನಿಜ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಆಗಿದ್ದರೆ, ಮುಂದಿನ ವಾರ ರಿಲೀಸ್‌ ಆಗಲಿರುವ ‘ನಟರಾಜ ಸವೀರ್‍ಸ್‌’ ಚಿತ್ರತಂಡಕ್ಕೆ ಆಗಿರುವ ತೊಂದರೆಯೇ ಬೇರೆ.

ಈ ನೋಟುಗಳು ಬ್ಯಾನ್‌ ಆಗುತ್ತಿದ್ದಂತೆ ನಿರ್ದೇಶಕ ಪವನ್‌ ಒಡೆಯರ್‌ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕ್‌ಗೆ ಧಾವಿಸಿದ್ದಾರೆ. ಕಾರಣ, ಚಿತ್ರದಲ್ಲಿ 1000 ರೂ. ಮುಖಬೆಲೆಯ ನೋಟುಗಳನ್ನು ನಾಯಕ ದರೋಡೆ ಮಾಡುವ ದೃಶ್ಯವಿದೆಯಂತೆ.

ಚಿತ್ರದಲ್ಲಿ ನಾಯಕ ಬ್ಯಾಂಕ್‌ ದರೋಡೆ ಮಾಡುತ್ತಾನೆ. ಈ ದೃಶ್ಯದ ಚಿತ್ರೀಕರಣ ಮಾಡುವಾಗ ಹಳೆಯ 500, 1000 ರೂ. ನೋಟುಗಳು ಚಲಾವಣೆಯಲ್ಲಿ ಇದ್ದವು. ಆ ನೋಟುಗಳ ಕಂತೆಗಳನ್ನು ದೋಚುವ ದೃಶ್ಯ ಚಿತ್ರೀಕರಿಸಲಾಗಿತ್ತು. ಆದರೆ ಚಿತ್ರ ರಿಲೀಸ್‌ ಆಗುವ ಹೊತ್ತಿಗೆ ಆ ನೋಟುಗಳು ರದ್ದಾಗಿರುವುದರಿಂದ ಪ್ರೇಕ್ಷಕನಿಗೆ ಇದು ತಮಾಷೆಯಾಗಿ ಕಾಣುವ ಸಾಧ್ಯತೆಯೂ ಇದೆ. ಹೀಗಾಗಿ ನಿರ್ದೇಶಕ ಪವನ್‌ ಒಡೆಯರ್‌ ಗ್ರಾಫಿಕ್‌ನಲ್ಲಿ ಅವುಗಳನ್ನು ಬದಲಾಯಿಸುತ್ತಿದ್ದಾರೆ.

‘ದರೋಡೆಯ ದೃಶ್ಯದಲ್ಲಿನ ನೋಟುಗಳನ್ನು ಬದಲಾಯಿಸುವ ಕುರಿತು ನಿರ್ಮಾಪಕರು ಹಾಗೂ ಶರಣ್‌ ಜತೆ ಚರ್ಚಿಸಿ ನಿರ್ಧರಿಸಲಾಗಿದೆ. ಇದೀಗ 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಪಡೆದಿದ್ದು, ಸ್ಕ್ಯಾ‌ನಿಂಗ್‌ ಮಾಡಿಸಿ, ಎಲ್ಲ ದೃಶ್ಯಗಳಲ್ಲಿ ಗ್ರಾಫಿಕ್‌ ಮೂಲಕ ಬದಲಾಯಿಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ. ಆದರೂ ನಟರಾಜ ಸವೀರ್‍ಸ್‌, ತೆರೆಯ ಮೇಲೆ ಹೊಸ ನೋಟುಗಳನ್ನು ತೋರಿಸಿದ ಮೊದಲ ಚಿತ್ರ ಎನಿಸಿಕೊಳ್ಳಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಪವನ್‌ ಒಡೆಯರ್‌.

ಶರಣ್‌ ಮತ್ತು ಮಯೂರಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ನಟರಾಜ ಸವೀರ್‍ಸ್‌ ಕಾಮಿಡಿ, ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ. ಈ ಸಿನಿಮಾತಂಡಕ್ಕೆ ಮೊದಲಿನಿಂದ ಅನಿರೀಕ್ಷಿತ ಅನುಭವಗಳು ಆಗುತ್ತಲೇ ಇವೆ. ಚಿತ್ರ ಈ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ, 2 ಬಾರಿ ಬಿಡುಗಡೆ ಮುಂದೂಡಲ್ಪಟ್ಟಿದೆ. ಈಗ ರಿಲೀಸ್‌ ದಿನ ಹತ್ತಿರ ಇರುವಾಗ ನೋಟು ಬದಲಾಗಿದ್ದು ಮತ್ತೊಂದು ಹೊಸ ಅನುಭವ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>