Quantcast
Channel: VijayKarnataka
Viewing all articles
Browse latest Browse all 6795

ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌

$
0
0

*ಸೌಮ್ಯ ಅತ್ಯಾಚಾರ, ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ

ಹೊಸದಿಲ್ಲಿ: ಕೇರಳದ ಸೌಮ್ಯ ಎಂಬ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಟುವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಯಾಗಿದೆ.

ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ಕೋರ್ಟ್‌ಹಾಲ್‌ನಲ್ಲಿ ಶುಕ್ರವಾರ ಹೈಡ್ರಾಮಾ ನಡೆಯಿತು. ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾಗಿದ್ದ ನ್ಯಾ.ಕಾಟ್ಜು, ನ್ಯಾಯಾಧೀಶರ ಬೆದರಿಕೆ ತಂತ್ರಗಳಿಗೆ ತಾವು ಮಣಿಯುವುದಿಲ್ಲ. ನ್ಯಾಯಾಧೀಶರು ಕೂಡ ಸಭ್ಯತೆಯಿಂದ ವರ್ತಿಸುವುದನ್ನು ಕಲಿಯಬೇಕು ಎಂದು ಕಟು ಮಾತುಗಳಲ್ಲೇ ತಿಳಿಸಿದರು. ಕಾಟ್ಜು ಮಾತುಗಳಿಂದ ಸಿಟ್ಟಿಗೆದ್ದ ನ್ಯಾ. ಗೊಗೋಯಿ, ಕಾಟ್ಜು ಅವರನ್ನು ನ್ಯಾಯಾಲಯದಿಂದ ಹೊರಹಾಕಿಸಿದರಲ್ಲದೇ, ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದರು.

ಏನಿದು ಪ್ರಕರಣ?

ಸೌಮ್ಯ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಸುಪ್ರೀಂ ಕೋರ್ಟ್‌ನ ನ್ಯಾ. ರಂಜನ್‌ ಗೊಗೋಯಿ ನೇತೃತ್ವದ ಇದೇ ನ್ಯಾಯಪೀಠ ಸೆ.16ರಂದು ನೀಡಿದ್ದ ಆದೇಶವನ್ನು ಕಾಟ್ಜು ತಮ್ಮ ಫೇಸ್‌ಬುಕ್‌ ಬ್ಲಾಗ್‌ನಲ್ಲಿ ಕಟುವಾಗಿ ಟೀಕಿಸಿದ್ದರು.

ಫೇಸ್‌ಬುಕ್‌ ಲೇಖನವನ್ನೇ ತೀರ್ಪಿನ ಮರುಪರಿಶೀಲನಾ ಅರ್ಜಿ ಎಂದು ಪರಿಗಣಿಸಿದ್ದ ನ್ಯಾ. ಗೊಗೋಯಿ ನೇತೃತ್ವದ ನ್ಯಾಯಪೀಠ, ನ.11ರಂದು ಕಲಾಪದಲ್ಲಿ ಪಾಲ್ಗೊಂಡು, ತೀರ್ಪು ನೀಡುವಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ವಿವರಿಸುವಂತೆ ಕಾಟ್ಜು ಅವರಿಗೆ ಸೂಚನೆ ನೀಡಿತ್ತು.

ಶುಕ್ರವಾರ ನ್ಯಾಯಾಲಯ ಕಲಾಪದಲ್ಲಿ ಪಾಲ್ಗೊಂಡಿದ್ದ ನ್ಯಾ. ಕಾಟ್ಜು ಮತ್ತು ನ್ಯಾ.ಗೊಗೋಯಿ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು. ಒಂದು ಹಂತದಲ್ಲಿ ‘‘ನ್ಯಾಯಾಧೀಶರ ಬೆದರಿಕೆ ತಂತ್ರಗಳಿಗೆ ನಾನು ಮಣಿಯುವುದಿಲ್ಲ. ನ್ಯಾಯಮೂರ್ತಿಗಳು ಸಭ್ಯತೆಯಿಂದ ವ್ಯವಹರಿಸುವುದನ್ನು ಕಲಿಯಬೇಕು,’’ ಎಂದು ಕಾಟ್ಜು ಅಬ್ಬರಿಸಿದರು. ಇದರಿಂದ ಸಿಟ್ಟಿಗೆದ್ದ ನ್ಯಾಯಪೀಠ, ಕಾಟ್ಜು ಅವರನ್ನು ಕೋರ್ಟ್‌ ರೂಂನಿಂದ ಹೊರಗೆ ಕಳಿಸುವಂತೆ ಭದ್ರತಾ ಸಿಬ್ಬಂದಿಗೆ ಆದೇಶಿಸಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ.

ತಪ್ಪೇ ಮಾಡದವರು ಯಾರಿದ್ದಾರೆ...?

ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಅನೇಕರ ನಿದ್ದೆಗೆಡಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇ ಕಾಟ್ಜು ಅವರ ಹಾಜರಾತಿ ಅಪಾರ ಕುತೂಹಲಕ್ಕೆ ಕಾರಣವಾಗಿತ್ತು.

ಕಾಟ್ಜು ಬರುವರೆಂದು ತಿಳಿದು ಸುಪ್ರೀಂ ಕೋರ್ಟ್‌ ಆವರಣದ ಮುಂದೆ ಕ್ಯಾಮರಾಮನ್‌ಗಳ ದೊಡ್ಡ ದಂಡೇ ಜಮಾಯಿಸಿತ್ತು. ಕಾಟ್ಜು ಅವರು ನಿಗದಿಗಿಂತ ಸಾಕಷ್ಟು ಮುಂಚಿತವಾಗಿಯೇ ಬಂದರು. ಬಿಗಿಭದ್ರತೆಯೊಂದಿಗೆ ಅವರನ್ನು ಕೋರ್ಟ್‌ರೂಂ 6ಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೂ ವಕೀಲರು ಹಾಗೂ ಮಾಧ್ಯಮದವರ ದೊಡ್ಡ ದಂಡೇ ಇತ್ತು.

ಪ್ರಕರಣದ ವಿಚಾರಣೆ ಶುರುವಾಗಿ ಮಾರ್ಕಾಂಡೇಯ ಕಾಟ್ಜು ಅವರು ತಮ್ಮ ಮಾತು ಶುರುಹಚ್ಚಿಕೊಂಡರು.

‘‘ನ್ಯಾಯಾಧೀಶರು ತಪ್ಪುಗಳನ್ನು ಮಾಡಲೇಬಾರದು ಎಂದೇನೂ ಇಲ್ಲ. ಇದಕ್ಕೆ ಯಾರೂ ಅತೀತರಲ್ಲ. ನಾನೂ ಬಹುದೊಡ್ಡ ತಪ್ಪುಗಳನ್ನು ಮಾಡಿದ್ದೇನೆ. ನನ್ನ ತೀರ್ಪುಗಳಲ್ಲೂ ತಪ್ಪು ಎಸಗಿದ್ದೇನೆ. ಅವು ಈಗಲೂ ನನ್ನತ್ತ ಬೊಟ್ಟು ಮಾಡುತ್ತವೆ. ಅದೇ ರೀತಿ ನೀವೂ ತಪ್ಪುಗಳನ್ನು ಮಾಡಿದ್ದೀರಿ,’’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾ. ಗಗೋಯ್‌, ‘‘ಜಸ್ಟೀಸ್‌ ಕಾಟ್ಜು, ನಮಗೆ ಅವನ್ನೆಲ್ಲ ನೆನಪು ಮಾಡಬೇಡಿ. ನಾವೂ ದೋಷಾತೀತರಲ್ಲ ಎಂಬುದು ಎಂಬ ಅರಿವು ನಮಗಿದೆ. ನಾವು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುದನ್ನು ತಿಳಿಸಿ,’’ ಎಂದು ತಾಕೀತು ಮಾಡಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>