Quantcast
Channel: VijayKarnataka
Viewing all articles
Browse latest Browse all 6795

ನಾಗರ ಹಾವು ಚಿತ್ರ ವಿಮರ್ಶೆ: ವಿಷ್ಣುವಿನ ನಾಗ ಸ್ಮರಣೆ

$
0
0

ಕನ್ನಡ ಚಿತ್ರ

* ಶರಣು ಹುಲ್ಲೂರು

ನಾನಾ ಕಾರಣಗಳಿಂದಾಗಿ ‘ನಾಗರಹಾವು’ ಚಿತ್ರ ನಿರೀಕ್ಷೆ ಮೂಡಿಸಿತ್ತು. ವಿಷ್ಣುವರ್ಧನ್ ಅವರನ್ನು ಈ ಚಿತ್ರಕ್ಕಾಗಿ ಮರುಸೃಷ್ಟಿ ಮಾಡಲಾಗಿದ್ದರಿಂದ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿತ್ತು. ಒಂದಷ್ಟು ಕೊರತೆಗಳ ನಡುವೆಯೂ ನಾಗರಹಾವು ಬುಸುಗುಡುತ್ತದೆ. ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ವಿಷ್ಣುವರ್ಧನ್, ಅಭಿಮಾನಿಗಳ ಮನ ತಣಿಸುವಲ್ಲಿ ಮತ್ತೆ ಯಶಸ್ವಿಆಗಿದ್ದಾರೆ. ಅಷ್ಟರ ಮಟ್ಟಿಗೆ ವಿಷ್ಣು ಮರುಸೃಷ್ಟಿ ಮೋಡಿ ಮಾಡುತ್ತದೆ.

ಐತಿಹಾಸಿಕ ಮತ್ತು ಪೌರಾಣಿಕ ಕತೆಗಳನ್ನು ಸಿನಿಮಾ ಮಾಡುವುದರಲ್ಲಿ ನಿರ್ದೇಶಕ ಕೋಡಿ ರಾಮಕೃಷ್ಣ ಸಿದ್ಧಹಸ್ತರು. ನಾಗರಹಾವು ಚಿತ್ರಕ್ಕಾಗಿಯೂ ಅವರು ಅಂಥದ್ದೇ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿವ್ಯಕಳಸಕ್ಕಾಗಿ ನಾಗನಿಕಾ ಮತ್ತು ಅಘೋರ ಅಧಿಪತಿಯ ನಡುವಿನ ಸೆಣಸಾಟದ ಕತೆ ಹೇಳುತ್ತಲೇ, ಪ್ರೇಮಕತೆಯ ಸ್ಪರ್ಶವನ್ನೂ ನೀಡುತ್ತಾರೆ. ಹಾಗಾಗಿ ಒಂದೇ ಚಿತ್ರದಲ್ಲಿ ಎರಡೆರಡು ಸಿನಿಮಾ ನೋಡಿದಂತಹ ಅನುಭವ ಸಿಗುತ್ತದೆ.

ಅನೇಕ ಕಾರಣಗಳಿಂದಾಗಿ ಚಿತ್ರವು ವಿಶೇಷ ಅನಿಸುತ್ತದೆ. ಆಯ್ದುಕೊಂಡಿರುವ ಕತೆಯು ಕಾಲ್ಪನಿಕದ್ದಾದರೂ, ಅದನ್ನು ನಿಜ ಎನ್ನುವಂತೆ ಗ್ರಾಫಿಕ್ಸ್ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಆಗಾಗ್ಗೆ ಕಾಣಿಸಿಕೊಳ್ಳುವ ಗ್ರಾಫಿಕ್ಸ್ ಕುಸುರಿ ಮತ್ತು ವಿಷ್ಣುವರ್ಧನ್ ಅವರ ಮರುಸೃಷ್ಟಿ ನಾಗರಹಾವಿಗೆ ಜೀವ ತುಂಬಿದೆ. ವಿಷ್ಣುವರ್ಧನ್‌ಗಾಗಿ ಹಾಡೊಂದನ್ನು ಅರ್ಪಿಸಿದ್ದಾರೆ ನಿರ್ದೇಶಕರು. ಆ ಹಾಡಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಕತೆಗೂ ಆ ಹಾಡಿಗೂ ಸಂಬಂಧವಿಲ್ಲದೇ ಇದ್ದರೂ, ಅಭಿಮಾನಿಗಳ ಖುಷಿಗಾಗಿ ಕುಣಿದಂತಿದೆ ದರ್ಶನ್. ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದು ರಮ್ಯಾ. ಮಾನಸ ಮತ್ತು ನಾಗಲಿಕಾ ಎನ್ನುವ ಎರಡು ಪಾತ್ರಗಳನ್ನು ಅವರಿಲ್ಲಿ ನಿರ್ವಹಿಸಿದ್ದಾರೆ. ಎರಡೂ ಪಾತ್ರಗಳಲ್ಲೂ ಅವರದ್ದು ಮನೋಜ್ಞ ನಟನೆ. ನಿಜಕ್ಕೂ ರಮ್ಯಾ ಮೋಹಕ ತಾರೆಯಂತೆ ಕಂಗೊಳಿಸಿದ್ದಾರೆ. ಕ್ಲೈಮ್ಯಾಕ್ ್ಸನಲ್ಲಿ ಕಾಣಿಸಿಕೊಳ್ಳುವ ವಿಷ್ಣುವರ್ಧನ್ ನಿಜಕ್ಕೂ ಸಾಹಸ ಸಿಂಹನಂತೆಯೇ ಘರ್ಜಿಸಿದ್ದಾರೆ.

ಸಿನಿಮಾದ ದೊಡ್ಡ ಮೈನಸ್ ಪಾಯಿಂಟ್ ಅಂದರೆ, ಎರಡು ಕಾಲದ ಕತೆಯನ್ನು ಬೆರಕೆ ಮಾಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಹಾಗಾಗಿ ಕಥಾ ಹಂದರ ಸರಾಗವಾಗಿ ಸಾಗುವುದಿಲ್ಲ. ದೃಶ್ಯದಿಂದ ದೃಶ್ಯಕ್ಕಿರಬೇಕಿದ್ದ ಕೊಂಡಿ ಕಾಣೆಯಾಗಿದೆ. ಹಾಗಾಗಿ ಬಿಡಿ ಬಿಡಿ ದೃಶ್ಯಗಳನ್ನೇ ಸಿನಿಮಾ ಅಂದುಕೊಂಡು ಸವಿಯಬೇಕಷ್ಟೆ. ರಾಕ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ದಿಗಂತ್, ಸಿನಿಮಾ ಶುರುವಿಗೆ ಮಿಂಚುತ್ತಾರೆ. ಸೆಕೆಂಡ್ ಹಾಫ್‌ನಲ್ಲಿ ಹಾಗೆಯೇ ಮಸುಕಾಗುತ್ತಾರೆ. ಶಿವಯ್ಯನಾಗಿ ಸಾಯಿಕುಮಾರ್, ನಾಯಕನ ತಂದೆಯಾಗಿ ರಮೇಶ್ ಭಟ್, ಖಳನಟನ ಪಾತ್ರಧಾರಿ ರವಿ ಕಾಳೆ ಆಯಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.ಗುರುಕಿರಣ್ ಅವರ ಸಂಗೀತದಲ್ಲಿ ಕೇಳಿ ಬರುವ ಹಾಡುಗಳು ಸಿನಿಮಾದ ಓಟಕ್ಕೇನೂ ಸಹಾಯ ಮಾಡಲ್ಲ. ಹಾಡಾಗಿಯೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹೆಚ್.ಸಿ ವೇಣು ಅವರ ಸಿನಿಮಾಟೋಗ್ರಫಿ ಸಿನಿಮಾದ ಮತ್ತೊಂದು ಶಕ್ತಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>