Quantcast
Channel: VijayKarnataka
Viewing all articles
Browse latest Browse all 6795

ನವಜಾತ ಶಿಶುವಿಗೆ ಹಾಲುಣಿಸದಂತೆ ತಡೆದ ಧರ್ಮಾಂಧ ತಂದೆ

$
0
0

ಕೋಯಿಕ್ಕೋಡ್: ಕೇರಳದ ಧರ್ಮಾಂಧ ತಂದೆ, ಮಗು ಜನಿಸಿ 24 ತಾಸು ಕಳೆದರೂ ಎದೆಹಾಲು ಕುಡಿಸಲು ತಾಯಿಗೆ ಅವಕಾಶ ನೀಡಿಲ್ಲ.

ಮುಕ್ಕೊಮ್‌ನ ಇಎಂಎಸ್‌ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಅಬೂಬಕರ್‌ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಸಂಜೆ 7.30ರವರೆಗೆ ಮಗುವಿಗೆ ಹಾಲುಣಿಸಲು ಆತ ಅವಕಾಶ ನೀಡಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಮಗು ಜನಿಸಿದ ಬಳಿಕ ಐದು ಆಜಾನ್‌ ಆಗುವವರೆಗೂ ಹಾಲುಣಿಸಬಾರದೆಂಬ ಧರ್ಮಬೋಧಕರ ನಿರ್ದೇಶನದ ಮೇರೆಗೆ ಆತ, ಮಗುವಿಗೆ ಹಾಲುಣಿಸಲು ಪತ್ನಿಗೆ ಅವಕಾಶ ನೀಡಿರಲಿಲ್ಲ. ಪಟ್ಟು ಬಿಡಿದ ಅಬೂಬಕರ್‌ ವಿರುದ್ಧ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್‌ ಅಧಿಕಾರಿ ಸಹ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಸಂಬಂಧ ರಾಜ್ಯ ಮಕ್ಕಳ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದೆ.

'ರಾತ್ರಿ 7.30ರ ನಂತರ ಆತ ಪತ್ನಿಯನ್ನು ಬಲವಂತವಾಗಿ ಆಸ್ಪತ್ರೆಯಿಂದ ಕರೆದುಕೊಂಡು ಹೋದ. ಆಮೇಲೆ ಏನಾಯಿತು ತಿಳಿಯಲಿಲ್ಲ. ಮಗುವಿನ ರಕ್ತ ಪರೀಕ್ಷೆ ನಡೆಸಲು ಸಹ ಕುಟುಂಬ ಸದ್ಯರು ಅವಕಾಶ ನೀಡಲಿಲ್ಲ,'ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಸಂಬಂಧಿಕರೊಬ್ಬರ ಮನವೊಲಿಸಿದ ನಂತರ ಅಬೂಬಕರ್‌ಗೆ ತಿಳಿಯದಂತೆ ಮಗುವಿಗೆ ಹಾಲುಣಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

'ಹೊಕ್ಕಳ ಬಳ್ಳಿಯಲ್ಲಿರುವ ಪೌಷ್ಟಿಕಾಂಶಗಳು ಮಗು 24 ತಾಸು ಬದುಕುಳಿಯಲು ಸಾಕಾಗುತ್ತದೆ' ಎಂದು ಅಬೂಬಕರ್‌ ಹೇಳಿದ್ದಾನೆ.

'ಮಗುವಿನ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗದು,'ಎಂದು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿ ಕೆ.ನಾಜಿರ್‌ ಹೇಳಿದ್ದಾರೆ.

Dad denies newborn breast milk: A newborn was denied breast milk for over 24 hours after delivery at EMS Hospital, Mukkom here reportedly for religious reasons.


Viewing all articles
Browse latest Browse all 6795

Trending Articles


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಕಾರಿನಲ್ಲೇ 19 ದೇಶ ಸುತ್ತಿದ್ದಾರೆ ಈ ದಂಪತಿ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>