Quantcast
Channel: VijayKarnataka
Viewing all articles
Browse latest Browse all 6795

ಸಾರ್ವಜನಿಕ ಉದ್ದಿಮೆ ಉಳಿಸಲು ಕೇಂದ್ರಕ್ಕೆ ಒತ್ತಾಯ

$
0
0

-ಜೆಎಎಫ್‌ ಅಡಿ ಕಾರ್ಮಿಕರ ಬೃಹತ್‌ ಪ್ರತಿಭಟನೆ-

ಬೆಂಗಳೂರು: ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿಗಳಿಂದ ಷೇರು ಹಾಗೂ ಹೂಡಿಕೆಯನ್ನು ಹಿಂತೆಗೆದುಕೊಳ್ಳದಂತೆ ಬಿಇಎಂಎಲ್‌ ಸಹಿತ ನಾನಾ ಕಾರ್ಖಾನೆಗಳ ಸಿಬ್ಬಂದಿಗಳು ಜಂಟಿ ಕ್ರಿಯಾ ಸಮಿತಿ(ಜೆಎಎಫ್‌) ಅಡಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ನಗರದ ಪುರಭವನದ ಮುಂದೆ ಬುಧವಾರ ಸಮಿತಿಯ ಕಾರ್ಯಕರ್ತರು 'ಸಾರ್ವಜನಿಕ ಉದ್ದಿಮೆ ಉಳಿಸಿ; ಭಾರತ ಉಳಿಸಿ' ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಕೈಗೊಂಡಿರುವ ನಿಲುವನ್ನು ಪ್ರತಿಭಟನಾಕಾರರು ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಬಾಗಿಲು ಮುಚ್ಚಲು ಎನ್‌ಡಿಎ ಸರಕಾರ ಚಿತಾವಣೆ ನಡೆಸಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಸ್ವಾಮ್ಯದ ಕಂಪನಿಗಳು ದೇಶ ಕಟ್ಟುವಲ್ಲಿ ಹೆಚ್ಚಿನ ಕಾಣಿಕೆ ನೀಡಿದೆ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ, ಆರ್ಥಿಕತೆ ಹೆಚ್ಚಳಕ್ಕೆ ಕಾರಣವಾಗಿದೆ. ಇಂತಹ ಹಿನ್ನೆಲೆಯುಳ್ಳ ಕಂಪನಿಗಳ ಕಾರ್ಯನಿರ್ವಹಣೆಗೆ ಹೆಗಲು ನೀಡದ ಸರಕಾರ, ಕಾರ್ಪೊರೇಟ್‌ ಲಾಬಿಗೆ ಮಣಿದು ಬೇಜವಾಬ್ದಾರಿ ನಿಲುವನ್ನು ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರ್ಧಾರ ಕೈಬಿಡಲು ಒತ್ತಾಯ

ಜೆಎಎಫ್‌ ಸಂಚಾಲಕ ಮೀನಾಕ್ಷಿ ಸುಂದರಂ ಮಾತನಾಡಿ ''ಎನ್‌ಡಿಎ ಸರಕಾರ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಪುನಶ್ಚೇತನಗೊಳಿಸದೆ ಧನಿಕ ಉದ್ದಿಮೆದಾರರಿಗೆ ಮಾರಾಟ ಮಾಡುವ ಚಾಳಿಗೆ ಬಿದ್ದಿದೆ. ಹಿಂದೆ ಪ್ರಧಾನಿ ವಾಜಪೇಯಿ ಅವಧಿಯಲ್ಲಿ ನಷ್ಟದಲ್ಲಿದ್ದ ಕಂಪನಿಗಳಿಂದ ಸರಕಾರಿ ಷೇರು ಹಾಗೂ ಹಣ ಹಿಂತೆಗೆತಗೊಂಡಿದ್ದನ್ನು ನಂತರ ಬಂದಂತಹ ಯುಪಿಎ ಸರಕಾರ ತಡೆ ಹಾಕಿತ್ತು. ಈಗ ಮತ್ತೆ ಎನ್‌ಡಿಎ ಸರಕಾರ ಲಾಭದಲ್ಲಿರುವ ಕಂಪನಿಗಳನ್ನು ಕಾರ್ಪೊರೇಟ್‌ ಧಣಿಗಳಿಗೆ ಮಾರಾಟ ಮಾಡುವ ಹೀನ ಕೆಲಸದಲ್ಲಿ ನಿರತವಾಗಿದೆ,'' ಎಂದು ದೂರಿದರು.

''ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರಕಾರ ಹೊಂದಿರುವ 56,500 ಕೋಟಿ ರೂ. ಹೂಡಿಕೆಯನ್ನು ಹಿಂತೆಗೆಯುವುದಾಗಿ ಪ್ರಕಟಿಸಿದೆ. ಇದರ ಜತೆಗೆ ಕಂಪನಿಗಳಿಗೆ ಸೇರಿದ ಭೂಮಿ, ಕಟ್ಟಡ ಹಾಗೂ ಉತ್ಪಾದನಾ ಘಟಕಗಳನ್ನು ಬಿಕರಿ ಮಾಡುವ ಘೋಷಣೆ ಮಾಡಿದೆ. ಇದು ವಿದೇಶಿ ಬಂಡವಾಳ ಹೂಡುವವರಿಗೆ ಅವಕಾಶ ಮಾಡಿಕೊಡಲು ಸರಕಾರ ಕೈಗೊಂಡಿರುವ ಕಾರ್ಮಿಕ ವಿರೋಧಿ ನೀತಿಯಾಗಿದೆ. ಬಂಡವಾಳ ಹೂಡಿಕೆ ಹಿಂತೆಗೆತ ಕೈಬಿಟ್ಟು ಪುನಶ್ಚೇತನಕ್ಕೆ ಮುಂದಾಗದಿದ್ದಲ್ಲಿ ಕಾರ್ಮಿಕ ಸಂಘಟನೆಗಳು ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಿದೆ,'' ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಮುಖಂಡರಾದ ಡಿ.ವಿಜಯ್‌ಕುಮಾರ್‌, ಶ್ರೀನಿವಾಸ ರೆಡ್ಡಿ ಮತ್ತಿತರರಿದ್ದರು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>