Quantcast
Channel: VijayKarnataka
Viewing all articles
Browse latest Browse all 6795

ಭಾರತ-ಪಾಕ್ ಗಡಿಯಲ್ಲಿ ಆತಂಕ: ನೌಕಾಪಡೆಯಿಂದ ಕವಾಯತು

$
0
0

ಹೊಸದಿಲ್ಲಿ: ಅದೆಷ್ಟೇ ತೇಪೆ ಹಾಕಲು ಯತ್ನಿಸಿದರೂ, ಭಾರತ-ಪಾಕಿಸ್ತಾನ ಸಂಬಂಧ ದಿನೆ ದಿನೇ ಹದಗೆಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಭಾರತ ಸಾಕಷ್ಟು ಭದ್ರತೆ ಹೆಚ್ಚಿಸಿದ್ದು, ಎಂಥದ್ದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸೇನೆ ಸನ್ನದ್ಧವಾಗುತ್ತಿದೆ.

ಭಾರತೀಯ ನೌಕಾ ಪಡೆಯೂ ಎದುರಾಗಬಹುದಾದ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದ್ದು, ಸೇನೆ ಹಾಗೂ ವಾಯು ಪಡೆಯೂ ತಕ್ಕ ಸಿದ್ಧತೆಗಳನ್ನು ಪೂರೈಸಿಕೊಂಡಿದೆ.

ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲಿ ನೌಕಾ ಪಡೆ ಈಗಾಗಲೇ ಗಸ್ತು ತಿರುಗುತ್ತಿದ್ದು, ಮುಂದಿನ ವಾರದಿಂದ ದೊಡ್ಡ ಕವಾಯತು ನಡೆಸಲಿದೆ. ಯುದ್ಧದಂಥ ಪರಿಸ್ಥಿತಿ ಎದುರಿಸಲೂ ಅನುಕೂಲವಾಗುವಂತೆ 40 ಯುದ್ಧ ನೌಕೆಗಳು, ಸಬ್‌ಮರೈನ್‌ಗಳೊಂದಿಗೆ ಫೈಟರ್ ಜೆಟ್, ಗಸ್ತು ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತದೆ. ಪೂರ್ವ ಭಾಗದಲ್ಲಿಯೂ ಗಸ್ತು ನಡೆಸುತ್ತಿದ್ದು, ವೈರಿಗಳು ನುಸುಳಬಹುದಾದ ಸಾಧ್ಯತೆ ಇರುವುದರಿಂದ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

ರಕ್ಷಣಾ ಸಚಿವಾಲಯ ಈ ಕವಾಯತು ಹಾಗೂ ಗಸ್ತು ಕಾರ್ಯಕ್ಕೆ ತುರ್ತು ಆರ್ಥಿಕ ಅನುದಾನ ಬಿಡುಗಡೆ ಮಾಡಿದ್ದು, ಇದನ್ನು ಬಳಸುವ ಅಧಿಕಾರವನ್ನು ಮೂರು ಪಡೆಗಳ ಮುಖ್ಯಸ್ಥರಾದ ಲೆ.ಜ.ಬಿಪಿನ್ ರಾವತ್, ಏರ್ ಮಾರ್ಷಲ್ ಬಿ.ಎಸ್.ಧಾನೋವಾ ಮತ್ತು ವೈಸ್ ಅಡ್ಮಿರಲ್ ಕೆ.ಬಿ.ಸಿಂಗ್‌ ಅವರಿಗೆ ನೀಡಲಾಗಿದೆ. ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು, ಪರೀಶೀಲಿಸಲು ವಿಶೇಷ ಸಮಿತಿಯೊಂದನ್ನೂ ರಚಿಸಲಾಗಿದೆ.

ಪಾಕಿಸ್ತಾನ ಸೇನಾ ಮುಖ್ಯಸ್ಥರಾದ ಜ.ರಹೀಲ್ ಶರೀಫ್ ಗಡಿ ಕ್ರಿಯಾ ತಂಡದ ಮೂಲಕ ಯಾವುದೇ ಕಾರ್ಯಾಚರಣೆಗೂ ಆದೇಶಿಸುವ ಸಾಧ್ಯತೆಯಿದೆ. ನವೆಂಬರ್‌ನಲ್ಲಿ ಇವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಮುಂದಿನ ಮುಖ್ಯಸ್ಥ ಆಯ್ಕೆ ವಿಚಾರವಾಗಿ ಗೊಂದಲಗಳಿದ್ದು, ಅದನ್ನು ಜೀವಂತವಾಗಿಡಲು ರಹೀಲ್ ಏನು ಬೇಕಾದರೂ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದ ಭಾರತೀಯ ಸೇನೆ ಮುಂಜಾಗ್ರತ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>